ಹಳಿಯಾಳ:
ಸಾರಿಗೆ ಸಂಸ್ಥೆಗೆ ಸೇರಿದ 2 ಬಸ್ಗಳು ಮಂಗಳವಾರ ಬೆಳಗ್ಗೆ ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಪರಸ್ಪರ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು ಸುಮಾರು 32 ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.
44 ಪ್ರಯಾಣಿಕರಿದ್ದ ಬಸ್ ದಾಂಡೇಲಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳಸಿದ ಬಸ್ ಹಾಗೂ ಹಳಿಯಾಳ ಘಟಕದಿಂದ 8 ಜನ ಪ್ರಯಾಣಿಕರನ್ನು ಹೊತ್ತು ತಾಳಿಕೋಟೆಗೆ ತೆರಳುತ್ತಿದ್ದ ಬಸ್ಗಳು ತಾಲೂಕಿನ ಅಜಗಾಂವ ಗ್ರಾಮದ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ದಾಂಡೇಲಿ-ಬೆಂಗಳೂರು ಬಸ್ಸು ರಸ್ತೆಯ ಪಕ್ಕದ ಗಿಡಕ್ಕೆ ಅಪ್ಪಳಿಸಿ ಜಖಂಗೊಂಡಿದೆ ಹಾಗೂ ನಿಯಂತ್ರಣ ಕಳೆದುಕೊಂಡ ತಾಳಿಕೋಟೆ ಬಸ್ ರಸ್ತೆಯ ಪಕ್ಕಕ್ಕೆ ಉರುಳಿದ ಪರಿಣಾಮ 2 ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದ 44 ಪ್ರಯಾಣಿಕರಲ್ಲಿ ಸುಮಾರು 32 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಘಟನೆ ನಡೆದ ತಕ್ಷಣ ಗಾಯಾಳುಗಳನ್ನು ಸಾರ್ವಜನೀಕರ ಸಹಕಾರದೊಂದಿಗೆ ಹಳಿಯಾಳದ ಸರಕಾರಿ ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ 2 ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು. ಈ ಬಗ್ಗೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಚಿವರ ಭೇಟಿ ಸಾಂತ್ವನ :- ಅಪಘಾತದ ಸುದ್ದಿ ತಿಳಿದ ತಕ್ಷಣ ಅಧಿಕಾರಿಗಳ ತಂಡದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ರೋಗಿಗಳ ಸ್ಥಿತಿಗತಿ ವಿಚಾರಿಸಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಇಂಜೀನಿಯರಿಂಗ್ ಹಾಗೂ ಇತರ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಿದರು. ಇಂದು ಪರೀಕ್ಷಗೆ ಹಾಜರಾಗಬೇಕಾದ ವಿದ್ಯಾರ್ಥಿಗಳ ಬಗ್ಗೆ ಅವರ ಕಾಲೇಜಿನ ಪ್ರಾಚಾರ್ಯರ ಜೊತೆ ದೂರವಾಣಿಯಲ್ಲಿ ಮಾತನಾಡಿ ಪರೀಕ್ಷೆಗೆ ಮುಂದಿನ ದಿನಾಂಕವನ್ನು ನೀಡಲು ಸೂಚಿಸಿದರು. ಗಾಯಾಳುಗಳನ್ನು ತಮ್ಮ ವಿಆರ್.ಡಿಎಮ್ ಟ್ರಸ್ಟ್ ವತಿಯಿಂದ ಅವಶ್ಯ ಬಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗೆ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕೂಡಲೇ ಚಿಕಿತ್ಸೆಗೆ ಸ್ಪಂದಿಸಿದ ವೈದ್ಯರನ್ನು ಸಿಬ್ಬಂದಿಗಳನ್ನು ಹಾಗೂ ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸಿದ ಸಾರ್ವಜನಿಕರಿಗೆ ಸಚಿವರು ಅಭಿನಂದನೆ ಸಲ್ಲಿಸಿದರು. ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯರಾದ ಮಹೇಶ್ರೀ ಮಿಶ್ಯಾಳಿ, ಕೃಷ್ಣಾ ಪಾಟೀಲ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ತಾಲೂಕಾ ವೈದ್ಯಾಧಿಕಾರಿ ರಮೇಶ ಕದಂ, ವೈದ್ಯರಾದ ಡಾ.ಗುರುಪ್ರಸಾದ, ಡಾ.ಆಶಾ, ಡಾ.ಸೀಮಾ ಬಿರ್ಜೆ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಡಿವೈಎಸ್ಪಿ ದಯಾನಂದ ಪವಾರ, ತಾಪಂ ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ, ಘಟಕ ವ್ಯವಸ್ಥಾಪಕ ಸತೀಶ ಕಾಡನವರ ಇದ್ದರು.
Leave a Comment