ಪಣಜಿ :
ದಕ್ಷಿಣ ಗೋವಾದಲ್ಲಿ ಪೋರ್ಚುಗೀಸ್ ಕಾಲದ ಶಿಥಿಲಗೊಂಡ ಸೇತುವೆಯೊಂದು ಗುರುವಾರ ಸಂಜೆ ಕುಸಿದು ಬಿದ್ದು 10 ಮಂದಿ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ . ಸ್ಥಳದಲ್ಲಿ ನೌಕಾಪಡೆ ರಕ್ಷಣಾ ಕಾರ್ಯ ನಡೆಸುತ್ತಿದೆ .
ಕರ್ಚೋರೆಮ್ ಗ್ರಾಮದಲ್ಲಿ ಸನ್ವೋರ್ದೆಮ್ ನದಿಯಲ್ಲಿ ಸಂಜೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳ ಲೆಂದು ಸೇತುವೆಯಿಂದ ಕೆಳಕ್ಕೆ ಹಾರಿದ್ದ . ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ , ಯುವ ಕನ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು . ಇದನ್ನು ವೀಕ್ಷಿಸಲು 50 ಕ್ಕೂ ಹೆಚ್ಚು ಮಂದಿ ಸೇತುವೆಯಲ್ಲಿ ನೆರೆದಿದ್ದರು . ಮೊದಲೇ ಸೇತುವೆಶಿಥಿಲ ಗೊಂಡಿದ್ದ ಕಾರಣ , ಏಕಾಏಕಿ ಅದು ಕುಸಿದು ಬಿತ್ತು. ಪರಿಣಾಮ, ಸೇತುವೆಯಲ್ಲಿದ್ದ ಎಲ್ಲರೂ ನದಿಗೆ ಬಿದ್ದರು .
ಸೇತುವೆ ಕುಸಿದ ಪರಿಣಾಮ, ಅದರ ಮೇಲಿದ್ದ ಸುಮಾರು 50 ಮಂದಿ ನದಿಗೆ ಬಿದ್ದಿದ್ದಾರೆ. 20 ಮಂದಿ ಈಜಿ ದಡ ಸೇರುವಲ್ಲಿ ಯಶಸ್ವಿಯಾದರೆ , ರಕ್ಷಣಾ ಕಾರ್ಯಾಚರಣೆ ನಡೆಸಿ 14 ಮಂದಿಯನ್ನು ರಕ್ಷಿಸಲಾಗಿದ್ದು , ಈಗಾಗಲೇ
ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದೆ . ಆ ಪೈಕಿ ಒಬ್ಬನನ್ನು ಬಸವರಾಜ್ ಮಾಲನವರ ಎಂದು ಗುರುತಿಸಲಾಗಿದ್ದು , ಇವರು ಕರ್ನಾಟಕದವರಿರಬ ಹುದು ಎಂದು ಶಂಕಿಸಲಾಗಿದೆ .
ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರು ಘಟನೆಯ ಕುರಿತು ದಿಗ್ಭ್ರಮೆ ವ್ಯಕ್ತ ಪಡಿಸಿದ್ದು ,ರಕ್ಷಣಾ ಕಾರ್ಯ ನಡೆಯುತ್ತಿದ್ದು ಎಷ್ಟು ಮಂದಿ ನೀರು ಪಾಲಾಗಿದ್ದಾರೆ ಎನ್ನುವ ಲೆಕ್ಕಾಚಾರ ಸ್ಪಷ್ಟವಾಗಿ ತಿಳಿಯುತ್ತಿಲ್ಲ, ಭಾರೀ ಸಂಖ್ಯೆಯಲ್ಲಿ ನೌಕಾಪಡೆಯ ಸಿಬಂದಿಗಳು ಹುಡುಕಾಟ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ .
ಸಚಿವ ಸುಧೀನ್ ಧವಳಿಕರ್ ಅವರು ಸ್ಥಳದಲ್ಲಿದ್ದಾರೆ. ಸೇತುವೆ ಸಂಪರ್ಕವನ್ನು ಈಗಾಗಲೇ ಬಂದ್ ಮಾಡಲಾಗಿತ್ತು. ಆದರೆ ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ನೋಡಲು ಬಂದ ಜನರು ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ಶಿಥಿಲಗೊಂಡ ಸೇತುವೆಯ ಮೇಲೆ ನಿಂತಿದ್ದರಿಂದ ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ .
ನೌಕಾಪಡೆಯ 9 ಮಂದಿ ನುರಿತ ಈಜುಗಾರರು ,ಜೆಮಿನಿ ಬೋಟ್ಗಳು ಮತ್ತು ಅಗತ್ಯ ಸಲಕರಣೆಗಳ ಮೂಲಕ ಸ್ಥಳದಲ್ಲಿ ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ . ಕಾರ್ಯಾಚರಣೆ ಮುಂದುವರಿದಿದ್ದು , ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ .
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
Leave a Comment