ಕಾರವಾರ:
ಐತಿಹಾಸಿಕ ಹಿನ್ನಲೆಯ ಅವರ್ಸಾ ಪಂಚಗ್ರಾಮ ಭೂದೇವಿ ದೇವರ ಬಂಡಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಗ್ರಾಮದ ಭೂದೇವಿ ದೇವಾಲಯದಿಂದ ಅಲಂಕಾರ ಭೂಷಿತಾವಾಗಿ ಸಾಂಪ್ರದಾಯಿಕ ವಾದ್ಯ, ಪಂಚಗ್ರಾಮ ಗುನಗರು, ಬ್ರಾಹ್ಮಣರು ಹಾಗೂ ಸಾವಿರಾರು ಭಕ್ತಾದಿಗಳ ಜೈಕಾರದ ಘೋಷಣೆಯೊಂದಿಗೆ ಸಾಗಿದ ಕಳಶ ನೇರವಾಗಿ ಬೀದಿಬೀರ ದೇವಾಲಯಕ್ಕೆ ತೆರಳಿತು. ಮೆರವಣಿಗೆಯಲ್ಲಿ ಸಾಗುವ ಸಂದರ್ಭದಲ್ಲಿ ಗ್ರಾಮದ ಲಕ್ಷ್ಮಿ ನಾರಾಯಣ ದೇವಾಲಯದ ಎದುರು ಕಳಶ ತಿರುಗುವ ದೃಶ್ಯ ನೋಡಲು ಸಾವಿರಾರು ಭಕ್ತರು ಭಾಗವಹಿಸಿದ್ದರು. ನಂತರ ಪುನಃ ಕಳಸವನ್ನು ಧಾರ್ಮಿಕ ಸಾಂಪ್ರದಾಯಿಕ ಪದ್ದತಿಯಂತೆ ರಾತ್ರಿ ರಾಟೆ ಮೇಲೆ ತಿರುಗಿಸಲಾಯಿತು. ರಾಟೆ ಮೇಲೆ ಕಳಸವನ್ನು ತಿರುಗಿಸುವಾಗ ಸಾವಿರಾರು ಭಕ್ತರು ಜೈ ಕಾರದ ಘೋಷಣೆ ಕೂಗಿ ಭಕ್ತಿ ಮೆರೆದರು. ಬಂಡಿ ಉತ್ಸವದ ಪ್ರಯುಕ್ತ ಗ್ರಾಮದ ಬೀದಿಬೀರ, ಬಾಗಿಲ ಬಂಟ, ಬಲಿಬೀರ, ಚಣಾಕಾದೇವತೆ, ಮಾಲಪುರುಷ, ಹೊಲೆಟರ, ದೇವಾಲಯಗಳಲ್ಲಿ ಭಕ್ತಾದಿಗಳು ವಿವಿದ ಹರಕೆಯನ್ನು ಸಲ್ಲಿಸಿದರು. ಇನ್ನೂ ಬಂಡಿ ಉತ್ಸವದ ಪ್ರಯುಕ್ತ ಗ್ರಾಮದ ಭೂದೇವಿ ದೇವಾಲಯದಲ್ಲೂ ಕೂಡಾ ಮುಂಜಾನೆಯಿಂದಲೆ ವಿವಿಧ ಧಾರ್ಮಿಕ ಕೆಲಸಗಳು ಜರುಗಿದವು.
Leave a Comment