ಕಾರವಾರ:
ಕಣಸಗಿರಿಯ ಸರ್ವೇ ನಂ. 95ರ ಗೋಮಾಳ ಜಾಗದಲ್ಲಿ ಗೋ ಶಾಲೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಕರುನಾಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಕಾರವಾರ ತಾಲೂಕಿನಲ್ಲಿ ದನ ಕರುಗಳು ವೀಪರಿತವಾಗಿ ಹೆಚ್ಚಿದೆ. ರಸ್ತೆಗಳ ಮೇಲೆ ಹೆಚ್ಚಾಗಿ ನಿಂತಿರುವುದರಿಂದ ರಸ್ತೆ ಸಂಚಾರಿಗಳಿಗೆ ಅಪಘಾತವಾಗುವ ಸಂಭವವಿದೆ. ರಾತ್ರಿ ವೇಳೆಯು ರಸ್ತೆಯ ಮೇಲೆ ದನಗಳು ನಿಲ್ಲುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಅಪಘಾತಕ್ಕೂ ಕಾರಣವಾಗುತ್ತಿದೆ ಎಂದು ವಿವರಿಸಿದರು. ದಿಕ್ಕುದೆಸೆ ಇಲ್ಲದ ಅನೇಕ ದನ-ಕರುಗಳು ಅನಾರೋಗ್ಯದಿಂದ ಬಳಲುತ್ತಿದ್ದು ಅನೇಕ ಕಡೆ ಸಾವಿಗೀಡಾಗುತ್ತಿದೆ. ಈ ಜಾನುವಾರುಗಳಿಗೆ ರಕ್ಷಣೆ ಕಲ್ಪಿಸುವ ದೃಷ್ಟಿಯಿಂದ ಪ್ರಾಣಿದಯಾ ಸಂಘವನ್ನು ರಚಿಸಿ ಅದರ ಮೂಲಕ ಕಣಸಗಿರಿಯ ಗೋಮಾಳ ಜಾಗದಲ್ಲಿ ಗೋ ಶಾಲೆಯನ್ನು ಪ್ರಾರಂಭಿಸಿ ಗೋ ರಕ್ಷಣೆ ಮಾಡಬೇಕು. ಈ ಕಾರ್ಯವನ್ನು ಕರುನಾಡ ರಕ್ಷಣಾ ವೇದಿಕೆ ಜವಾಬ್ದಾರಿ ವಹಿಸಿಕೊಳ್ಳಲು ಬದ್ಧವಾಗಿದೆ ಎಂದು ಹೇಳಿದ್ದಾರೆ.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಶಾಸಕ ಸತೀಶ ಸೈಲ್ ಅಧಿಕಾರಿಗಳ ಜೊತೆಗೆ ಈ ಬಗ್ಗೆ ಚರ್ಚೆ ನಡೆಸಿ ಶೀಘ್ರವೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮನವಿ ಸಲ್ಲಿಸುವ ನಿಯೋಗದಲ್ಲಿ ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಎನ್. ದತ್ತಾ, ಆನಂದು ನಾಯ್ಕ, ಸುನೀಲ್ ನಾಯ್ಕ, ದೀಪಕ ಕುಡಾಳಕರ್, ಮನೋಜ್ ಗುನಗಿ, ಮಂಗೇಶ ನಾಯ್ಕ, ವಿನಯ ಕೋಳ್ವೇಕರ್, ರಾಮದಾಸ ನಾಯ್ಕ, ವಿವೇಕ ಗುನಗಿ, ಗುರುದಾಸ ನಾಯ್ಕ, ವಿಜಯ ಶೆಟ್ಟಿ, ಶ್ರೀಧರ ಭಟ್, ಅನಮೋಲ ರೇವಣಕರ್, ಉದಯ ಬೋಳಶೆಟ್ಟಿ ಇದ್ದರು.
Leave a Comment