ದಾಂಡೇಲಿ:
ಜನಪ್ರತಿನಿಧಿಯೊಬ್ಬ ಮನಸ್ಸು ಮಾಡಿದರೇ ಊರಿನ ಪ್ರಗತಿ ಸುಲಭ ಸಾಧ್ಯ. ಸಮಾಜಮುಖಿ ಕೆಲಸ ಕಾರ್ಯಗಳನ್ನು ಜನಪ್ರತಿನಿಧಿಯೆ ತನ್ನ ಮುಂದಾಳತ್ವದಲ್ಲಿ ಮಾಡಿದ್ದೇಯಾದಲ್ಲಿ, ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ದಾಂಡೇಲಿ ಸಮೀಪದ ಕೋಗಿಲೆಬನ-ಬಡಕಾನಶಿರಡಾ ಗ್ರಾಮ ಪಂಚಾಯ್ತಿಯ ಉತ್ಸಾಹಿ ಉಪಾಧ್ಯಕ್ಷ ರಮೇಶ ನಾಯ್ಕ.
ಅಂದ ಹಾಗೆ ಇವರು ಅಂಥಹ ಕೆಲಸ ಮಾಡಿದ್ದಾರೂ ಏನು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಸರಿ ಸುಮಾರು ನಾಲ್ಕು ದಶಕಗಳಷ್ಟು ಹಳೆಯದಾಗಿರುವ ಸ್ಥಳೀಯ ಕೋಗಿಲೆಬನ ಕೆರೆ ಈ ಬಾರಿ ಕೋಗಿಲಬನ-ಬಡಾಕಾನಶಿರಡಾ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ರಮೇಶ ನಾಯ್ಕರ ಇಚ್ಚಾಶಕ್ತಿಯ ಫಲದಿಂದಾಗಿ, ಕಾಗದ ಕಾರ್ಖಾನೆ ಹಾಗೂ ರುಡ್ಸೆಟಿಯ ಸಹಕಾರದೊಂದಿಗೆ ಹೂಳೆತ್ತಲ್ಪಟ್ಟಿದೆ.
ಇದು ಅತ್ಯಂತ ಹಳೆಯದಾದ ಮತ್ತು ವಿಸ್ತಾರವಾದ ಕೆರೆಯಾಗಿದೆ. ಹಲವಾರು ವರ್ಷಗಳಿಂದ ಹೂಳೆತ್ತದ ಕಾರಣ ಈ ಕೆರೆ ಬತ್ತಿ ಹೋಗಿತ್ತು. ಕೆರೆ ಬತ್ತಿದ ಪರಿಣಾಮ ಹತ್ತಿರದ ಕೋಗಿಲಬನ ಗ್ರಾಮದಲ್ಲಿಯೂ ನೀರಿನ ತತ್ವಾರವಾಗಿತ್ತಷ್ಠೆ ಅಲ್ಲದೇ, ವನ್ಯ ಪ್ರಾಣಿ-ಪಕ್ಷಿಗಳಿಗೂ ನೀರಿ ಸಮಸ್ಯೆಯಾಗಿತ್ತು.
ಇದನ್ನರಿತ ಕೋಗಿಲಬನ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ರಮೇಶ ನಾಯ್ಕ ಈ ಹಿಂದೆಯೇ ಪಂಚಾಯತಿಯ ಅನದುದಾನದಲ್ಲಿ ಒಂದಿಷ್ಟು ಹೂಳೆತ್ತುವ ಕೆಲಸ ಮಾಡಿಸಿದ್ದರು. ಆದರೆ ಅದು ಸಾಕಾಗಿರಲಿಲ್ಲ. ನಂತರ ರಮೇಶ ನಾಯ್ಕ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯವರಲ್ಲಿ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಅವರು ಈ ಕೆರೆಯ ಮಣ್ಣು ಹೂಳೆತ್ತಲು ಜೆ.ಸಿ.ಬಿ.ಯನ್ನು ಉಚಿತವಾಗಿ ನೀಡಿದ್ದರು. ಉಳಿದಂತೆ ಟ್ರಾಕ್ಟರ್ ಮೂಲಕ ಮಣ್ಣು ಸಾಗಿಸುವ ಹಾಗೂ ಜೆ..ಸಿ.ಬಿ ಚಾಲಕರ ನಿರ್ವಾಕರ ಊಟೋಪಚಾರ ಸೇರಿದಂತೆ ಎಲ್ಲ ಖರ್ಚುಗಳನ್ನು ರಮೇಶ ನಾಯ್ಕ ಸ್ವಂತ ಖರ್ಚಿನಿಂದ ನೋಡಿಕೊಂಡಿದ್ದರಷ್ಟೇ ಅಲ್ಲದೇ ಖುದ್ದಾಗಿ ಸ್ಥಳÀದಲ್ಲಿ ನಿಂತು ಕೆಲಸ ಮಾಡಿಸಿದ್ದರು.
