ಕಾರವಾರ:
ನಗರದ ರವೀಂದ್ರನಾಥ ಟಾಗೋರ ಕಡಲ ತೀರದ ಪ್ರವೇಶ ದ್ವಾರದಲ್ಲಿರುವ ರವೀಂದ್ರರ ಪ್ರತಿಮೆಗೆ ಪೂಜಿಸುವ ಮೂಲಕ ಬಂಗಾಳಿಗರು ರವೀಂದ್ರನಾಥರ ಜಯಂತಿ ಆಚರಿಸಿದರು.
ಬಂಗಾಳಿ ಕ್ಯಾಲೆಂಡರ್ ಪ್ರಕಾರ ಬೈಶಾಖ ಮಾಸದ 25 ನೇ ದಿನಾಂಕದಂದು ಬಂಗಾಳದಲ್ಲಿ ಟಾಗೋರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ತಮ್ಮ ವಿವಿಧ ವ್ಯವಹಾರಗಳಿಗಾಗಿ ನೆಲೆಸಿರುವ ಬಂಗಾಳಿಗರು ಇಲ್ಲಿನ ರವೀಂದ್ರ ಪ್ರತಿಮೆಯನ್ನು ಸ್ವಚ್ಛಗೊಳಿಸಿ ಬಳಿಕ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಸಿಹಿ ಹಂಚುವ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ಸುಭಾಷ ಖಾಜಿ, ಸರ್ವೇಶ ಮಂಡಲ ಮುಂತಾದವರು ಇದ್ದರು.
Leave a Comment