ಹಳಿಯಾಳ:
ಯಾವ ವರ್ಗದವರು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಪ್ರತಿಯೊಬ್ಬ ಮಗು ಶಿಕ್ಷಣ ಪಡೆಯಬೇಕು ಎಂಬ ಸದಿಚ್ಚೆಯೊಂದಿಗೆ ರಾಜ್ಯ ಸರ್ಕಾರ ಸಾಕಷ್ಟು ನೂತನ ಯೋಜನೆಗಳೊಂದಿಗೆ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಹಾಗೂ ಅನೇಕ ಉಚಿತ ಸೌಲಭ್ಯಗಳನ್ನು ನೀಡುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು.
ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಪಠ್ಯಪುಸ್ತಕ ವಿತರಣಾ ಗೌರವ, ಸ್ಥಾನಮಾನ ಸಿಗುತ್ತಿರುವ ಕಾರಣ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕೆಂದು ಸಚಿವರು ಕರೆ ನೀಡಿದರು. ಸಮಾರಂಭದ ಉಧ್ಘಾಟನೆ ನೆರವೆರಿಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಶೂಗಳನ್ನು ಹಾಗೂ ಸೈಕಲ್ ವಿತರಿಸಿ ಮಾತನಾಡಿ 21ನೇ ಶತಮಾನ ಬುದ್ದಿಜೀವಿಗಳ ಶತಮಾನವಾಗಿದ್ದು ಬುದ್ದಿ ವಂತರಿಗೆ ವಿಶ್ವದ ಎಲ್ಲೆಡೆ
ಹಿಂದೂಳಿದ ಜೋಯಿಡಾ ತಾಲೂಕಿನ ಶಾಲೆಯ ಫಲಿತಾಂಶ ಉತ್ತಮವಾಗಿದೆ ಎಂದು ಶ್ಲಾಘಿಸಿದ ಅವರು ಹಳಿಯಾಳ ತಾಲೂಕಿಗೆ ಮೂರು ವರ್ಷಗಳಲ್ಲಿ ಪ್ರಾಥಮಿಕ ಶಾಲೆಯ ಅಭಿವೃದ್ದಿಗಾಗಿ 18 ಕೋಟಿ ರೂ. ಅನುದಾನ ತಂದಿದ್ದರು ಕೂಡ ಹಳಿಯಾಳ ತಾಲೂಕಿನ ಫಲಿತಾಂಶ ಹಿಂದಿನ ವರ್ಷಕ್ಕಿಂತ ಕಡಿಮೆ ಆಗಿರುವುದು ವಿಷಾಧನೀಯ ಎಂದರು.
ಹಿಂದಿನ ಸಾಲಿನಲ್ಲಿ ಜಿಲ್ಲೆಯ ಶಿಕ್ಷಕರ ಕೊರತೆಯನ್ನು ಸರ್ಕಾರ ನಿವಾರಿಸಿತ್ತು ಈ ಸಾಲಿನಲ್ಲಿ ಪ್ರಾಥಮಿಕ ಶಾಲೆಗೆ 391 ಶಿಕ್ಷಕರು, ಪ್ರೌಢಶಾಲೆಗೆ 41 ಶಿಕ್ಷಕರ ಕೊರತೆ ಇದ್ದು ಈ ಬಗ್ಗೆ ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಶಿರಸಿ ವಿಭಾಗದ ಡಿಡಿಪಿಐ ಪ್ರಸನ್ನಕುಮಾರ ಅವರಿಗೆ ಸೂಚಿಸಿದ ಸಚಿವÀರು ಶಿಕ್ಷಕರ ಕೊರತೆಯನ್ನು ನಿವಾರಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ, ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಮಹೇಶ್ರೀ ಮಿಶ್ಯಾಳಿ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ತಾಪಂ ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ, ಪುರಸಭೆ ಸದಸ್ಯ ಸತ್ಯಜೀತ ಗಿರಿ, ಮಾಲಾ ಬ್ರಗಾಂಜಾ, ಡಿಡಿಪಿಐ ಪ್ರಸನ್ನಕುಮಾರ, ಎಸ್ಡಿಎಮ್ಸಿ ಅಧ್ಯಕ್ಷೆ ರೂಪಾ ಗಿರಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್ ನಾಯ್ಕ, ಶಿಕ್ಷಕ ಎನ್.ಎಸ್.ಉದ್ದಣ್ಣವರ, ಬಿಆರ್ಸಿ ವಿಜಯಲಕ್ಷ್ಮೀ ಅರ್ಕಸಾಲಿ ಮೊದಲಾದವರು ಇದ್ದರು.
Leave a Comment