ಹೊನ್ನಾವರ:
ದಿನಾಂಕ : 8-04-2017 ಶನಿವಾರ ಬೆಳಿಗ್ಗೆ ಸಂಸ್ಕøತಿ ಕುಂಭ- ಮಲೆನಾಡ ಉತ್ಸವ-2017 ರ 4ನೇ ದಿನದಂದು ಉತ್ತರಕನ್ನಡ ಜಿಲ್ಲೆಯ ಗೇರುಸೊಪ್ಪದ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರ ಆಶ್ರಯದಲ್ಲಿ ಉಚಿತ ಆರೋಗ್ಯ ಮಾಹಿತಿ ಮತ್ತು ತಪಾಷಣಾ ಶಿಬಿರ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಶ್ರೀನಿವಾಸ ವೈಧ್ಯಕೀಯ ಕಾಲೇಜಿನ ಮಾನಸಿಕ ರೋಗದ ವಿಶೇಷ ತಜ್ಷರಾದ ಡಾ|| ಸರ್ವೇಶ ರವರು ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ಸಲಹೆ, ಚಿಂತೆ ಹಾಗೂ ಮಾನಸಿಕ ಒತ್ತಡದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಈ ಶಿಬಿರದ ಲಾಭವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಡೆದರು.
ನಂತರ ಶಂಕರ ನೇತ್ರಾಲಯದ ಕಣ್ಣಿನ ತಜ್ಞರು ಹಾಗೂ ಎಸ್ ಜೆ. ಎಂ. ದಂತ ವಿದ್ಯಾಲಯ ಚಿತ್ರದುರ್ಗದ ಪ್ರೊಪೇಸರ್ ಡಾ|| ನಾಗರಾಜ ಡಿ. ರವರು ಪಾಲ್ಗೊಂಡಿದ್ದು ಕಣ್ಣಿನ ಪೊರೆ ತಪಾಷಣೆ, ಹಲ್ಲಿನ ಹಾಗೂ ದವಡೆ ಹಲ್ಲಿನ ತಪಾಷಣೆ ನಡೆಸಿದ್ದು, ಲತೇಶ ಹಾಗೂ ಶಂಕರ ರವರು ಕೌನ್ಸಲಿಂಗ್ ನಡೆಸಿಕೊಟ್ಟರು. ಶ್ರೀ ರಾಘವೇಂದ್ರ, ಶ್ರೀ ರವಿ, ಶ್ರೀ ರಾಮ ಮತ್ತು ಶ್ರೀ ಮೂರ್ತಿ ತಂಡದವರು ರಕ್ತ ತಪಾಷಣೆ ನಡೆಸಿಕೊಟ್ಟರು. ಹಾವೇರಿಯಿಂದ ಶ್ರೀಯುತ ಹನುಮಂತರವರು ‘ವಡತz’À ಔಷಧಿಗಳನ್ನು ಕಳುಹಿಸಿದ್ದು ಎಲ್ಲಾ ಔಷಧಿಗಳನ್ನು ಶ್ರೀ ರವಿಯವರ ನೇತ್ರತ್ವದಲ್ಲಿ ವಿತರಿಸಲಾಯಿತು. ಒಟ್ಟಿನಲ್ಲಿ ಈ ಆರೋಗ್ಯ ತಪಾಷಣಾ ಶಿಬಿರವು ಯಶಸ್ವಿಯಾಗಿ ನೆರೆವೇರಿತು.
Leave a Comment