ಹಳಿಯಾಳ :
ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಮೌರ್ಯ ಹೋಟೆಲ್ ಪಕ್ಕದ ಪುರಸಭೆಗೆ ಸೇರಿದ ನಿವೇಶನದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಭವನ ನಿರ್ಮಿಸುವಂತೆ ಆಗ್ರಹಿಸಿ ಹಳಿಯಾಳ ದಲಿತ ಸಂಘಟನೆಗಳ ಒಕ್ಕೂಟ ಆರಂಭಿಸಿರುವ ಅಹೋರಾತ್ರಿ ಧರಣಿ ಶನಿವಾರ 4 ನೇ ದಿನಕ್ಕೆ ಕಾಲಿಟ್ಟಿದೆ.
ತಾಲೂಕಾ ಕೇಂದ್ರ ಹಳಿಯಾಳದ ಪಟ್ಟಣದ ಪೋಲಿಸ್ ಠಾಣೆ, ಪುರಸಭೆ ಹಾಗೂ ಮಿನಿ ವಿಧಾನಸೌಧದ ಎದುರಿನ ರಾಜ್ಯ ಹೆದ್ದಾರಿಯಲ್ಲಿಯ ಶಿವಾಜಿ ವೃತ್ತದಲ್ಲಿ ಹಾಕಲಾದ ಭಗವಾನ್ ಬುದ್ದ ವೇದಿಕೆಯಲ್ಲಿ ಅಹೋರಾತ್ರಿ ಹೊರಾಟ ಮುಂದುವರೆದಿದ್ದು ಪ್ರತಿಭಟನಾ ಸ್ಥಳದಲ್ಲೇ ಸ್ನಾನ, ಊಟ, ಉಪಹಾರ ಹಾಗೂ ವಾಸ್ತವ್ಯ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಗುತ್ತಿದ್ದು ಕಳೆದ 2-3 ದಿನಗಳಿಂದ ಪಟ್ಟಣದಲ್ಲಿ 4 ಗಂಟೆಯ ಬಳಿಕ ಭಾರಿ ಬಿರುಗಾಳಿಯಿಂದ ಕೂಡಿ ರಭಸದ ಮಳೆ ಸುರಿಯುತ್ತಿದ್ದರು ಸಹ ದಲಿತ ಸಂಘಟನೆಗಳವರು ಹಮ್ಮಿಕೊಂಡಿರುವ ಹೋರಾಟ ಮಾತ್ರ ನಿರಂತರವಾಗಿ ನಡೆಯುತ್ತಿದ್ದು ನಿವೇಶನ ಮಂಜೂರಾಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಧರಣಿಯ ನೇತೃತ್ವ ವಹಿಸಿರುವ ದಲಿತ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ ಹೇಳಿದರು.
Leave a Comment