ಕಾರವಾರ:
ದೇಶದಲ್ಲಿ ಸುನಾಮಿಯಂತಹ ಪ್ರಕೃತಿ ವಿಕೋಪಗಳಾದಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳ ಸಹಕಾರ ಅತಿ ಅವಶ್ಯವಾಗಿದೆ ಎಂದು ಪಶ್ಚಿಮ ನೌಕಾ ವಲಯದ ಕಮಾಂಡಿಂಗ್ ಆಫಿಸರ್ ವೈಸ್ ಅಡ್ಮಿರಲ್ ಗಿರೀಶ ಲೂಥ್ರಾ ಹೇಳಿದರು.
ಕದಂಬ ನೌಕಾನೆಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸುನಾಮಿ ಅಣಕು ಕಾರ್ಯಾಚರಣೆ ವೇಳೆ ಅವರು ಮಾದ್ಯಮದವರೊಂದಿಗೆ ಮಾತನಾಡಿದರು.
ಪ್ರಕೃತಿ ವಿಕೋಪಗಳ ಬಗ್ಗೆ ಪ್ರತಿ ಕ್ಷಣವೂ ಎಚ್ಚರಿಕೆಯಿಂದಿರಬೇಕಾಗುತ್ತದೆ. ಇದು ಒಬ್ಬರಿಂದ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಂಭವಿಸಬಹುದಾದ ಸುನಾಮಿಗಳ ಬಗ್ಗೆ ಮುಂಜಾಗೃತವಾಗಿ ತಿಳಿದುಕೊಳ್ಳಲು ಸುನಾಮಿ ಸೆಂಟರ್ ತೆರೆಯಲಾಗಿದೆ. ಇವು ಸುನಾಮಿಯ ತೀವ್ರತೆ, ಅದರ ಹಾನಿ, ಸುನಾಮಿ ಸಂತ್ರಸ್ತ ಪ್ರದೇಶಗಳ ಮಾಹಿತಿಯನ್ನು ಪಡೆದು ರಕ್ಷಣಾ ಕಾರ್ಯಕ್ಕೆ ಮುಂದಾಗುತ್ತೇವೆ. ಹೀಗೆ ಜನಜಾಗೃತಿ ಮೂಡಿಸುವುದರಿಂದ ಸೇನೆಗೂ ಸಹ ಹೆಚ್ಚಿನ ಪ್ರಯೋಜನ ತಂದುಕೊಟ್ಟಿದೆ. ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ದೇಶಗಳ ನಡುವೆ ಹೊಂದಾಣಿಕೆ ಹೊಂದಲು ಇದು ಸಹಕಾರಿಯಾಗಿದೆ ಎಂದರು. ಮಾನ್ಸೂನ್ ವೇಳೆ ಕರಾವಳಿ ಭಾಗದಲ್ಲಿ ಉಂಟಾಗಬಹುದಾದ ಸುನಾಮಿಯಿಂದ ಸಾರ್ವಜನಿಕರ ರಕ್ಷಣೆಗೆ ಸೇನೆ ಸದಾ ಸಿದ್ಧವಿದೆ. ಮಾನ್ಸೂನ್ ಆಗಮನಕ್ಕೂ ಮುನ್ನ ಪ್ರತಿ ವರ್ಷ ಸುನಾಮಿಯ ರಕ್ಷಣಾ ಕಾರ್ಯಾಚರಣೆಯ ಕುರಿತು ಸಿದ್ಧತೆ ನಡೆಸಲಾಗುತ್ತದೆ. ಅಲ್ಲದೆ ಕಳೆದ 2014ರಿಂದ ನಡೆಯುತ್ತಿರುವ ಸುನಾಮಿ ಅಣಕು ಕಾರ್ಯಾಚರಣೆಯಿಂದ ಸಾಕಷ್ಟು ಉಪಯೋಗವಾಗಿದ್ದು, ಇದು ಸೇನೆಯ ರಕ್ಷಣಾ ಚಟುವಟಿಕೆಗೆ ಸಹಕಾರಿಯಾಗಿದೆ ಎಂದರು.
Leave a Comment