ಮೊಬೈಲ್ ಇಲ್ಲದೆ ಮನೆಯಲ್ಲಿ ಟಿ.ವಿಯೂ ಇಲ್ಲದ ಕಾರಣ ಆನ್ಲೈನ್ ತರಗತಿಯೂ ಇಲ್ಲದೆ ದೂರದರ್ಶನ ಪಾಠದಿಂದಲೂ ವಂಚಿತನಾಗಿದ್ದ ಬಡ ಕುಟುಂಬದ ವಿದ್ಯಾರ್ಥಿಯ ಕಷ್ಟವನ್ನು ಅರಿತು, ಅದಕ್ಕಾಗಿ ಮರುಗಿದ ಚಿತ್ತಾರ ಪ್ರೌಢಶಾಲೆಯ ಸಹ ಶಿಕ್ಷಕ ಪ್ರಕಾಶ ನಾಯ್ಕ ಅವರು ಸ್ವಂತ ಖರ್ಚಿನಿಂದ ಟಿ.ವಿಯನ್ನು ನೀಡಿ ವಿದ್ಯಾರ್ಥಿಗೆ ನೆರವಾಗಿ ಆದರ್ಶ ಮೆರೆದಿದ್ದಾರೆ.ದೇವಾಲಯದ ಬಾಗಿಲು ತೆರೆದು ಭಕ್ತರಿಗೆ ದರ್ಶನ ಭಾಗ್ಯ ಸಿಕ್ಕಿದೆ ಆದರೆ ವಿದ್ಯಾದೇಗುಲದ ಬಾಗಿಲುಗಳು ಮಾತ್ರ ಇನ್ನೂ … [Read more...] about ಬಡ ವಿದ್ಯಾರ್ಥಿಗೆ ನೆರವಾದ ಆದರ್ಶ ಶಿಕ್ಷಕ ಪ್ರಕಾಶ ನಾಯ್ಕ
ವಿದ್ಯಾರ್ಥಿ
ರಾಜ್ಯಮಟ್ಟದ ಕರಾಟೆ ಛಾಂಪಿಯನ್ಶಿಪ್ ; ಹೃತಿಕ್ ಶಂಕರ ಮೇಸ್ತ ಪ್ರಥಮ
ಹೊನ್ನಾವರ: ರಾಜ್ಯ ಕರಾಟೆ ಶಿಕ್ಷಕರ ಸಂಘ ಕುಮಟಾದಲ್ಲಿ ಆಯೋಜಿಸಿದ 3ನೇ ರಾಜ್ಯಮಟ್ಟದ ಕರಾಟೆ ಛಾಂಪಿಯನ್ಶಿಪ್ ಕಿರಿಯರ ವಿಭಾಗದಲ್ಲಿ ಪಟ್ಟಣದ ಪ್ರಭಾತನಗರದ ಹೃತಿಕ್ ಶಂಕರ ಮೇಸ್ತ ಪ್ರಥಮ ಬಹುಮಾನ ಪಡೆದುಕೊಂಡಿದ್ದಾನೆ. ಎಂಪಿಇ ಸೊಸೈಟಿಯ ಸೆಂಟ್ರಲ್ ಸ್ಕೂಲನಲ್ಲಿ 1ನೇ ತರಗತಿ ವಿದ್ಯಾರ್ಥಿಯಾಗಿರುವ ಈತ ಹೊನ್ನಾವರ ಯಕ್ಷ ಕರಾಟೆ ತರಬೇತಿ ಕೇಂದ್ರದಲ್ಲಿ ಶಿಕ್ಷಕ ರಾಜೇಶ ಪಟಗಾರ ಇವರಿಂದ ತರಬೇತಿ ಪಡೆಯುತ್ತಿದ್ದಾನೆ. ಈತನ ಸಾಧನೆಗೆ ಶಾಲೆಯ ಶಿಕ್ಷಕರು ಹಾಗೂ ಊರನಾಗರಿಕರು ಹರ್ಷ … [Read more...] about ರಾಜ್ಯಮಟ್ಟದ ಕರಾಟೆ ಛಾಂಪಿಯನ್ಶಿಪ್ ; ಹೃತಿಕ್ ಶಂಕರ ಮೇಸ್ತ ಪ್ರಥಮ
ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ತೀರ್ಮಾನಕ್ಕೆ ವಿರೋಧ
ಹೊನ್ನಾವರ:ಕುಮಟಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕೆಲವರು ಒಂದು ಆದೇಶ ಹಾಕಿಸಿದ್ದು, ಅದರಲ್ಲಿ ಅಕ್ಟೋಬರ ರಜೆಯಲ್ಲಿ ಆರೂ ವಿಷಯಗಳ ಪಾಠವನ್ನು ಶಿಕ್ಷಕರು ಮಾಡಬೇಕೆಂದಿದೆ. ಇದನ್ನು ಹೊನ್ನಾವರ ಪ್ರದೇಶದಿಂದ ಕುಮಟಾ ತಾಲೂಕಿನ ವಿವಿಧ ಪ್ರೌಢಶಾಲೆಗೆ ಶಿಕ್ಷಕರಾಗಿರುವ ಕೆಲವರು ತೀವ್ರವಾಗಿ ವಿರೋಧಿಸಿದ್ದಾರೆ. ಈ ಕುರಿತು ಶಿಕ್ಷಣ ಸಚಿವರಿಗೆ ದೂರು ನೀಡಿದ್ದಾರೆ.