ಕಾರವಾರ:
ಛಲ, ನಿಷ್ಠೆ ಮತ್ತು ನಿರಂತರ ಪರಿಶ್ರಮಕ್ಕೆ ರಾಜರ್ಷಿ ಭಗೀರಥ ಅನ್ವರ್ಥವಾಗಿದ್ದು, ಈ ಹಿನ್ನೆಲೆಯಲ್ಲಿಯೇ ಭಗೀರಥ ಪ್ರಯತ್ನ ಎಂಬ ನುಡಿ ಚಾಲ್ತಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮಂಗಳವಾರ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಭಗೀರಥ ಜಯಂತಿ ಹಾಗೂ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಗೀರಥ ತನ್ನ ಛಲ ಪರಿಶ್ರಮದಿಂದ ಗಂಗೆಯನ್ನು ಭೂಲೋಕಕ್ಕೆ ಕರೆತಂದ ಪ್ರತೀತಿಯಿದೆ. ಇಂತಹ ಛಲ ಮತ್ತು ಪರಿಶ್ರಮ ನಮಗೂ ಸ್ಪೂರ್ತಿಯಾಗಬೇಕಿದೆ. ಪೌರಾಣಿಕ ಮಹಾಪುರುಷರಿಂದ ಕಲಿಯಬೇಕಾದುದು ಬಹಳಷ್ಟಿದೆ ಎಂದು ಹೇಳಿದರು.
ಆದ್ಯ ವಚನಕಾರನಾಗಿರುವ ದೇವರ ದಾಸಿಮಯ್ಯ ವಚನಗಳ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣರಾದವರು. ಕಾಯಕವನ್ನೇ ಕೈಲಾಸ ಎಂದು ಸಾರಿದ ವಚನಕಾರರು ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಕುರಿತು ತಮ್ಮ ವಚನಗಳ ಮೂಲಕ ಸಾರಿದವರು. ವಚನಕಾರರ ನುಡಿಗಳು ಎಂದಿಗೂ ಪ್ರಸ್ತುತವಾಗಿವೆ ಎಂದರು.
ದೇವರ ದಾಸಿಮಯ್ಯ ಕುರಿತಾಗಿ ಉಪನ್ಯಾಸಕಿ ಶ್ರೀದೇವಿ ಕೆರಮನೆ ಮಾತನಾಡಿ, ಸಮಾಜದ ಮೇಲು ಕೀಳು, ಅಸಮಾನತೆ ಕುರಿತು ದೇವರ ದಾಸಿಮಯ್ಯ ಅವರು ತಮ್ಮ ವಚನಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.
ರಾಜರ್ಷಿ ಭಗೀರಥ ಕುರಿತು ಮಾತನಾಡಿದ ಉಪನ್ಯಾಸಕ ವೆಂಕಟೇಶ ಗಿರಿ, ತನ್ನ ನಿರಂತರ ತಪಸ್ಸು ಹಾಗೂ ಪರಿಶ್ರಮದ ಮೂಲಕ ಸಾಕ್ಷಾತ್ ಗಂಗೆಯನ್ನೇ ಭೂಮಿಗೆ ಕರೆತಂದ ಮಹಾನ್ ವ್ಯಕ್ತಿತ್ವ ಭಗೀರಥ. ಉಪ್ಪಾರ ಸಮಾಜದ ಆರಾಧ್ಯ ದೈವವಾಗಿರುವ ಭಗೀರಥ, ಛಲ ಪರಿಶ್ರಮಕ್ಕೆ ಮಾದರಿಯಾಗಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಶಫಿ ಸಾದುದ್ದೀನ್ ಸ್ವಾಗತಿಸಿದರು. ಗಣೇಶ ಬಿಷ್ಠಣ್ಣನವರ್ ಕಾರ್ಯಕ್ರಮ ನಿರೂಪಿಸಿದರು.
ಆಕರ್ಷಕ ಮೆರವಣಿಗೆ: ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಗೀರಥ ಹಾಗೂ ದೇವರದಾಸಿಮಯ್ಯ ಅವರ ಭಾವಚಿತ್ರದ ಮೆರವಣಿಗೆಗೆ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಅವರು ದೀಪ ಬೆಳಗಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಕಲಾವಿದರ ತಾಷಾರಾಮ್ಡೋಲ್ ತಂಡ, ಮಹಿಳೆಯರ ಬುಡಕಟ್ಟು ಕುಣಿತ, ಧಾರವಾಡದ ಜಗ್ಗಲಿಗೆ ಕಲಾವಿದರು, ಗದಗಿನ ಡೊಳ್ಳು ಕುಣಿತ, ಅಮದಳ್ಳಿಯ ಕಲಾವಿದರ ಸುಗ್ಗಿ ಕುಣಿತ ಆಕರ್ಷಕವಾಗಿದ್ದವು. ಕಳಸ ಹೊತ್ತ ಮಹಿಳೆಯರು ಮೆರವಣಿಗೆಗೆ ಮೆರಗು ತಂದರು.
