ಭಟ್ಕಳ:
ಸರಕಾರ ಜನಸಾಮಾನ್ಯರಿಗಾಗಿ ಅನೇಕ ಯೋಜನೆಗಳನ್ನು ತರುತ್ತದೆ. ಫಲಾನುಭವಿಗಳು ಸರಕಾರದ ಯೋಜನೆಗಳನ್ನು ಪಡೆದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಮಂಕಾಳ ವೈದ್ಯ ಕರೆ ನೀಡಿದರು.
ಅವರು ಇಲ್ಲಿನ ತಾಲೂಕು ಪಂಚಾಯತಿಯ 2016-17ನೇ ಸಾಲಿನ ಸಂಯುಕ್ತ ಅನುದಾನ ಕ್ರಿಯಾ ಯೋಜನೆಯಡಿಯಲ್ಲಿ ವಿಕಲಚೇತನರಿಗೆ ಯಂತ್ರ ಚಾಲಿತ ಪರಿವರ್ತಿತ ವಾಹನ ಹಾಗೂ ವೀಲ್ ಚೇರ್ನ್ನು ವಿತರಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಫಲಾನುಭವಿಗಳು ಸರಕಾರದ ಯೋಜನೆಗಳನ್ನು ಸರಿಯಾಗಿ ಸದ್ಭಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷ ಈಶ್ವರ ನಾಯ್ಕ, ಸದಸ್ಯರಾದ ಜಯಲಕ್ಷ್ಮೀ ಗೊಂಡ, ಮಹಾಬಲೇಶ್ವರ ನಾಯ್ಕ, ಸುಶೀಲಾ ನಾಯ್ಕ, ಹನುಮಂತ ನಾಯ್ಕ, ಮೀನಾಕ್ಷಿ ಜಟ್ಟಪ್ಪ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠಲ್ ನಾಯ್ಕ, ಬೆಂಗಳೂರು ಬಾಲಬವನ ನಿರ್ದೇಶಕ ಗೋಪಾಲ ನಾಯ್ಕ, ಶಿರಾಲಿ ಗ್ರಾ.ಪಂ. ಅಧ್ಯಕ್ಷ ವೆಂಕಟೇಶ ನಾಯ್ಕ, ಬೆಳಕೆ ಸೊಸೈಟಿ ಅಧ್ಯಕ್ಷ ಮಂಜುನಾಥ ನಾಯ್ಕ, ಕಾಂಗ್ರೆಸ್ ಮುಖಂಡರಾದ ಟಿ ಡಿ ನಾಯ್ಕ, ನಾರಾಯಣ ನಾಯ್ಕ, ಜಟ್ಟಪ್ಪ ನಾಯ್ಕ ಮುಂತಾದರಿದ್ದರು.
ಯಂತ್ರ ಚಾಲಿತ ಪರಿವರ್ತಿಯ ವಾಹನವನ್ನು ಮೂಡಶಿರಾಲಿಯ ತುಳಸಿದಾಸ ಚಣ್ಣಯ್ಯ ನಾಯ್ಕ, ಕುಳವಾಡಿಯ ನೇತ್ರಾವತಿ ಕೃಷ್ಣ ಶೆಟ್ಟಿ, ಹಲ್ಲಾರಿಯ ನಾರಾಯಣ ಸುಕ್ರಯ್ಯ ನಾಯ್ಕ, ಗಾಂಧಿನಗರ ಹೆಬಳೆಯ ರಾಮಚಂದ್ರ ಅಣ್ಣಪ್ಪ ನಾಯ್ಕರಿಗೆ ಹಾಗೂ ವೀಲ್ ಚೇರ್ನ್ನು ಕೋಟದಮಕ್ಕಿಯ ಮಯೂರ ಹನುಮಂತ ದೇವಡಿಗ, ಮಾವಳ್ಳಿ ಪಟ್ರಗದ್ದೆಯ ಜಯರಾಮ ರಾಮ ನಾಯ್ಕ, ಬೇಂಗ್ರೆಯ ವಾಸು ಮಾಸ್ತಿ ನಾಯ್ಕ, ಹೆಬಳೆ ಗಾಂಧಿನಗರದ ಮುಹ್ಮದ್ ಅತೀಪ್, ಮಾರುಕೇರಿ ಕೋಟಖಂಡದ ಸರಸ್ವತಿ ಮಂಜುನಾಥ ದೇಶಭಂಡಾರಿ ಅವರಿಗೆ ವಿತರಿಸಲಾಯಿತು.
Leave a Comment