ದಾಂಡೇಲಿ:
ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರು, ಚಾಲಕರು, ನೀರು ಸರಬರಾಜು ಮತ್ತಿತರ ವಿಭಾಗಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಗುತ್ತಿಗೆದಾರರ ಶೋಷಣೆಯಿಂದ ಮುಕ್ತಗೊಳಿಸಿ ನೇರವಾಗಿ ನಗರ ಸ್ಥಳೀಯ ಸಂಸ್ಥೆಗಳೇ ವೇತನ ಪಾವತಿಸುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಜಂಟಿ ಕಾರ್ಮಿಕ ಸಂಘಟನೆಗಳ ನೇರ್ತತ್ವದಲ್ಲಿ ಕೆಲಸ ನಿಲ್ಲಿಸಿ ಜೂನ್ 12 ರಿಂದ ಆರಂಭವಾಗಿರುವ ಪ್ರತಿಭಟನೆಯ ಭಾಗವಾಗಿ ದಾಂಡೇಲಿಯಲ್ಲಿ ಗುತ್ತಿಗೆ ಪೌರ ಕಾರ್ಮಿಕರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿಶೇಷ ತಹಶೀಲ್ದಾರ್ ಮುಖಾಂತರ ಸೋಮವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕಾಂಗ್ರೇಸ್ ಪಕ್ಷವು ಅಧಿಕಾರಕ್ಕೆ ಬರುವ ಮೊದಲು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಪೌರಸಂಸ್ಥೆಯಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡುವುದಾಗಿ ಹೇಳಿತ್ತು. ತದನಂತರ ತಮ್ಮ ಮೊದಲ ಬಜೆಟ್ನಲ್ಲಿ ಪುನಃ ಉಚ್ಛರಿಸಿ ಸಚಿವ ಸಂಪುಟದಲ್ಲಿ ರಾಜ್ಯದ ಪೌರಕಾರ್ಮಿಕರನ್ನು 2017 ಮಾರ್ಚ 31ರ ಒಳಗೆ ಖಾಯಂ ಮಾಡುವುದಾಗಿ ಹೇಳಿತ್ತಾದರೂ, ಇನ್ನುವರೆಗೆ ಭರವಸೆಯನ್ನು ಈಡೇರಿಸಿಲ್ಲ.
ಭವಿಷ್ಯನಿಧಿ ಇ.ಎಸ್.ಐಗಳಂತಹ ಸಾಮಾಜಿಕ ಭದ್ರತೆಗಳಿಂದ ವಂಚಿಸಲಾಗಿದೆ. ಪೌರಸಂಸ್ಥೆಗಳು ಗುತ್ತಿಗೆದಾರರ ಮೂಲಕ ವೇತನ ಪಾವತಿಸುವುದರಿಂದ ಗುತ್ತಿಗೆದಾರ, ಸಂಸ್ಥೆಯ ಕಾರ್ಮಿಕರಿಗೆ ನಿಗದಿಮಾಡಿದ ವೇತನ, ಭವಿಷ್ಯನಿಧಿ, ಕೊಡದೇ ವಂಚಿಸುತ್ತಿದ್ದಾನೆ. ನಗರ ಸ್ಥಳೀಯ ಸಂಸ್ಥೆಗಳು ಅದು ಗುತ್ತಿಗೆದಾರನ ಕೆಲಸವೆಂದು ತಪ್ಪಿಸಿಕೊಳ್ಳುವುದು ಕರ್ನಾಟಕದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆದಿದೆ. ಸರಕಾರ ಮತ್ತು ಪೌರಸಂಸ್ಥೆ ಖಜಾನೆಯಿಂದ ವೇತನದ ಪೂರ್ಣ ಹಣ ಗುತ್ತಿಗೆದಾರನಿಗೆ ಸಂದಾಯಿಸಿದರೂ ಗುತ್ತಿಗೆದಾರ ಕಾರ್ಮಿಕರಿಗೆ ಶೋಷಣೆ ಮಾಡುವುದರ ಮೂಲಕ ಸರಕಾರಕ್ಕೆ ಕೆಟ್ಟ ಹೆಸರನ್ನು ತರುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮನೆ-ಮನೆ ಕಸ ಸಂಗ್ರಹಿಸುವ ಕಾರ್ಮಿಕರಿಗೂ ಮತ್ತು ಚಾಲಕರಿಗೆ ವೇತನ ಕೇಳಿದ ಕಾರಣಕ್ಕಾಗಿ ಕೆಲಸ ನಿಲ್ಲಿಸಿರುವುದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದ್ದರಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪದ್ಧತಿ ನಿರ್ಮೂಲನೆ ಮಾಡಿ ಹಂತಹಂತವಾಗಿ ಖಾಯಂ ಮಾಡಲು ಮುಂದಾಗಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೌರ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಡಿ. ಸ್ಯಾಮಸನ್, ಪದಾಧಿಕಾರಿಗಳಾದ ರಝಾಕ್, ಬಾಬುರಾಯ್, ಯಾಕುಬ್ ಜಾಕೋಬ ದರ್ಶಿ ಮುಂತಾದವರಿದ್ದ
Leave a Comment