• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಲವಾರು ವರ್ಷಗಳಿಂದ ಅತಿಕ್ರಮಣಗೊಂಡ ಜಾಗವನ್ನು ಬೆಳ್ಳಂ ಬೆಳಗ್ಗೆ ತೆರವು

May 27, 2017 by Sachin Hegde Leave a Comment

ದಾಂಡೇಲಿ :

ಸ್ಥಳೀಯ ಆಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಹಾಲಮಡ್ಡಿ ಬಳಿಯಿರುವ ಶ್ರೀ.ದಾಂಡೇಲಪ್ಪ ದೇವಸ್ಥಾನದ ಸಮೀಪ ಕಾಳಿ ನದಿ ದಂಡೆಯ ಬಳಿ ಅತಿಕ್ರಮಣವಾದ ಜಾಗವನ್ನು ಖುಲ್ಲಾ ಪಡಿಸುವ ಕಾರ್ಯಾಚರಣೆಗೆ ಶನಿವಾರ ಬೆಳ್ಳಂ ಬೆಳಗ್ಗೆ ಚಾಲನೆ ನೀಡಲಾಯಿತು..

ಕಳೆದ ಹಲವಾರು ವರ್ಷಗಳಿಂದ ಕಾಳಿ ನದಿ ದಂಡೆಯನ್ನು ಅತಿಕ್ರಮಿಸಿಕೊಂಡು ಸರಿ ಸುಮಾರು 4 ರಿಂದ 5 ಸಾವಿರಕ್ಕೂ ಬಾಳೆ ಗಿಡಗಳನ್ನು ನಡೆಲಾಗಿತ್ತು. ಅತಿಕ್ರಮಿತ ಜಾಗವನ್ನು ತೆರವುಗೊಳಿಸುವಂತೆ ತಾಲೂಕಾಡಳಿತ ಸಾಕಷ್ಟು ಭಾರಿ ಅತಿಕ್ರಮಣದಾರರಾದ ಪಾಟೀಲ ಸಹೋದರರಿಗೆ ತಿಳಿಸಿದ್ದರೂ, ಯಾವುದೇ ರೀತಿಯ ಪರಿಣಾಮವಾಗದಿರುವ ಕಾರಣ ಶನಿವಾರ ಬೆಳ್ಳಂ ಬೆಳಗ್ಗೆ ನಗರದ ವಿಶೇಷ ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಯಿತು.

ಸರಿ ಸುಮಾರು 3 ರಿಂದ 4 ಎಕರೆಯಷ್ಟು ಜಾಗವನ್ನು ಅತಿಕ್ರಮಿಸಲಾಗಿದ್ದು, ಅತಿಕ್ರಮಿಸಲಾದ ಪೂರ್ತಿ ಜಾಗವನ್ನು ಖುಲ್ಲ ಪಡಿಸಲಾಯಿತು. ಅತಿಕ್ರಮಿತ ಜಾಗವನ್ನು ಮೊಸಳೆ ಉದ್ಯಾವನಕ್ಕಾಗಿ ಪ್ರಸ್ತಾಪಿಸಲಾಗಿತ್ತೆಂದು ತಿಳಿದುಬಂದಿದ್ದು, ಇದರ ಮುಂದಿನ ಕಾರ್ಯಕ್ಕೆ ಅತಿಕ್ರಮಣ ತೆರವು ಕಾರ್ಯಾಚರಣೆ ಅನುಕೂಲಸಿಂಧುವಾಗಿ ಮಾರ್ಪಟ್ಟಿದೆ.

ಇದರ ಜೊತೆಯಲ್ಲೆ ಅಲ್ಲೆ ಹತ್ತಿರ ಅತಿಕ್ರಮಣ ಮನೆಗಳು ನಿರ್ಮಾಣಗೊಂಡಿದ್ದು, ಈ ಬಗ್ಗೆ ಅಗತ್ಯ ಕಾಗದ ಪತ್ರಗಳನ್ನು ಪರಿಶೀಲನೆಗೆ ನೀಡುವಂತೆ ವಿಶೇಷ ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ಅತಿಕ್ರಮಣದಾರರಿಗೆ ತಿಳಿಸಿದ್ದಾರೆ. ಒಂದಾನುವೇಳೆ ಅಗತ್ಯ ಕಾಗದ ಪತ್ರಗಳನ್ನು ಒದಗಿಸದಿದ್ದಲ್ಲಿ ಅತಿಕ್ರಮಿತ ಮನೆಗಳನ್ನು ತೆರವುಗೊಳಿಸುವ ಸಾಧ್ಯತೆಯಿದೆ.

ಇಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಪ್ರಾರಂಭಗೊಳ್ಳುತ್ತಿದ್ದಂತೆಯೆ ಇದೇ ಅತಿಕ್ರಮಣದಾರ ಅಲ್ಲೆ ಖಾಲಿಯಿದ್ದ ಜಾಗವನ್ನು ಅತಿಕ್ರಮಿಸಿ ಬೇಲಿ ಹಾಕಿದ್ದು, ಬೇಲಿಯನ್ನು ತೆರವುಗೊಳಿಸುವಂತೆ ಕೇಳಿಕೊಂಡರೂ, ನಕರಾತ್ಮಕವಾಗಿ ಸ್ಪಂದಿಸಿರುವುದರಿಂದ ಕೂಡಲೆ ಶೈಲೇಶ ಪರಮಾನಂದ ಅವರು ಜೆಸಿಬಿ ತರಿಸಿ ಬೇಲಿಯನ್ನು ತೆಗೆದು ಆ ಜಾಗವನ್ನು ಖುಲ್ಲಾ ಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ಪ್ರದೇಶವನ್ನು ಪ್ರವಾಸಿಕೇಂದ್ರದ ಕಟ್ಟಡಕ್ಕೆ ನಿರ್ಮಾಣಕ್ಕೆ ಪ್ರಸ್ತಾಪಿಸಲಾಗಿದೆ ತಿಳಿದು ಬಂದಿದೆ.

ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ವಿಶೇಷ ತಹಶೀಲ್ದಾರ್ ಜೊತೆಗೆ ಕಂದಾಯ ನಿರೀಕ್ಷಕ ಮಂಜುನಾಥ ಮೇತ್ರಿ, ವಿಶೇಷ ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಉಪ ವಲಯಾರಣ್ಯಾಧಿಕಾರಿ ನೀಲಕಂಠ ದೇಸಾಯಿ ಹಾಗೂ ಸಿಬ್ಬಂದಿಗಳು ಮತ್ತು ನಗರ ಸಭೆಯ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು. ಸರ್ವೆ ವಿಭಾಗದ ಅಧಿಕಾರಿಗಳಾದ ಮಹೇಶ ಮತ್ತು ಬಿರದಾರ ಅವರುಗಳಿಂದ ಅತಿಕ್ರಮಿತ ಜಾಗವನ್ನು ಸರ್ವೆ ಮಾಡಿಸಿದ ಬಳಿಕ ಅತಿಕ್ರಮಣ ಜಾಗವನ್ನು ತೆರವುಗೊಳಿಸಲಾಯಿತು.

ಮಹತ್ವದ ಹೆಜ್ಜೆ:
ವಿಶೇಷ ತಹಶೀಲ್ದಾರ್ ಆಗಿ ಕರ್ತವ್ಯಕ್ಕೆ ಹಾಜರದಾಗಿನಿಂದ ಪ್ರಾಮಾಣಿಕ ಸೇವೆಯ ಮೂಲಕ ಗಮನ ಸೆಳೆದಿರುವ ಶೈಲೇಶ ಪರಮಾನಂದ ಅವರು ಅತಿಕ್ರಮಣ ತೆರವು ಕಾರ್ಯಾಚರಣೆಗೆ ಮುಂದಾಗಿರುವುದು ಮಹತ್ವದ ಹೆಜ್ಜೆಯಾಗಿ ಮೂಡಿಬಂದಿದೆ. ನಗರದ ವಿವಿದೆಡೆಗಳಲ್ಲಿ ನಡೆದಿರುವ ಅತಿಕ್ರಮಣಗಳನ್ನು ಖುಲ್ಲಾ ಪಡಿಸಬಹುದೆಂಬ ನಿರೀಕ್ಷೆ ನಗರದ ಜನತೆಯಲ್ಲಿದ್ದು, ಆ ನೀರಿಕ್ಷೆಗಾಗಿ ಸ್ವಲ್ಪ ದಿನ ಕಾಯಬೇಕಾಗಬಹುದು.

 

27Dandeli1c 27Dandeli1b 2 27Dandeli1d 27Dandeli1a 27Dandeli1f 2 27Dandeli1d 2

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News Tagged With: Dandeli, ಅತಿಕ್ರಮಣ, ಆಲೂರು, ಎಕರೆ, ಗಳಿಂದ, ಗೊಂಡ, ಗ್ರಾಮ, ಜಾಗ, ತೆರವು, ದಾಂಡೇಲಿ, ಬೆಳಗ್ಗೆ, ಬೆಳ್ಳಂ, ವರ್ಷ, ಹಲವಾರು

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...