ನಮ್ಮ ಸಂವಿಧಾನ ಅತ್ಯಂತ ಮಹತ್ವದ ದಾಖಲೆಯಾಗಿದ್ದು ಅದರಲ್ಲಿನ ತತ್ವ, ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಹಾಗು ಆದರ್ಶಗಳನ್ನು ಪಾಲಿಸುವ ಅಗತ್ಯ ಪ್ರತಿಯೊಬ್ಬ ಪ್ರಜೆಯದು ಎಂದು ಕರ್ನಾಟಕ ರಾಜ್ಯ ಅಡ್ವೊಕೇಟ್ ಜನರಲ್ ಶ್ರೀ ಪ್ರಭುಲಿಂಗ ನಾವದಗಿ ಹೇಳಿದರು.ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರಿನ ವಾರ್ತಾ ಶಾಖೆ-ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ಸಂವಿಧಾನ ದಿನದ ಅಂಗವಾಗಿ ಆಯೋಜಿಸಿದ್ದ “ಸಂವಿಧಾನ: ಪ್ರಜಾಪ್ರಭುತ್ವದ ಅಡಿಪಾಯ” ವೆಬಿನಾರ್ ನಲ್ಲಿ … [Read more...] about ಸಂವಿಧಾನದ ಆದರ್ಶಗಳನ್ನು ಪಾಲಿಸುವ ಅಗತ್ಯವಿದೆ: ಶ್ರೀ ಪ್ರಭುಲಿಂಗ ನಾವದಗಿ
Trending
ಜಲಜೀವನ್ ಮಿಷನ್: 2.6 ಕೋಟಿ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ಕೊಳವೆ ಸಂಪರ್ಕ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಉತ್ತರ ಪ್ರದೇಶದ ವಿಂಧ್ಯಾಚಲ ಪ್ರಾಂತ್ರ್ಯದ ಮಿರ್ಜಾಪುರ ಮತ್ತು ಸೋನ್ಭದ್ರಾ ಜಿಲ್ಲೆಗಳಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.ಅಲ್ಲದೆ ಪ್ರಧಾನಮಂತ್ರಿ ಅವರು, ಗ್ರಾಮೀಣ ನೀರು ಮತ್ತು ನೈರ್ಮಲೀಕರಣ ಸಮಿತಿ/ಪಾನಿ ಸಮಿತಿ ಸದಸ್ಯರೊಂದಿಗೆ ಕಾರ್ಯಕ್ರಮದ ವೇಳೆ ಸಂವಾದ ನಡೆಸಿದರು. ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೆಖಾವತ್, ಉತ್ತರ … [Read more...] about ಜಲಜೀವನ್ ಮಿಷನ್: 2.6 ಕೋಟಿ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ಕೊಳವೆ ಸಂಪರ್ಕ
ಕಿರು ನೀರಾವರಿ ನಿಧಿಯಿಂದ ಬಡ್ಡಿ ರಿಯಾಯತಿ ಸಾಲ ಬಿಡುಗಡೆ
ನಬಾರ್ಡ್ ನಲ್ಲಿ ರೂಪಿಸಲಾದ 5000 ಕೋ.ರೂ.ಗಳ ಮೂಲನಿಧಿಯ ಕಿರು ನೀರಾವರಿ ನಿಧಿ 2019-20 ರಲ್ಲಿ ಕಾರ್ಯಾರಂಭ ಮಾಡಿದೆ. ರಾಜ್ಯಗಳು ಕಿರು ನೀರಾವರಿ ವ್ಯಾಪ್ತಿಯನ್ನು ವಿಸ್ತರಿಸಲು ವಿಶೇಷ ಮತ್ತು ನವೀನ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಬಡ್ಡಿ ರಿಯಾಯತಿಯ ಸಾಲವನ್ನು ಒದಗಿಸುವುದು ಈ ನಿಧಿಯ ಉದ್ದೇಶವಾಗಿದೆ.ಜೊತೆಗೆ ಪಿ.ಎಂ.ಕೆ.ಎಸ್.ವೈ.-ಅಡಿಯಲ್ಲಿ ಲಭ್ಯ ಇರುವ ಅವಕಾಶಗಳ ಮಿತಿಯನ್ನು ದಾಟಿ ಹನಿ ನೀರಿಗೆ ಹೆಚ್ಚು ಬೆಳೆ ಬೆಳೆಯುವಂತೆ ರೈತರನ್ನು ಉತ್ತೇಜಿಸುವುದಕ್ಕಾಗಿ … [Read more...] about ಕಿರು ನೀರಾವರಿ ನಿಧಿಯಿಂದ ಬಡ್ಡಿ ರಿಯಾಯತಿ ಸಾಲ ಬಿಡುಗಡೆ
