ಜಲವಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ನಾರಾಯಣ (ಜಯಂತ) ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಕೇಶವ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಲವಳ್ಳಿ ಸೊಸೈಟಿಯ ಮುಂದಿನ ಐದು ವರ್ಷಗಳ ಅವಧಿಗೆ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಹಿಂದಿನ ಅವಧಿಯ ಅಧ್ಯಕ್ಷರಾಗಿದ್ದ ನಾರಾಯಣ ನಾಯ್ಕ ನೇತೃತ್ವದ ತಂಡ ಎಲ್ಲಾ 11 ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವುದನ್ನು ಖಾತ್ರಿಪಡಿಸಿಕೊಂಡಿತ್ತು. ನಿರೀಕ್ಷೆಯಂತೆಯೇ ಬುಧವಾರ ನಡೆದ ಅಧ್ಯಕ್ಷ … [Read more...] about ಜಲವಳ್ಳಿ ವಿ.ಎಸ್.ಎಸ್.ಅಧ್ಯಕ್ಷರಾಗಿ ನಾರಾಯಣ ನಾಯ್ಕ ಉಪಾಧ್ಯಕ್ಷರಾಗಿ ಕೇಶವ ಗೌಡ ಅವಿರೋಧ ಆಯ್ಕೆ.
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಲೋಕಕಲ್ಯಾಣರ್ಥವಾಗಿ ಉಪ್ಪೂಣಿಯ ಚಾಮುಂಡೇಶ್ವರಿ ಸನ್ನದಿಯಲ್ಲಿ ನಡೆಯಿತು ಶತಚಂಡಿಕಾಯಾಗ. ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಶ್ರೀ ಬಹ್ಮಾನಂದ ಸರದ್ವತಿ ಸ್ವಾಮಿಜಿಯವರ ಪಾಲ್ಗೊಂಡು ಆರ್ಶಿವಚನ.
ಹೊನ್ನಾವರ ತಾಲೂಕಿನಲ್ಲಿ ನಂಬಿ ಬರುವ ಭಕ್ತರ ಬಯಕೆಯನ್ನು ಈಡೇರಿಸುತ್ತಾಳೆ ಎನ್ನುವ ಪ್ರತಿತಿ ಹೊಂದಿರುವ ಉಪ್ಪೋಣಿಯ ಶ್ರೀ ಚಾಮುಂಡೇಶ್ವರಿ ಪರಿವಾರ ದೇವರ ಸನ್ನಿದಿಯಲ್ಲಿ ಕಳೆದ 3 ದಿನಗಳಿಂದ ಆರಂಭವಾದ ಪುನರ್ ಪ್ರತಿಷ್ಟಾಪನಾ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡ ವಾರ್ಷಿಕ ವರ್ಧಂತಿ ಉತ್ಸವ ಶತಚಂಡಿಕಾ ಯಾಗದ ಪೂರ್ಣಾಹುತಿ ಕಾರ್ಯಕ್ರಮ ಬುಧವಾರ ನಡೆಯಿತು. ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಯವರು … [Read more...] about ಲೋಕಕಲ್ಯಾಣರ್ಥವಾಗಿ ಉಪ್ಪೂಣಿಯ ಚಾಮುಂಡೇಶ್ವರಿ ಸನ್ನದಿಯಲ್ಲಿ ನಡೆಯಿತು ಶತಚಂಡಿಕಾಯಾಗ. ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಶ್ರೀ ಬಹ್ಮಾನಂದ ಸರದ್ವತಿ ಸ್ವಾಮಿಜಿಯವರ ಪಾಲ್ಗೊಂಡು ಆರ್ಶಿವಚನ.