ಭಗೀರಥ ತನ್ನ ಛಲ ಪರಿಶ್ರಮದಿಂದ ಗಂಗೆಯನ್ನು ಭೂಲೋಕಕ್ಕೆ ಕರೆತಂದ ಪ್ರತೀತಿಯಿದೆ. ಇಂತಹ ಛಲ ಮತ್ತು ಪರಿಶ್ರಮ ನಮಗೂ ಸ್ಪೂರ್ತಿಯಾಗಬೇಕಿದೆ. ಪೌರಾಣಿಕ ಮಹಾಪುರುಷರಿಂದ ಕಲಿಯಬೇಕಾದುದು ಬಹಳಷ್ಟಿದೆ ಎಂದು ಹೇಳಿದರು.
ಆದ್ಯ ವಚನಕಾರನಾಗಿರುವ ದೇವರ ದಾಸಿಮಯ್ಯ ವಚನಗಳ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣರಾದವರು. ಕಾಯಕವನ್ನೇ ಕೈಲಾಸ ಎಂದು ಸಾರಿದ ವಚನಕಾರರು ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಕುರಿತು ತಮ್ಮ ವಚನಗಳ ಮೂಲಕ ಸಾರಿದವರು. ವಚನಕಾರರ ನುಡಿಗಳು ಎಂದಿಗೂ ಪ್ರಸ್ತುತವಾಗಿವೆ ಎಂದರು.
ದೇವರ ದಾಸಿಮಯ್ಯ ಕುರಿತಾಗಿ ಉಪನ್ಯಾಸಕಿ ಶ್ರೀದೇವಿ ಕೆರಮನೆ ಮಾತನಾಡಿ, ಸಮಾಜದ ಮೇಲು ಕೀಳು, ಅಸಮಾನತೆ ಕುರಿತು ದೇವರ ದಾಸಿಮಯ್ಯ ಅವರು ತಮ್ಮ ವಚನಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.
ರಾಜರ್ಷಿ ಭಗೀರಥ ಕುರಿತು ಮಾತನಾಡಿದ ಉಪನ್ಯಾಸಕ ವೆಂಕಟೇಶ ಗಿರಿ, ತನ್ನ ನಿರಂತರ ತಪಸ್ಸು ಹಾಗೂ ಪರಿಶ್ರಮದ ಮೂಲಕ ಸಾಕ್ಷಾತ್ ಗಂಗೆಯನ್ನೇ ಭೂಮಿಗೆ ಕರೆತಂದ ಮಹಾನ್ ವ್ಯಕ್ತಿತ್ವ ಭಗೀರಥ. ಉಪ್ಪಾರ ಸಮಾಜದ ಆರಾಧ್ಯ ದೈವವಾಗಿರುವ ಭಗೀರಥ, ಛಲ ಪರಿಶ್ರಮಕ್ಕೆ ಮಾದರಿಯಾಗಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಶಫಿ ಸಾದುದ್ದೀನ್ ಸ್ವಾಗತಿಸಿದರು. ಗಣೇಶ ಬಿಷ್ಠಣ್ಣನವರ್ ಕಾರ್ಯಕ್ರಮ ನಿರೂಪಿಸಿದರು.
ಆಕರ್ಷಕ ಮೆರವಣಿಗೆ: ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಗೀರಥ ಹಾಗೂ ದೇವರದಾಸಿಮಯ್ಯ ಅವರ ಭಾವಚಿತ್ರದ ಮೆರವಣಿಗೆಗೆ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಅವರು ದೀಪ ಬೆಳಗಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಕಲಾವಿದರ ತಾಷಾರಾಮ್ಡೋಲ್ ತಂಡ, ಮಹಿಳೆಯರ ಬುಡಕಟ್ಟು ಕುಣಿತ, ಧಾರವಾಡದ ಜಗ್ಗಲಿಗೆ ಕಲಾವಿದರು, ಗದಗಿನ ಡೊಳ್ಳು ಕುಣಿತ, ಅಮದಳ್ಳಿಯ ಕಲಾವಿದರ ಸುಗ್ಗಿ ಕುಣಿತ ಆಕರ್ಷಕವಾಗಿದ್ದವು. ಕಳಸ ಹೊತ್ತ ಮಹಿಳೆಯರು ಮೆರವಣಿಗೆಗೆ ಮೆರಗು ತಂದರು.
Leave a Comment