10 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶಗಳ ಸೃಷ್ಟಿ: ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್
ಕೇಂದ್ರ ಆಹಾರ ಸಂಸ್ಕರಣಾ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಅಂತರ ಸಚಿವಾಲಯ ಮಂಜೂರಾತಿ ಸಮಿತಿ (ಐ.ಎಂ.ಎ.ಸಿ.) ಸಭೆಯಲ್ಲಿ ಸಿ.ಇ.ಎಫ್.ಪಿ.ಪಿ.ಸಿ. ಯೋಜನೆ ಅಡಿಯಲ್ಲಿ ಎಂ.ಒ.ಎಫ್.ಪಿ.ಐ. ಬೆಂಬಲಿತ 107.42 ಕೋ.ರೂ.ಗಳ ಅನುದಾನದೊಂದಿಗೆ ಒಟ್ಟು 320.33 ಕೋ.ರೂ.ಗಳ ಮೊತ್ತದ 28 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳು 10 ರಾಜ್ಯಗಳ ವ್ಯಾಪ್ತಿಯಲ್ಲಿದ್ದು ಸುಮಾರು 10,000 ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ.ಅವಶ್ಯಕ … [Read more...] about 10 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶಗಳ ಸೃಷ್ಟಿ: ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್
ಸೇತುವೆ ಸೇತುವೆ ಮೇಲಿಂದ ಪಲ್ಟಿಯಾದ ಕಾರು, ಒರ್ವ ಸಾವು ಮೂವರ ಸ್ಥಿತಿ ಗಂಭಿರ
ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಹಡಿನಬಾಳದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನವೊಂದು ಸೇತುವೆ ಕೆಳಗೆ ಸಿನಿಮೀಯ ರೀತಿಯಲ್ಲಿ ಪಲ್ಟಿಯಾಗಿ ಓರ್ವ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಗುರುವಾರ ಬೆಳಿಗಿನ ಜಾವ ಸಂಭವಿಸಿದೆ.ಶಿವಮೊಗ್ಗದಿಂದ ಹೊನ್ನಾವರ ಮಾರ್ಗವಾಗಿ ಗೋವಾಕ್ಕೆ ಚಲಿಸುತ್ತಿದ್ದ ಎರಡು ಯುವ ಜೋಡಿಗಳು ಕರೆದೊಯ್ಯುತ್ತಿದ್ದ ಕಾರ್ ಹಡಿನಬಾಳ ಸೇತುವೆ ಎಡಭಾಗದಲ್ಲಿಂದ ರಸ್ತೆ ಬಿಟ್ಟು ಸೇತುವೆ ಅಡಿಯಲ್ಲಿರುವ ರಸ್ತೆಗೆ ಬಿದ್ದಿದೆ. … [Read more...] about ಸೇತುವೆ ಸೇತುವೆ ಮೇಲಿಂದ ಪಲ್ಟಿಯಾದ ಕಾರು, ಒರ್ವ ಸಾವು ಮೂವರ ಸ್ಥಿತಿ ಗಂಭಿರ




