ಹೊನ್ನಾವರ: ರಾಜ್ಯ ಕರಾಟೆ ಶಿಕ್ಷಕರ ಸಂಘ ಕುಮಟಾದಲ್ಲಿ ಆಯೋಜಿಸಿದ 3ನೇ ರಾಜ್ಯಮಟ್ಟದ ಕರಾಟೆ ಛಾಂಪಿಯನ್ಶಿಪ್ ಕಿರಿಯರ ವಿಭಾಗದಲ್ಲಿ ಪಟ್ಟಣದ ಪ್ರಭಾತನಗರದ ಹೃತಿಕ್ ಶಂಕರ ಮೇಸ್ತ ಪ್ರಥಮ ಬಹುಮಾನ ಪಡೆದುಕೊಂಡಿದ್ದಾನೆ. ಎಂಪಿಇ ಸೊಸೈಟಿಯ ಸೆಂಟ್ರಲ್ ಸ್ಕೂಲನಲ್ಲಿ 1ನೇ ತರಗತಿ ವಿದ್ಯಾರ್ಥಿಯಾಗಿರುವ ಈತ ಹೊನ್ನಾವರ ಯಕ್ಷ ಕರಾಟೆ ತರಬೇತಿ ಕೇಂದ್ರದಲ್ಲಿ ಶಿಕ್ಷಕ ರಾಜೇಶ ಪಟಗಾರ ಇವರಿಂದ ತರಬೇತಿ ಪಡೆಯುತ್ತಿದ್ದಾನೆ. ಈತನ ಸಾಧನೆಗೆ ಶಾಲೆಯ ಶಿಕ್ಷಕರು ಹಾಗೂ ಊರನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
Leave a Comment