ಏಳು ದಿನಗಳ ನಂತರ ಕಾಗದ ಕಾರ್ಖಾನೆಯವರು ಜೆ.ಸಿ.ಬಿ.ಯನ್ನು ಮರಳಿ ಪಡೆಯುತ್ತಿದ್ದಂತೆಯೇ ರಮೇಶ ನಾಯ್ಕವರು ರುಡ್ಸೆಟಿಯವರನ್ನು ಸಂಪರ್ಕಿಸಿ ಅವರಿಂದ ಜೆ.ಸಿ.ಬಿ ಪಡೆದು ಮತ್ತೆ ಹೂಳೇತ್ತುವ ಕೆಲಸ ಆರಂಭಿಸಿದ್ದಾರೆ. ಈಗಾಗಲೇ ಭಾಗಶಹ ಕೆರೆ ಹೂಳೆತ್ತುವ ಕಾರ್ಯ ಪೂರ್ಣಗೊಳ್ಳುತ್ತ ಬಂದಿದ್ದು ಇದು ಮುಂದಿನ ದಿನಗಳಲ್ಲಿ ಎಲ್ಲರಿಗೂ ಉಪಯುಕ್ತವಾಗಲಿದೆ. ಮುಂದಿನ ದಿನಗಳಲ್ಲಿ ಈ ಕೆರೆಯ ಸುತ್ತ ಕಟ್ಟ್ಟೆ ನಿರ್ಮಿಸುವ, ಕಾಲು ದಾರಿ ನಿರ್ಮಿಸುವ ಚಿಂತನೆ ರಮೇಶ ನಾಯ್ಕರ ಮುಂದಿದೆ. ಒಟ್ಟಿನಲ್ಲಿ ರಮೇಶ ನಾಯ್ಕ ಮಹತ್ಕಾರ್ಯಕ್ಕೆ ಊರಿಗೆ ಊರೇ ಮೆಚ್ಚುಗೆಯ ಮಾತುಗಳನ್ನಾಡುತ್ತಿದೆ.
ಜನರಿಗಾಗಿ ಈ ಕೆಲಸ- ರಮೇಶ ನಾಯ್ಕ
ಇದು ನಮ್ಮ ಪಂಚಾಯತಿ ವ್ಯಾಪ್ತಿಯ ಕೆರೆ. ನಮ್ಮ ಮನವಿಯಂತೆ ವೆಸ್ಟ್ಕೋಸ್ಟ್ ಪೇಪರ್ ಮಿಲ್ನವರು ಕೆರೆ ಹೂಳೆತ್ತಲು ಜೆ.ಸಿ.ಬಿ ನೀಡಿದ್ದರು. ಈಗ ರುಡ್ಸೆಟಿಯವರು ಜೆ.ಸಿ.ಬಿ ಸಹಾಯ ಮಾಡಿದ್ದಾರೆ. ಜನ ಸೇವೆಗಾಗಿ, ಹಾಗೂ ವನ್ಯ ಜೀವಿಗಳ ಅನುಕೂಲಕ್ಕಾಗಿ ನಾನೇ ಖುದ್ದಾಗಿ ನಿಂತು ಈ ಕೆರೆ ಹೂಳೆತ್ತುವ ಕೆಲಸ ಮಾಡಿಸುತ್ತಿದ್ದೇನೆ. ಇಲ್ಲಿಯ ಮಣ್ಣನ್ನು ಬೇರೆಡೆ ಸಾಗಿಸಲು ಸ್ವಂತ ಹಣ ಖರ್ಚು ಮಾಡಿದ್ದೇನೆ. ಇದನ್ನು ಆಕರ್ಷಕ ತಾಣವನ್ನಾಗಿ ಮಾಡಬೇಕೆಂಬ ಉದ್ದೇಶ ನಮ್ಮೆದುರಿಗಿದೆ.
– ರಮೇಶ ನಾಯ್ಕ, ಉಪಾಧ್ಯಕ್ಷರು, ಗ್ರಾ.ಪಂ ಕೋಗಿಲಬನ
ರಮೇಶ ನಾಯ್ಕರ ಕಾರ್ಯಕ್ಕೆ ಹ್ಯಾಟ್ಸ್ ಆಫ್- ಸುಧೀರ ಶೆಟ್ಟಿ, ಸಂತೋಷ ಕೆರವಾಡಕರ
ಯುವ ನಾಯಕ ರಮೇಶ ನಾಯ್ಕ ಅವರ ಚಿಂತನೆ ಮತ್ತು ಪ್ರಯತ್ನದ ಫಲವಾಗಿ ನಮ್ಮೂರಿನ ಕೆರೆಯ ಹೂಳೆತ್ತಲಾಗಿದೆ. ರಮೇಶ ನಾಯ್ಕ ಅವರು ಸ್ವತ : ನಿಂತು ಕೆಲಸ ಮಾಡಿಸಿಕೊಂಡಿರುವುದು ನಿಜಕ್ಕು ಊರಿನ ಜನರು ಹೆಮ್ಮೆ ಪಡುವಂತಾಗಿದೆ. ಯುವ ನಾಯಕನ ಸಮಾಜಮುಖಿ ಕಾರ್ಯಕ್ಕೆ ಹ್ಯಾಟ್ಸ್ ಆಫ್ ಎಂದಿದ್ದಾರೆ ಸ್ಥಳೀಯ ಯುವಕರಾದ ಸುಧೀರ ಶೆಟ್ಟಿ ಮತ್ತು ಸಂತೋಷ ಕೆರವಾಡಕರ ಅವರುಗಳು.
Leave a Comment