ಯಲ್ಲಾಪುರ:ಪಟ್ಟಣದ ಐ.ಬಿ ಪಕ್ಕದಲ್ಲಿರುವ ಮಕ್ಕಳ ಉದ್ಯಾನವನದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ವಿಷನ್ ಜನ ಪ್ರದೇಶಾಭಿವೃದ್ಧಿ ಸಂಸ್ಥಾನ ಮತ್ತು ರಂಗ ಸಹ್ಯಾದ್ರಿ ಬಳಗದ ವತಿಯಿಂದ ಕನ್ನಡ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ ಧ್ವಜಾರೋಹಣ ನೆರವೇರಿಸಿದರು.ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ರಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್ ಗಾಂವ್ಕರ್, ಪ.ಪಂ ಸದಸ್ಯರಾದ ಸತೀಶ ನಾಯ್ಕ, ಪ್ರಶಾಂತ ತಳವಾರ, ವಿಷನ್ ಬಳಗದ ಕೇಬಲ್ ನಾಗೇಶ, … [Read more...] about ಮಕ್ಕಳ ಉದ್ಯಾನವನದಲ್ಲಿ ಕನ್ನಡ ಧ್ವಜಾರೋಹಣ;ಮಾಸ್ಕ್ ಜಾಗೃತಿ ಜಾಥಾ
Yellapur
ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಅಪೂರ್ವ ಕ್ಷಣ;ಇದರ ಶ್ರೇಯ ತಾಲೂಕಿನ ಜನರಿಗೆ ಸಲ್ಲಬೇಕು-ಎನ್.ಎಸ್. ಹೆಗಡೆ
ಯಲ್ಲಾಪುರ:ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಅಪೂರ್ವ ಕ್ಷಣ. ಇದರ ಶ್ರೇಯ ತಾಲೂಕಿನ ಜನರಿಗೆ ಸಲ್ಲಬೇಕು ಎಂದು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸಹಕಾರಿ ಧುರೀಣ ಎನ್.ಎಸ್. ಹೆಗಡೆ ಕುಂದರಗಿ ಹೇಳಿದರು.ಅವರು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡಿದ್ದ 65 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸಹಕಾರಿ ಧುರೀಣ … [Read more...] about ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಅಪೂರ್ವ ಕ್ಷಣ;ಇದರ ಶ್ರೇಯ ತಾಲೂಕಿನ ಜನರಿಗೆ ಸಲ್ಲಬೇಕು-ಎನ್.ಎಸ್. ಹೆಗಡೆ
ಅಕ್ರಮ ಜಾನುವಾರು ಸಾಗಾಟ ; ಐವರ ಬಂಧನ
ಯಲ್ಲಾಪುರ:ಯಾವುದೇ ಪರವಾನಗಿ ಇಲ್ಲದೇ, ಅಕ್ರಮವಾಗಿ ಲಾರಿಯೊಂದರಲ್ಲಿ ಸಾಗಿಸಲಾಗುತ್ತಿದ್ದ 9 ಜಾನುವಾರುಗಳನ್ನು ಭಾನುವಾರ ಪಟ್ಟಣದ ಜೋಡುಕೆರೆ ಬಳಿ ಪೊಲೀಸರು ರಕ್ಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಿದ್ದಾರೆ.