ಹ್ಯಾವ್ಲೆಟ್ ಪೆಕ್ಕಾಡ್ ಕಂಪನಿಯಿಂದ ಕ್ಯಾಂಪಸ್ ಸಂದರ್ಶನ; 9 ವಿದ್ಯಾರ್ಥಿಗಳು ಆಯ್ಕೆ
ಹೊನ್ನಾವರ /ಸ್ಥಳೀಯ ಎಸ್. ಡಿ. ಎಂ. ಪದವಿ ಕಾಲೇಜಿನಲ್ಲಿ ಪ್ಲೇಸ್ಮೆಂಟ್ ಸೆಲ್ನ ಆಶ್ರಯದಲ್ಲಿ ಬೆಂಗಳೂರು ಮೂಲದ ಪ್ರತಿಷ್ಠಿತ ಹ್ಯಾವ್ಲೆಟ್ ಪೆಕ್ಕಾಡ್ ಕಂಪನಿಯ ವತಿಯಿಂದ ಹುದ್ದೆಗಳಿಗಾಗಿ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಯಿತು. ಅಂತಿಮ ವರ್ಷದ ಪದವಿ ತರಗತಿಗಳಲ್ಲಿ ಓದುತ್ತಿರುವ ಆಸಕ್ತ ಒಟ್ಟೂ 215 ವಿದ್ಯಾರ್ಥಿಗಳು ಆಯ್ಕೆ ಪ್ರಕ್ರಿಯೆಗೆ ಒಳಪಟ್ಟು, ಕಂಪನಿ ನಡೆಸಿದ ಪರೀಕ್ಷೆ ಉ. ಆ. & ಊ. ಖ. ರೌಂಡ್ಗಳಿಗೆ ಒಳಪಟ್ಟು ಅಂತಿಮವಾಗಿ 9 ವಿದ್ಯಾರ್ಥಿಗಳು ಆಯ್ಕೆಯಾಗಿ 10 … [Read more...] about ಹ್ಯಾವ್ಲೆಟ್ ಪೆಕ್ಕಾಡ್ ಕಂಪನಿಯಿಂದ ಕ್ಯಾಂಪಸ್ ಸಂದರ್ಶನ; 9 ವಿದ್ಯಾರ್ಥಿಗಳು ಆಯ್ಕೆ
ಸಾಗರಮಾಲಾ ಬಂದರು ವಿಸ್ತರಣೆ ಪುನರ್ ಪರಿಶೀಲನೆಗೆ ಸ್ವರ್ಣವಲ್ಲೀ ಶ್ರೀಗಳ ಆಗ್ರಹ.
ಶಿರಸಿ/ ಕೇಂದ್ರ ಸರ್ಕಾರ ಕಾರವಾರದಲ್ಲಿ ಕೈಗೊಂಡಿರುವ ಸಾಗರಮಾಲಾ ಬಂದರು ವಿಸ್ತರಣೆ ಹಾಗೂ ಅಲೆ ತಡೆಗೋಡೆ ಯೋಜನೆಯನ್ನು ಅಲ್ಲಿನ ಮೀನುಗಾರರ ಹಿತದೃಷ್ಟಿಯಿಂದ ಪುನರ್ ಪರಿಶೀಲಿಸುವಂತೆ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಸ್ವರ್ಣವಲ್ಲೀ ಶ್ರೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರವಾರ ಬಂದರು ವಿಸ್ತರಣಾ ಯೋಜನೆ ಬಗ್ಗೆ ಕಾರವಾರದ ಮೀನುಗಾರರು … [Read more...] about ಸಾಗರಮಾಲಾ ಬಂದರು ವಿಸ್ತರಣೆ ಪುನರ್ ಪರಿಶೀಲನೆಗೆ ಸ್ವರ್ಣವಲ್ಲೀ ಶ್ರೀಗಳ ಆಗ್ರಹ.
ಫೆ.1 ರಿಂದ ಮೈಸೂರು ರಂಗಾಯಣದ ರಂಗ ಕಲಾವಿದರಿಂದ ನಾಟಕೋತ್ಸವ.
ಯಲ್ಲಾಪುರ /ಅಡಿಕೆ ವ್ಯವಹಾರಸ್ಥರ ಸಂಘ, ರಂಗ ಸಹ್ಯಾದ್ರಿ ಇವರ ಆಶ್ರಯದಲ್ಲಿ ಪಟ್ಟಣದ ಗಾಂಧಿ ಕುಟೀರದಲ್ಲಿ ಫೆ.1, 2, 3 ರಂದು ಮೈಸೂರು ರಂಗಾಯಣದ ರಂಗ ಸಂಚಾರಿ ರಂಗ ಘಟಕದ ಕಲಾವಿದರಿಂದ ನಾಟಕೋತ್ಸವ 2019-20 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಎಂ. ಆರ್. ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.ಅವರು ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡುತ್ತಿದ್ದರು. ಉತ್ಸವವನ್ನು ಫೆ.1 … [Read more...] about ಫೆ.1 ರಿಂದ ಮೈಸೂರು ರಂಗಾಯಣದ ರಂಗ ಕಲಾವಿದರಿಂದ ನಾಟಕೋತ್ಸವ.




