ದಾಂಡೇಲಿ :
ಸ್ಥಳೀಯ ಗಾಂಧಿನಗರದ ಶ್ರೀ.ಛತ್ರಪತಿ ಶಿವಾಜಿ ಯುವ ಸೇವಾ ಟ್ರಸ್ಟ್ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶನಿವಾರ ಶಿವಾಜಿ ಜಯಂತಿ ಮತ್ತು ಬಸವ ಜಯಂತಿ ಕಾರ್ಯಕ್ರಮವನ್ನು ಗಾಂಧಿನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಿಂದು ಜಾಗರಣಾ ವೇದಿಕೆಯ ಪ್ರಮುಖ ಸುಧೀರ ಶೆಟ್ಟಿಯವರು ಹಿಂದು ಧರ್ಮದ ವೀರಕೇಸರಿಯಾಗಿದ್ದ ಛತ್ರಪತಿ ಶಿವಾಜಿಯವರ ತತ್ವಾದರ್ಶ ಮತ್ತು ಶೌರ್ಯ ಎಲ್ಲರಿಗೂ ಅನುಕರಣೀಯ. ಅದೇ ರೀತಿ ವಚನಗಳ ಮೂಲಕ ಸಮಾಜವನ್ನು ತಿದ್ದಿ ತೀಡಿದ ಬಸವಣ್ಣ ಈ ನಾಡು ಕಂಡ ದಾರ್ಶನಿಕ ವ್ಯಕ್ತಿ. ಇವರಿಬ್ಬರ ಜೀವನಾದರ್ಶಗಳನ್ನು ಮೈಗೂಡಿಸಿ ಹಿಂದು ಧರ್ಮ ಮತ್ತು ಹಿಂದು ಸಂಘಟನೆಯನ್ನು ಸದೃಢಗೊಳಿಸುವ ಕಾರ್ಯ ನಡೆಯುತ್ತಿದೆ. ನಮ್ಮನ್ನು ರಾತ್ರಿ ಹಗಲು ಕಾಯುವ ಸೈನಿಕರ ಬಗ್ಗೆ ಗೌರವವನ್ನು ಇಟ್ಟುಕೊಳ್ಳಬೇಕು. ರಾಷ್ಟ್ರೀಯತೆಯನ್ನು ಮೈಗೂಡಿಸಿ ಸುಸಂಸ್ಕøತ ಬಲಿಷ್ಟ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಅಣಿಯಾಗಬೇಕೆಂದರು.
ನಗರ ಪೊಲೀಸ್ ಠಾಣೆಯ ಪಿಎಸೈ ಕುಮಾರ್ ಹಾಡಕರ ಅವರು ಛತ್ರಪತಿ ಶಿವಾಜಿಯವರ ಹೋರಾಟ ಮತ್ತು ಧರ್ಮ ಸಂಘಟನೆ ಸ್ಮರಣೀಯ. ಎಲ್ಲರ ಮನಸ್ಸಲ್ಲಿ ಮತ್ತು ಮನೆಯಲ್ಲಿ ಶಿವಾಜಿ ಅಮರವಾಗಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ವಕೀಲ ವಿಶ್ವನಾಥ ಜಾಧವ, ಮರಾಠಾ ಸಮಾಜದ ಅಧ್ಯಕ್ಷ ವಿಠ್ಠಲ ಬೈಲೂರಕರ್, ಪ್ರೋಬೆಷನರಿ ಪಿಎಸೈ ಬಸವರಾಜ, ಹಿರಿಯ ಸಮಾಜ ಸೇವಕ ಶಿವಪ್ಪಾ ನಾಯ್ಕ ಶಿವಾಜಿ ಮತ್ತು ಬಸವ ಜಯಂತಿಯ ಬಗ್ಗೆ ಮಾತನಾಡಿದರು. ನಗರ ಸಭೆಯ ಅಧ್ಯಕ್ಷ ಎನ್.ಜಿ.ಸಾಳೊಂಕೆ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಸಂದೇಶ್.ಎಸ್.ಜೈನ್ ಸ್ವಾಗತಿಸಿ, ವಂದಿಸಿದರು. ಸಂಜೆ ಶ್ರೀ.ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯ ಭವ್ಯ ಶೋಭಾ ಯಾತ್ರೆಯು ಗಾಂಧಿನಗರದಿಂದ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಕಾರ್ಯಕ್ರಮದ ಯಶಸ್ಸಿಗೆ ಶ್ರೀ.ಛತ್ರಪತಿ ಶಿವಾಜಿ ಯುವ ಸೇವಾ ಟ್ರಸ್ಟ್ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಸಹಕರಿಸಿದರು.
29ದಾಂಡೇಲಿ4-ಶಿವಾಜಿ ಜಯಂತಿ ಮತ್ತು ಬಸವ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಹಿಂದು ಜಾಗರಣಾ ವೇದಿಕೆಯ ಪ್ರಮುಖ ಸುಧೀರ ಶೆಟ್ಟಿಯವರು ಮಾತನಾಡುತ್ತಿರುವುದು.
Leave a Comment