ಹೊನ್ನಾವರ;
ತಾಲೂಕಿನ Àಕರ್ಕಿ: ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಹಶೀಲ್ದಾರ್ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೊನ್ನಾವರ ತಾಲೂಕಾ ಸಮಿತಿ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶ ಮಧುಕರ ಪಿ. ಭಾಗವತ ಕೆ. ಮಕ್ಕಳು ಭವಿಷ್ಯದ ನಾಗರಿಕರಾಗಿದ್ದಾರೆ. ಮಗುವನ್ನು ಆಸ್ತಿಯನ್ನಾಗಿ ಪರಿಗಣಿಸಬಾರದು. ಬಾಲ ಕಾರ್ಮಿಕರಾಗುವ ಮೂಲಕ ಅವರ ಜೀವನ ಹಾಳಾಗಬಾರದು ಎಂದರು. ನೀಡಿದ ವಕೀಲೆ ಶಿಲ್ಪಾ ನಾಯ್ಕ ಬಾಲ ಕಾರ್ಮಿಕರಾಗಲು ಮುಖ್ಯ ಕಾರಣ ಬಡತನ ಹಾಗೂ ಅಜ್ಞಾನವಾಗಿದೆ 14 ನೇ ವರ್ಷದ ವರೆಗೆ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಸಿಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ. ಎಸ್. ಭಟ್ಟಮಾತನಾಡಿ ಕಾಯಿದೆ ಇದ್ದರೇ ಮಾತ್ರ ಎಲ್ಲಾ ಅನಿಷ್ಟಗಳು ನಿವಾರಣೆಯಾಗುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಕೃಷ್ಣಮೂರ್ತಿ ಹೆಬ್ಬಾರ್ ಅವರು ಮಾತನಾಡಿ ಜೀವನವನ್ನು ರೂಪಿಸಿಕೊಳ್ಳಲು ಶಿಕ್ಷಣ ಅತ್ಯಗತ್ಯ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಕೆ.ಆರ್.ನಾಯ್ಕ ಮಾತನಾಡಿ ಬದುಕಿನ ಶ್ರೇಷ್ಠ ಭಾಗವಾದ ಬಾಲ್ಯವನ್ನು ಅನುಭವಿಸಲು ಪ್ರತಿಯೊಂದು ಮಗುವಿಗೆ ಅನುವು ಮಾಡಿಕೊಡಲು ನಾವೆಲ್ಲರೂ ಶ್ರಮಿಸಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯ ಎಲ್. ಎಮ್. ಹೆಗಡೆ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಾವತಿ ಹೆಗಡೆ ವಂದಿಸಿದರು. ಶಿಕ್ಷಕರಾದ ಜಿ. ಕೆ. ಭಟ್ಟ ಕಾರ್ಯಕ್ರಮ ನಿರೂಪಿಸಿದರು.
Leave a Comment