ದಾಂಡೇಲಿ :
ಕಳೆದ ಹಲವಾರು ವರ್ಷಗಳಿಂದ ಕಾಳಿ ನದಿ ದಂಡೆಯನ್ನು ಅತಿಕ್ರಮಿಸಿಕೊಂಡು ಸರಿ ಸುಮಾರು 4 ರಿಂದ 5 ಸಾವಿರಕ್ಕೂ ಬಾಳೆ ಗಿಡಗಳನ್ನು ನಡೆಲಾಗಿತ್ತು. ಅತಿಕ್ರಮಿತ ಜಾಗವನ್ನು ತೆರವುಗೊಳಿಸುವಂತೆ ತಾಲೂಕಾಡಳಿತ ಸಾಕಷ್ಟು ಭಾರಿ ಅತಿಕ್ರಮಣದಾರರಾದ ಪಾಟೀಲ ಸಹೋದರರಿಗೆ ತಿಳಿಸಿದ್ದರೂ, ಯಾವುದೇ ರೀತಿಯ ಪರಿಣಾಮವಾಗದಿರುವ ಕಾರಣ ಶನಿವಾರ ಬೆಳ್ಳಂ ಬೆಳಗ್ಗೆ ನಗರದ ವಿಶೇಷ ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಯಿತು.
ಇದರ ಜೊತೆಯಲ್ಲೆ ಅಲ್ಲೆ ಹತ್ತಿರ ಅತಿಕ್ರಮಣ ಮನೆಗಳು ನಿರ್ಮಾಣಗೊಂಡಿದ್ದು, ಈ ಬಗ್ಗೆ ಅಗತ್ಯ ಕಾಗದ ಪತ್ರಗಳನ್ನು ಪರಿಶೀಲನೆಗೆ ನೀಡುವಂತೆ ವಿಶೇಷ ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ಅತಿಕ್ರಮಣದಾರರಿಗೆ ತಿಳಿಸಿದ್ದಾರೆ. ಒಂದಾನುವೇಳೆ ಅಗತ್ಯ ಕಾಗದ ಪತ್ರಗಳನ್ನು ಒದಗಿಸದಿದ್ದಲ್ಲಿ ಅತಿಕ್ರಮಿತ ಮನೆಗಳನ್ನು ತೆರವುಗೊಳಿಸುವ ಸಾಧ್ಯತೆಯಿದೆ.
ಇಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಪ್ರಾರಂಭಗೊಳ್ಳುತ್ತಿದ್ದಂತೆಯೆ ಇದೇ ಅತಿಕ್ರಮಣದಾರ ಅಲ್ಲೆ ಖಾಲಿಯಿದ್ದ ಜಾಗವನ್ನು ಅತಿಕ್ರಮಿಸಿ ಬೇಲಿ ಹಾಕಿದ್ದು, ಬೇಲಿಯನ್ನು ತೆರವುಗೊಳಿಸುವಂತೆ ಕೇಳಿಕೊಂಡರೂ, ನಕರಾತ್ಮಕವಾಗಿ ಸ್ಪಂದಿಸಿರುವುದರಿಂದ ಕೂಡಲೆ ಶೈಲೇಶ ಪರಮಾನಂದ ಅವರು ಜೆಸಿಬಿ ತರಿಸಿ ಬೇಲಿಯನ್ನು ತೆಗೆದು ಆ ಜಾಗವನ್ನು ಖುಲ್ಲಾ ಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ಪ್ರದೇಶವನ್ನು ಪ್ರವಾಸಿಕೇಂದ್ರದ ಕಟ್ಟಡಕ್ಕೆ ನಿರ್ಮಾಣಕ್ಕೆ ಪ್ರಸ್ತಾಪಿಸಲಾಗಿದೆ ತಿಳಿದು ಬಂದಿದೆ.
Leave a Comment