ಹೊನ್ನಾವರ ;ಕಡಲ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ದೋಣಿ ಮಗುಚಿ ಮೃತಪಟ್ಟ ಘಟನೆ ತಾಲೂಕಿನ ಮಂಕಿ ಮಡಿ ಸಮೀಪದ ಕಡಲಿನಲ್ಲಿ ಸಂಭವಿಸಿದೆ. ಮಂಕಿ ದೇವರಗದ್ದೆಯ ನಿವಾಸಿ ಕೃಷ್ಣ ಖಾರ್ವಿ (29) ಮೃತಪಟ್ಟ ಮೀನುಗಾರ. ಒಟ್ಟೂ 8 ಜನ ಒಂದೇ ದೋಣಿಯಲ್ಲಿ ತೆರಳಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿ ಮಗುಚಿ ದುರ್ಘಟನೆ ಸಂಭವಿಸಿದೆ. ಇನ್ನುಳಿದ 7 ಮೀನುಗಾರರನ್ನು ಸ್ಥಳೀಯ ಮೀನುಗಾರರು ತಕ್ಷಣ ನೆರವಿಗೆ ಮುಂದಾಗಿ ರಕ್ಷಿಸಿದ್ದಾರೆ. ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ದೋಣಿ ಮಗುಚಿ ಸಾವು