ಹೊನ್ನಾವರ:
ಮೆಕ್ಕಾದ ಕಾಬಾ ಮಸೀದಿಯ ಬಗ್ಗೆ ವ್ಯಂಗ್ಯವಾಗಿ ಫೇಸ್ಬುಕ್ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕಿನ ಮುಸ್ಲಿಂ ಸಂಘಟನೆಗಳು ಹೊನ್ನಾವರ ಠಾಣೆಗೆ ಜಮಾಯಿಸಿ ಪೊಲೀಸರಿಗೆ ಹಾಗೂ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಹೊನ್ನಾವರ ಜಮಾತನ ಅಧ್ಯಕ್ಷ ಅಜಾದ್ ಅಣ್ಣೀಗೇರಿ ಮಾತನಾಡಿ ಹೊನ್ನಾವರ ಜೈವಂತ ನಾಯ್ಕ ಎಂಬಾತ ಫೇಸ್ಬುಕ್ನಲ್ಲಿ ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಮೆಕ್ಕಾದ ಕಾಬಾ ಮಸೀದಿಯ ಬಗ್ಗೆ ವ್ಯಂಗ್ಯಚಿತ್ರ ಹರಿಬಿಟ್ಟಿದ್ದಾನೆ. ಪವಿತ್ರವಾದ ಮಸಿದಿಯ ಬಗ್ಗೆ ವ್ಯಂಗ್ಯ ಮಾಡಿ ಫೇಸ್ಬುಕ್ನಲ್ಲಿ ಪ್ರಸಾರ ಮಾಡಿರುವುದು ಜಗತ್ತಿನ ಎಲ್ಲಾ ಮುಸ್ಲಿಂ ಬಾಂಧವರಿಗೆ ನೋವನ್ನುಂಟು ಮಾಡಿದೆ. ಇದರಿಂದ ಸಮಾಜದ ಶಾಂತತೆಯನ್ನು ಇನ್ನಷ್ಟು ಹದಗೀಡು ಮಾಡಲು ಪ್ರೇರೇಪಿಸುವ ಕೃತ್ಯವೆಸಗಿದ್ದಾನೆ. ರಂಜಾನ್ ತಿಂಗಳಲ್ಲೇ ಇಂತಹ ವ್ಯಂಗ್ಯ ಚಿತ್ರವನ್ನು ಫೇಸ್ಬುಕ್ ಜಾಲತಾಣಗಳಲ್ಲಿ ವೈರಲ್ ಮಾಡಿರುವುದು ನಮ್ಮ ಮುಸ್ಲೀಂ ಸಮಾಜಕ್ಕೆ ನೋವನ್ನುಂಟು ಮಾಡಿದೆ. ಅನ್ಯ ಧರ್ಮದ ವಿರುದ್ಧ ಶಾಂತಿ ಕದಡುವ ಮತ್ತು ಅಪಪ್ರಚಾರ ಮಾಡುವ ಆರೋಪಿ ಜೈವಂತ ನಾಯ್ಕನನ್ನು ಕೂಡಲೇ ಬಂಧಿಸಬೇಕು. ಶೀಘ್ರದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸದೇ ಇದ್ದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ಕುರಿತು ಪಿಎಸ್ಐ ಆನಂದಮೂರ್ತಿ ಆರೋಪಿ ಜೈವಂತ ನಾಯ್ಕ ಮೇಲೆ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಜಮಾತುಲ್ ಸಾಬ್ ಅಬ್ದುಲ್ ಖಾದರ್ ಕೋಟೆಬಾಗಿಲು, ಹುಸೇನ್ ಖಾದ್ರಿ, ಇಮಾಮ್ ಘನಿ, ಶಫಿ ಮುಲ್ಲಾ, ಅನ್ವರ್ ಕೋಟೆಬಾಗಿಲು, ವಸೀಮ್ ಶೇಖ್, ಅಖಿಲ್ ಖಾಜಿ ಇತರರು ಇದ್ದರು.
Leave a Comment