ಶಿರಸಿ:
ಉತ್ತರ ಕನ್ನಡ ಜಿಲ್ಲೆಯ ನಾಮಧಾರಿ ಗೆಳೆಯರ ಬಳಗದ ಫೇಸ್ಬುಕ್ ಗ್ರೂಪ್ ನೊಂದವರಿಗೆ ನೆರವಾಗುವ ಮೂಲಕ ಸಾಮಾಜಿಕ ಜಾಲತಾಣವನ್ನು ರಚನಾತ್ಮಕವಾಗಿ ಬಳಸಿಕೊಂಡಿದೆ.
ಆರು ವರ್ಷಗಳಿಂದ ಅನಾರೋಗ್ಯದಲ್ಲಿರುವ ತಾಲ್ಲೂಕಿನ ಕಾನಗೋಡಿನ ಪ್ರವೀಣ ನಾಗೇಂದ್ರ ನಾಯ್ಕ ಎಂಬುವವರಿಗೆ ಬಳಗ ₹ 10,000 ಧನಸಹಾಯ ನೀಡಿದೆ.
ಭಟ್ಕಳದ ಇಬ್ಬರು ಡಯಾಲಿಸಿಸ್ ರೋಗಿಗಳ ಚಿಕಿತ್ಸಾ ವೆಚ್ಚ ಭರಿಸುತ್ತಿದೆ. ಹೊನ್ನಾವರದಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಕಾಲು ಕಳೆದುಕೊಂಡ ರೈತನಿಗೆ, ಕುಮಟಾದ ಕ್ಯಾನ್ಸರ್ ರೋಗಿಯೊಬ್ಬರಿಗೆ ಆರ್ಥಿಕ ಸಹಾಯ ನೀಡುವ ಜೊತೆಗೆ ಭಟ್ಕಳ, ಕುಮಟಾದಲ್ಲಿ ರಕ್ತದಾನ ಶಿಬಿರ ನಡೆಸಿ ಮಾದರಿ ಗ್ರೂಪ್ ಆಗಿ ಪರಿಣಮಿಸಿದೆ.
10 ಸಾವಿರ ಸದಸ್ಯರಿದ್ದಾರೆ. ಗುಂಪಿನ ಹೆಸರಿನಲ್ಲಿ ಭಟ್ಕಳದ ಸ್ಟೇಟ್ ಬ್ಯಾಂಕ್ನಲ್ಲಿ ಖಾತೆ ಇದ್ದು, ದೇಶ ವಿದೇಶಗಳಲ್ಲಿ ಉದ್ಯೋಗದಲ್ಲಿರುವ ನಾಮಧಾರಿಗಳು ಖಾತೆಗೆ ಹಣ ಜಮಾ ಮಾಡುತ್ತಾರೆ. ಸಮಾಜಕ್ಕೆ ನೆರವು ನೀಡುವ ಉದ್ದೇಶ ವಿದ್ದರೆ ಈ ಗುಂಪಿನಲ್ಲಿ ಸೇರಬಹುದು ಎಂದು ಭಟ್ಕಳದ ಪಾಂಡುರಂಗ ನಾಯ್ಕ ತಿಳಿಸಿದ್ದಾರೆ
Leave a Comment