ಭಟ್ಕಳ:
ಬೆಳಕೆಯ ಶೆಟ್ಟಿಕೇರಿಯ ಮನೆಯೊಂದರ ಬಾವಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕೂಲಿ ಕಾರ್ಮಿಕನೊಬ್ಬ ಆಯ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಮೃತನನ್ನು ಶಿರೂರಿನ ಹಣಬಾರಕೇರಿಯ ಬಚ್ಚಾ ಮಂಜಾ ಹಣಬಾರ(55) ಎಂದು ಗುರುತಿಸಲಾಗಿದೆ. ಬೆಳಕೆಯ ಶೆಟ್ಟಿಕೇರಿಯ ಕೃಷ್ಣಾ ವೆಂಕಟ್ರಮಣ ನಾಯ್ಕ ಇವರ ಮನೆಯ ಬಾವಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾವಿಯ ಹಿಂಬದಿಯ ಮಣ್ಣು ಕುಸಿದು ಕೆಳಗೆ ಬಿದ್ದು ರಿಂಗ್ ಮಧ್ಯೆ ಸಿಲುಕಿದ್ದು ತೀವ್ರ ಗಾಯಗೊಂಡಿದ್ದ ಎನ್ನಲಾಗಿದೆ. ಚಿಕಿತ್ಸೆಗಾಗಿ ಭಟ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ದಾರಿ ಮಧ್ಯೆ ಈತ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಶಿವರಾಮ ಮಂಜಾ ಹಣಬಾರ ಇವರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Leave a Comment