ಜೋಯಿಡಾ - ಮಹಾಮಾರಿ ಕರೋನಾ ವೈರಸ್ ದೇಶದೆಲ್ಲೆಡೆ ಹಬ್ಬುತ್ತಿರುವ ಕುರಿತು ಜೋಯಿಡಾ ತಹಶೀಲ್ದಾರ ಆದೇಶದ ಮೇರೆಗೆ ಜೋಯಿಡಾ ತಾಲೂಕಿನ ಪ್ರಸಿದ್ಧ ದೇವಾಲಯ ಶ್ರೀ ಕ್ಷೇತ್ರ ಉಳವಿ ಸರ್ಕಾರದ ಮುಂದಿನ ಆದೇಶ ಬರುವ ವರೆಗೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಉಳವಿ ಟ್ರಸ್ಟ್ ಕಮಿಟಿ ತಿಳಿಸಿದೆ. ಕರೋನಾ ವೈರಸ್ ಬರದಂತೆ ತಡೆಗಟ್ಟಲು ಈ ಕ್ರಮ ಕೈಗೊಂಡಿದ್ದು ,ಶ್ರೀ ಕ್ಷೇತ್ರ ಉಳವಿ ಉತ್ತರ ಕರ್ನಾಟಕ ಜನರ ಪ್ರಸಿದ್ದ ದೇವಾಲಯವಾಗಿದ್ದು ದಿನವೂ ಸಾವಿರಾರು ಭಕ್ತರು ಇಲ್ಲಿ … [Read more...] about ಶ್ರೀ ಕ್ಷೇತ್ರ ಉಳವಿ ದೇವಸ್ಥಾನ ಕೆಲ ದಿನಗಳ ಕಾಲ ಬಂದ
Joida
ಉಳವಿಯಲ್ಲಿ ಕರೋನಾ ವೈರಸ್ ಬಗ್ಗೆ ಮಾಹಿತಿ
ಜೋಯಿಡಾ ; ಜೋಯಿಡಾ ತಾಲೂಕಿನ ಶ್ರೀ ಕ್ಷೇತ್ರ ಉಳವಿಯಲ್ಲಿ ಕರೋನಾ ವೈರಸ್ ಬಗ್ಗೆ ಉಳವಿ ಗ್ರಾಮ ಪಂಚಾಯತ್ ವತಿಯಿಂದ ಧ್ವನಿವರ್ಧಕ ದ ಮೂಲಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಊರುಗಳಿಗೆ ಹೋಗಿ ಸೂಕ್ತ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉಳವಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ ಮೋಕಾಶಿ ಕರೋನಾ ಎಂಬುದು ದೊಡ್ಡ ರೋಗ. ಇದನ್ನು ನಿಯಂತ್ರಣದಲ್ಲಿ ಇರಬೇಕಾದರೆ ನಾವು ಮುನ್ನಚ್ಚರಿಕೆ ವಹಿಸಬೇಕು. ಕೈ ಕಾಲುಗಳನ್ನು ತೊಳೆದು ಆಹಾರ ಸೇವಿಸಬೇಕು. ಹಾಗೂ ನಮ್ಮ … [Read more...] about ಉಳವಿಯಲ್ಲಿ ಕರೋನಾ ವೈರಸ್ ಬಗ್ಗೆ ಮಾಹಿತಿ
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಆಗ್ರಹ- ತಹಶಿಲ್ದಾರ್ ಅವರಿಗೆ ಮನವಿ
ಜೋಯಿಡಾ ; ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಬ್ಬಾಳ ಮತು ನೇತುರ್ಗಾ ಗ್ರಾಮಗಳಿಗೆ ಹೆಬ್ಬಾಳ ಶಾಲೆಯಲ್ಲಿ ಮತಗಟ್ಟೆ ಸ್ಥಾಪನೆ, ಖಾಯಂ ಶಿಕ್ಷಕರ ನೇಮಕ, ರಸ್ತೆ, ವಿದ್ಯುತ್ ಸಂಪರ್ಕಕ್ಕೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಸ್ಪಂದಿಸದಿದ್ದರೆ ಮತದಾನ ಭಹಿಷ್ಕರಿಸುವುದಾಗಿ ಎಚ್ಚರಿಸಿರುತ್ತಾರೆ. ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಬ್ಬಾಳ ಹಾಗೂ ನೆತುರ್ಗಾ ಗ್ರಾಮ ಉಳವಿಯಿಂದ 5 ರಿಂದ 8ಕಿ.ಮೀ. ದೂರವಿದೆ. ಈ ಎರಡೂ … [Read more...] about ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಆಗ್ರಹ- ತಹಶಿಲ್ದಾರ್ ಅವರಿಗೆ ಮನವಿ
ಹಳಿಯಾಳ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟ
ಹಳಿಯಾಳ : ಹಳಿಯಾಳ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಬಿಸಿಎ)-ಅ ಗೆ ಮೀಸಲಾಗಿದ್ದರೇ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದೆ. 23 ಸದಸ್ಯ ಬಲದ ಹಳಿಯಾಳ ಪುರಸಭೆಯ ಆಡಳಿತ ಮಂಡಳಿಗೆ ಕಳೆದ ಒಂದೂವರೆ ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ 14 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೇಸ್ ಪಕ್ಷ ಸ್ಪಷ್ಟ ಬಹುಮತ ಸಾಧಿಸಿದ್ದರೇ ಬಿಜೆಪಿ-7 ಸ್ಥಾನ, ಜೆಡಿಎಸ್-1 ಹಾಗೂ ಪಕ್ಷೇತರ … [Read more...] about ಹಳಿಯಾಳ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟ
ಜೋಯಿಡಾ ಕೋಳಿ ಪಾರ್ಮಗಳಲ್ಲಿ ಕರೋನಾ ಭೀತಿ ಇಲ್ಲ- ಡಾ ರವೀಂದ್ರ.
ಜೋಯಿಡಾ- ಜೋಯಿಡಾ ತಾಲೂಕಿನ ಕೋಳಿ ಪಾರ್ಮಗಳಲ್ಲಿ ಕರೋನಾ ರೋಗ ದ ಭೀತಿ ಇಲ್ಲ ಎಂದು ಜೋಯಿಡಾ ಪಶು ಇಲಾಕೆ ತಾಲೂಕಾ ವೈಧ್ಯಾಧಿಕಾರಿ ರವೀಂದ್ರ ಹುಜರತ್ತಿ ತಿಳಿಸಿದ್ದಾರೆ. ಅವರು ಬುಧವಾರ ದಂದು ಜೋಯಿಡಾ ಗ್ರಾ.ಪಂ.ವ್ಯಾಪ್ತಿಯ ಹುಡಸಾ ಬಳಿಯ ಕೋಳಿ ಪಾರ್ಮಗೆ ಬೇಟಿ ನೀಡಿ ಕರೋನಾ ವೈರಸ್ ಬಗ್ಗೆ ಪರೀಕ್ಷೆ ನಡೆಸಿ ಯಾವುದೇ ತೊಂದರೆ ಇಲ್ಲ ಎಂಬ ಮಾಹಿತಿ ನೀಡಿದರು. ಅಲ್ಲದೇ ಇತ್ತಿಚಿನ ದಿನಗಳಲ್ಲಿ ಕೋಳಿಯಿಂದಲೇ ಕರೋನಾ ವೈರಸ್ ಹರಡುತ್ತಿದೆ ಎಂಬುದು ತಪ್ಪು ಮಾಹಿತಿ . ಜೋಯಿಡಾ … [Read more...] about ಜೋಯಿಡಾ ಕೋಳಿ ಪಾರ್ಮಗಳಲ್ಲಿ ಕರೋನಾ ಭೀತಿ ಇಲ್ಲ- ಡಾ ರವೀಂದ್ರ.