• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶ್ರೀಧರ ವಚನಾಮೃತ ಧಾರೆ, ಲೋಕಾರ್ಪಣೆ ಮಂಗಲ – ಆರಾಧನೆ

April 6, 2017 by Gaju Gokarna Leave a Comment

shridhar swami aradh 9Atey

ಹೊನ್ನಾವರ:

ಹೊನ್ನಾವರ ಎ. 06 : ವಿಭೂತಿ ಪುರುಷರೆಂದು ದೇಶದಲ್ಲಿ ಪ್ರಸಿದ್ಧಿಗಳಿಸಿದ್ದ ಶ್ರೀ ಶ್ರೀಧರ ಸ್ವಾಮಿಗಳ ಪ್ರವಚನಗಳ ಶ್ರೀಧರ ವಚನಾಮೃತ ಧಾರೆಯ 14, 15ನೇ ಕೊನೆಯ ಕಂತು ದಿನಾಂಕ 13ರಂದು ಗುರುವಾರ ರಾಮತೀರ್ಥದ ಶ್ರೀಧರ ಪಾದುಕಾ ಮಂದಿರದಲ್ಲಿ ಲೋಕಾರ್ಪಣೆಯಾಗಲಿದ್ದು, ಶ್ರೀಧರರ ಆರಾಧನಾ ಮಹೋತ್ಸವ ಅಂದು ನಡೆಯಲಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ದೇಗಲೂರಿನಲ್ಲಿ 7-12-1908ರಲ್ಲಿ ಜನಿಸಿದ ಶ್ರೀಧರರು ಆಧ್ಯಾತ್ಮದ ಒಲವಿನಿಂದ ಸಮರ್ಥ ರಾಮದಾಸರ ಸಮಾಧಿಗೆ ಸೇವೆ ಸಲ್ಲಿಸಲು ಆರಂಭಿಸಿದರು. ಅಲ್ಲಿಂದ ಪ್ರೇರಿತರಾಗಿ ಉತ್ತರ ಕನ್ನಡದ ಸಿರ್ಸಿ ಸೀಗೆಹಳ್ಳಿಗೆ ಬಂದು ಸನ್ಯಾಸ ಸ್ವೀಕರಿಸಿ, ಆಸೇತು ಹಿಮಾಚಲ ಸಂಚರಿಸಿ, ಆಧ್ಯಾತ್ಮ ಸಂದೇಶ ನೀಡಿದರು. ತಮ್ಮ ಕೊನೆಯ ದಿನಗಳಲ್ಲಿ ಸಾಗರದ ವರದಹಳ್ಳಿಗೆ ಬಂದು ನೆಲೆಸಿದ್ದರು. 19-04-1973ರಂದು ಇಹಲೋಕ ತ್ಯಜಿಸಿದರು.
1955ರಲ್ಲಿ ಅವರ ಶಿಷ್ಯೆಯಾಗಿ ಸೇವೆಗೆ ತೊಡಗಿಕೊಂಡ ಸಿದ್ಧಾಪುರದ ಜಾನಕಮ್ಮ ಮತ್ತು 1960ರಲ್ಲಿ ಶ್ರೀಧರರ ಆಪ್ತ ಶಿಷ್ಯರಾಗಿ ಸೇವೆಗೆ ತೊಡಗಿಕೊಂಡ ಹೊನ್ನಾವರ ಸಾಲ್ಕೋಡಿನ ಜನಾರ್ಧನ ಭಟ್ ಶ್ರೀಧರರ ಜೀವಿತದ ಕೊನೆಯವರೆಗೂ ಅವರ ಸೇವೆಯಲ್ಲಿದ್ದರು. ನಂತರ ಹೊನ್ನಾವರ ರಾಮತೀರ್ಥಕ್ಕೆ ಬಂದು ಅಲ್ಲಿ ಅರ್ಚಕರಾಗಿದ್ದ ಸುಬ್ಬಾ ಭಟ್ಟರ ನೆರವಿನಿಂದ ಶ್ರೀಧರರು ಹಿಂದೆ ಉಳಿದುಕೊಂಡಿದ್ದ ಕುಟೀರದಲ್ಲಿ ಉಳಿದುಕೊಂಡರು. ಶ್ರೀಧರರ ಪಾದುಕೆಯನ್ನಿಟ್ಟು ನಿರಂತರ ಅಭಿಷೇಕ, ಪೂಜೆ ಮಾಡುತ್ತಾ ತಮ್ಮಷ್ಟಕ್ಕೆ ಉಳಿದುಕೊಂಡರು. ಈ ಅವಧಿಯಲ್ಲಿ ಅವರು ಶ್ರೀಧರರ ಚಿಂತನೆಗಳು ಶಾಶ್ವತವಾಗಿ ಉಳಿಯುವಂತೆ ಪುಸ್ತಕ ರೂಪದಲ್ಲಿ ಪ್ರಕಟಿಸುವ ಮಹತ್ಕಾರ್ಯ ಮಾಡಿದ್ದು, ಕೊನೆಯ ಕೃತಿಗಳು 13ರಂದು ಲೋಕಾರ್ಪಣೆಯಾಗಲಿವೆ. 18ವರ್ಷಗಳಲ್ಲಿ ಧ್ವನಿ ರೂಪದಲ್ಲಿದ್ದ ಶ್ರೀಧರರ ಪ್ರವಚನಗಳನ್ನು ಕೃತಿ ರೂಪದಲ್ಲಿ ತಂದ ಮಹಾಮಹೋಪಾಧ್ಯಾಯ ಶ್ರೀ ಸೋ.ತಿ. ನಾಗರಾಜ ಮತ್ತು ಅವರಿಗೆ ಸಹಕರಿಸಿದ ವೆಂಕಟ್ರಮಣ ಟಿ. ಭಟ್ಟ ಮತ್ತು ವೆಂಕಟ್ರಮಣ ಡಿ. ಭಟ್ಟ, ಮುದ್ರಿಸಿದ ಬಿ.ಎನ್. ನಟರಾಜ ಇವರ ಶ್ರಮ, ದಾನಿಗಳ ಕೊಡುಗೆ, ಜನಾರ್ಧನ ಮತ್ತು ಜಾನಕಮ್ಮ ಇವರ ತ್ಯಾಗದಿಂದಾಗಿ ಶ್ರೀಧರ ವಾಙ್ಮಯ ಶಾಶ್ವತವಾಗಿ ಉಳಿಯುವಂತಾಗಿದೆ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, National News Tagged With: ಉತ್ತರ ಕನ್ನಡ, ಮಹೋತ್ಸವ, ರಾಮತೀರ್ಥ, ಶ್ರೀಧರ ವಚನಾಮೃತ, ಹೊನ್ನಾವರ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...