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಆದೇಶವು ಅವೈಜ್ಞಾನಿಕವಾಗಿದ್ದು, ಇದರಿಂದ … [Read more...] about ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ತೀರ್ಮಾನಕ್ಕೆ ವಿರೋಧ
ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಬೈಸಿಕಲ್ ವಿತರಣೆ
ಹೊನ್ನಾವರ:ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಸರ್ಕಾರದಿಂದ ಒದಗಿಸಲಾದ 148 ಬೈಸಿಕಲ್ಗಳನ್ನು 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಬೈಸಿಕಲ್ ವಿತರಿಸಿ, ಪಟ್ಟಣ ಪಂಚಾಯತ ಅಧ್ಯಕ್ಷರಾದ ಜೈನಾಬಿ ಇಸ್ಮಾಯಿಲ್ ಸಾಬ್ ಮಾತನಾಡಿ ವಿದ್ಯಾರ್ಥಿಗಳಿಗೆ, ಸರ್ಕಾರದಿಂದ ಉಚಿತವಾಗಿ ಕೊಡಲಾಗುವ ಬಿಸಿಯೂಟ, ಕ್ಷೀರಭಾಗ್ಯ, ಬೈಸಿಕಲ್ಗಳ ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಬೇಕೆಂದು ಕರೆನೀಡಿದರು. ಪ.ಪಂ. ಸದಸ್ಯರಾದ ಸುರೇಶ ಶೇಟ್ ಮಾತನಾಡಿ … [Read more...] about ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಬೈಸಿಕಲ್ ವಿತರಣೆ
‘ಉತ್ತಮ ಹವ್ಯಾಸದಿಂದ ವೃತ್ತಿಗೆ ಇನ್ನಷ್ಟು ಮೆರಗು’
ಹೊನ್ನಾವರ:"ಸಂಗೀತ,ಸಾಹಿತ್ಯ,ಚಿತ್ರಕಲೆ ಮೊದಲಾದ ಹವ್ಯಾಸಗಳಿದ್ದರೆ ವ್ಯಕ್ತಿಯ ವೃತ್ತಿ ಜೀವನಕ್ಕೆ ಇನ್ನಷ್ಟು ಮೆರಗು ಪ್ರಾಪ್ತವಾಗುವ ಜೊತೆಗೆ ಆತನ ಬದುಕು ಸುಂದರವಾಗುತ್ತದೆ'ಎಂದು ಹವ್ಯಾಸಿ ಕರಕುಶಲ ಕಲಾವಿದರೂ ಆಗಿರುವ ಪ್ರೊ.ಪಿ.ಡಿ.ನಾಯ್ಕ ಅಭಿಪ್ರಾಯಪಟ್ಟರು. 33 ವರ್ಷಗಳ ಕಾಲ ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಗುರುವಾರ ವೃತ್ತಿಯಿಂದ ನಿವೃತ್ತರಾದ ತಮಗೆ ಕಾಲೇಜಿನಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ … [Read more...] about ‘ಉತ್ತಮ ಹವ್ಯಾಸದಿಂದ ವೃತ್ತಿಗೆ ಇನ್ನಷ್ಟು ಮೆರಗು’