ಹೊನ್ನಾವರ:
ಕುಮಟಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕೆಲವರು ಒಂದು ಆದೇಶ ಹಾಕಿಸಿದ್ದು, ಅದರಲ್ಲಿ ಅಕ್ಟೋಬರ ರಜೆಯಲ್ಲಿ ಆರೂ ವಿಷಯಗಳ ಪಾಠವನ್ನು ಶಿಕ್ಷಕರು ಮಾಡಬೇಕೆಂದಿದೆ. ಇದನ್ನು ಹೊನ್ನಾವರ ಪ್ರದೇಶದಿಂದ ಕುಮಟಾ ತಾಲೂಕಿನ ವಿವಿಧ ಪ್ರೌಢಶಾಲೆಗೆ ಶಿಕ್ಷಕರಾಗಿರುವ ಕೆಲವರು ತೀವ್ರವಾಗಿ ವಿರೋಧಿಸಿದ್ದಾರೆ. ಈ ಕುರಿತು ಶಿಕ್ಷಣ ಸಚಿವರಿಗೆ ದೂರು ನೀಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಆದೇಶವು ಅವೈಜ್ಞಾನಿಕವಾಗಿದ್ದು, ಇದರಿಂದ ವಿದ್ಯಾರ್ಥಿ-ಶಿಕ್ಷಕರಿಗೆ ಅನಾವಶ್ಯಕ ಹೊರೆಯಾಗುತ್ತದೆ ಎಂದಿದ್ದಾರೆ. ‘ವಿಶ್ವಾಸ ಕಿರಣ’ ಎಂಬ ಸರಕಾರವೇ ನಡೆಸುವ ಕಾರ್ಯಕ್ರಮ ಇರುವಾಗ ಸರಕಾರದ ಆದೇಶಕ್ಕೆ ಪರ್ಯಾಯವಾಗಿ – ದುರುದ್ದೇಶದಿಂದ ಇಂಥಹ ತಪ್ಪು ಆದೇಶ ಹೊರಡಿಸಿದವರನ್ನು ಅಮಾನತ್ತುಗೊಳಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
Leave a Comment