ದಾಂಡೇಲಿ :
ಹಳಿಯಾಳದ ವಿ.ಆರ್.ಡಿ ಮೆಮೊರಿಯಲ್ ಟ್ರಸ್ಟ್ ವತಿಯಿಂದ ನಗರದ ದಾಂಡೇಲಿ ದಂಡ್ಯಕಾರಣ್ಯ ಇಕೋಪಾರ್ಕ ವನದಲ್ಲಿ ಹತ್ತು ದಿನಗಳ ಮಕ್ಕಳ ಬೇಸಿಗೆ ಶಿಬಿರ ಇಂದು ಆರಂಭಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎ.ಸಿ.ಎಫ್ ಬಾಲಕೃಷ್ಣ ಇಕೋ ಪಾರ್ಕ ಸುಂದರ ವನದಲ್ಲಿ ಮಕ್ಕಳ ಜ್ಞಾನಾಭಿವೃದ್ಧಿಗಾಗಿ ಈ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸ್ಥಳೀಯ ಬಿ.ಎಡ್ ಕಾಲೇಜಿನ ಪ್ರಾಚಾರ್ಯ ಜಯಶ್ರೀ ಕೊರಟಿ ಮಾತನಾಡಿ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳು ನೀಡುವ ಜ್ಞಾನದ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದರು.
ಇನ್ರ್ನೊವ ಮುಖ್ಯ ಅತಿಥಿ ನಿವೃತ್ತ ಪ್ರಾಚಾರ್ಯ ಯು.ಎಸ್. ಪಾಟೀಲ ಮಾತನಾಡಿ ಶಾಲೆಗಳಲ್ಲಿ ಪಠ್ಯ-ಪುಸ್ತಕದ ವಿದ್ಯಾಭ್ಯಾಸದ ಜೊತೆಗೆ ಬೇಸಿಗೆ ಶಿಬಿರದಲ್ಲಿ ಭಾಗವಹಿಸುವದರಿಂದ ರಜೆಯ ಸಮಯವನ್ನು ಜ್ಞಾನಾರ್ಜನೆಗೆ ಬಳಸಿದಂತಾಗುವದಲ್ಲದೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಬರಿಗಳು ನೇರವಾಗುತ್ತವೆ ಎಂದರು.
ಶಿಬಿರದಲ್ಲಿ ಯಲ್ಲಾಪುರದ ವಿಶ್ವ ವಿಖ್ಯಾತ ಮೆಮೊರಿ ಟ್ರಿಕ್ಸ್ನಲ್ಲಿ ಸಾಧನೆಗೈದ ಯೊಗೇಶ ಶಾನಭಾಗ ಮಕ್ಕಳ ಜ್ಞಾನಪಕ ಶಕ್ತಿ ಹೆಚ್ಚಿಸಿಕೊಳ್ಳುವ ವಿಧಾನಗಳ ಬಗ್ಗೆ ತಿಳುವಳಿಕೆಯನ್ನು ನೀಡಿದರು.
ಶಿಬಿರದ ಕಾರ್ಯಕ್ರಮವನ್ನು ಹಳಿಯಾಳದ ವಿವಿಡಿ ಶಾಲೆಯ ಪ್ರಾಂಶುಪಾಲ ರೋಶನ ಪಿ, ಶಿಕ್ಷಕರಾದ ಶ್ರೀಧರ ಹಾಗೂ ಮಂಜುನಾಥ ಬಾರಕೆÀರ್ ಕಾರ್ಯಕ್ರಮ ನಡೆಸಿಕೊಟ್ಟರು. ಶಿಬಿರದಲ್ಲಿ 100 ವಿದ್ಯಾರ್ಥಿಗಳು ಪಾಳ್ಗೊಂಡಿದ್ದರು.
Leave a Comment