ಬಂಧಿತರನ್ನು ಮಂಗಳೂರಿನ ಮಹಮ್ಮದ್ ಹುಸೇನ್ ಮೊವಾರಿ ಅಬ್ಬಾ, ಸಾದಿಕ್ ಇದಿನಬ್ಬಾ, ಬಾತೀಶ ಅಬ್ದುಲ್ ರಜಾಕ್, ಮಹಮ್ಮದ್ ಅರಫಾತ್ ಅಬ್ದುಲ್ ಖಾದರ್ ಹಾಗೂ ಮಹಮ್ಮದ್ ಹನೀಫ್ ಗುಡೆಮನೆ ಖಾದರಸಾಬ್ ಎಂದು ಗುರುತಿಸಲಾಗಿದೆ.ಇವರು ಬಲಿ ಕೊಡುವ … [Read more...] about ಅಕ್ರಮ ಜಾನುವಾರು ಸಾಗಾಟ ; ಐವರ ಬಂಧನ
ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷ ರಿಂದ ಸಿಡಿಪಿಒಗಳ ಸಭೆ
ಯಲ್ಲಾಪುರ : ಕೊರೊನಾ ಲಾಕ್ಡೌನ್ ನಂತರದಲ್ಲಿ ಮಕ್ಕಳ ಮೇಲಿನ ವಿವಿಧ ರೀತಿಯ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು ಈ ಕುರಿತು ರಾಷ್ಟ್ರೀಯ , ರಾಜ್ಯ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಗಳು ನಡೆಯುತ್ತಿದೆ. ಲಾಕ್ಡೌನ್ ಸಮಯದಲ್ಲಿ ಮಕ್ಕಳು ಮನೆಯಲ್ಲಿಯೇ ಉಳಿಯುವುದರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವುದು, ಬಾಲ್ಯ ವಿವಾಹಗಳಿಗೆ ಸಿಲುಕುವುದು, ಬಾಲ ಕಾರ್ಮಿಕರಾಗುವಂತಹ ಸಮಸ್ಯೆಗಳಿಂದ ಮಕ್ಕಳನ್ನು ರಕ್ಷಿಸಬೇಕಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ … [Read more...] about ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷ ರಿಂದ ಸಿಡಿಪಿಒಗಳ ಸಭೆ
ಹೆಸ್ಕಾಂ ಅಧೀಕ್ಷಕ ಅಭಿಯಂತರ ಟಿ.ಪಿ ಶೆಟ್ಟಿ ಬೀಳ್ಕೊಡುಗೆ ಸಮಾರಂಭ
ಯಲ್ಲಾಪುರ : 35 ವರ್ಷಗಳ ವೃತ್ತಿ ಜೀವನದ ಸುಧೀರ್ಘ ಪಯಣದಲ್ಲಿ ಹಿಂದೆ ಕೆಇಬಿ ಎಂದಿದ್ದ ವಿದ್ಯುತ್ ಇಲಾಖೆಯ ವೃತ್ತಿಗೆ ಬಳ್ಳಾರಿ ಜಿಲ್ಲೆಗೆ ನೇಮಕಗೊಂಡು ನಂತರದ ದಿನಗಳಲ್ಲಿ ಕುಮಟಾ, ಹೊನ್ನಾವರ, ಶಿರಸಿ, ಬಾಗಲಕೋಟೆಗಳ್ಲಿ ಕೆಲಸ ಮಾಡುತ್ತಾ ಇಂದು ನಿವೃತ್ತಿ ಹೊಂದುತ್ತಿದ್ದೇನೆ. ನನ್ನ ಯಶಸ್ವಿ ಪಯಣದ ಹಿಂದೆ ನನೊಂದಿಗೆ ಬೆರೆತು ವೃತ್ತಿ ನಿಭಾಯಿಸಿ ಕೈ ಜೋಡಿಸಿದ ಅಂದಿನ ಕೆಇಬಿ ಯಿಂದ ಇಂದಿನ ಹೆಸ್ಕಾಂವರೆಗಿನ ಎಲ್ಲಾ ಸಿಬ್ಬಂದಿ ವರ್ಗ, ವಿದ್ಯುತ್ ಗುತ್ತಿಗೆದಾರರು ಹಾಗೂ … [Read more...] about ಹೆಸ್ಕಾಂ ಅಧೀಕ್ಷಕ ಅಭಿಯಂತರ ಟಿ.ಪಿ ಶೆಟ್ಟಿ ಬೀಳ್ಕೊಡುಗೆ ಸಮಾರಂಭ




