ಹೊನ್ನಾವರ:
ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಶೀಘ್ರ ಲಿಪಿಕಾರರಾಗಿ ಕಾರ್ಯನಿರ್ವಹಿಸಿದ ಸವಿತಾ ಸರ್ವೇಶ್ವರ ಭಟ್ಟ ಸೇವೆಯಿಂದ ನಿವೃತ್ತರಾದ ಪ್ರಯುಕ್ತ ಹೊನ್ನಾವರ ನ್ಯಾಯಾಲಯದಲ್ಲಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ತಮ್ಮ 38 ವರ್ಷಗಳಿಗೆ ಮೇಲ್ಪಟ್ಟ ನ್ಯಾಯಾಂಗ ಇಲಾಖೆಯ ಸೇವೆಯ ಆರಂಭದ ದಿನಗಳ ಹಾಗೂ ಕೊನೆಯ ಅವಧಿಯನ್ನು ನೆನಪಿಸಿಕೊಂಡ ಸವಿತಾ ಸರ್ವೇಶ್ವರ ಭಟ್ಟ ಸರ್ಕಾರದ ಸೇವೆ ದೇವರ ಸೇವೆಯಂತೆ. ಪೂಜ್ಯಭಾವದಿಂದ ಸೇವೆಯಲ್ಲಿ ತೊಡಗಿಕೊಂಡಾಗ ನಮಗೂ, ನಮ್ಮ ವೃತ್ತಿಗೂ, ಹಾಗೂ ನಾವು ಸೇವೆಸಲ್ಲಿಸುವ ಕ್ಞೇತ್ರಕ್ಕೂ ಗೌರವ ಸಿಕ್ಕಿದಂತಾಗುತ್ತದೆ ಎಂದರು.
ಕಾರ್ಯಾಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ನ್ಯಾಯಾಧೀಶ ಯಶವಂತÀ ಕುಮಾರ, ಜೆ.ಎಮ್.ಎಫ್.ಸಿ. ನ್ಯಾಯಾಧೀಶೆ ಎಮ್.ಎಸ್. ಹರಿಣಿ ಹಾಗೂ ಶಿರಸ್ತೇದಾರ ಮಂಜುನಾಥ ಎಚ್.ಎಸ್., ಮತ್ತು ಕೆ.ವಿ. ನಾಯ್ಕ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು. ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತದ್ದÀರು.
Leave a Comment