ಕಾರವಾರ:
ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಸೀಬರ್ಡ್ ನೌಕಾನೆಲೆಯ ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 120 ಯುನಿಟ್ ರಕ್ತ ಸಂಗ್ರಹಿಸಲಾಯಿತು.
ನೌಕಾಸೇನೆ ಕರ್ನಾಟಕ ವ್ಯಾಪ್ತಿಯ ಕಮಾಂಡಿಂಗ್ ಆಫೀಸರ್, ರೀಯರ್ ಅಡ್ಮಿರಲ್ ಕೆ. ಜೆ. ಕುಮಾರ ಶಿಬಿರ ಉದ್ಘಾಟಿಸಿದರು. ನೌಕಾ ಸೈನಿಕರು, ಅಧಿಕಾರಿಗಳು ಹಾಗೂ ಕುಟುಂಬ ವರ್ಗದವರು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು. ಪತಂಜಲಿ ಆಸ್ಪತ್ರೆಯ ಕಮಾಂಡಿಂಗ್ ಆಫೀಸರ್ ಕ್ಯಾಪ್ಟನ್ ಅಜಿತ್ ಗೋಪಿನಾಥ್, ಜಿಲ್ಲಾ ಆರೋಗ್ಯಾಕಾರಿ ಡಾ. ಅಶೋಕ ಕುಮಾರ್, ಡಾ. ಮಹಾಬಲೇಶ್ವರ ಹೆಗಡೆ ಇತರರು ಪಾಲ್ಗೊಂಡಿದ್ದರು.
Leave a Comment