ದಾಂಡೇಲಿ;
ಸ್ವಸ್ಥ ಆರೋಗ್ಯ ನಿರ್ಮಾಣಕ್ಕೆ ಯೋಗ ಸಹಕಾರಿಯಾಗಿದ್ದು, ಪ್ರತಿನಿತ್ಯ ಯೋಗಭ್ಯಾಸವನ್ನು ಮಾಡುವುದರ ಮೂಲಕ ರೋಗ ರುಜಿನಗಳಿಂದ ದೂರವಿರಲು ಸಾಧ್ಯ. ಈ ನಿಟ್ಟಿನಲ್ಲಿ ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಭಾರತ ವಿಶ್ವ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳುವುದರ ಮೂಲಕ ಜಗತ್ತಿಗೆ ಮಾದರಿ ಸಂದೇಶವನ್ನು ನೀಡಿದೆ ಎಂದು ನಗರದ ಕಾಗದ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಎಸ್.ಎನ್.ಪಾಟೀಲ ಹೇಳಿದರು.
ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಬುಧವಾರ ನಗರದ ಅರಿವು ಫೌಂಡೇಶನ್ ಆಶ್ರಯದಲ್ಲಿ ಸ್ಥಳೀಯ ಸುಭಾಸ ನಗರದಲ್ಲಿರುವ ಒಳ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದೈನಂದಿನ ಜೀವನದಲ್ಲಿ ಯೋಗಭ್ಯಾಸಕ್ಕೆ ಒತ್ತು ನೀಡಬೇಕಾದ ಅನಿವಾರ್ಯತೆಯಿದೆ. ನಮ್ಮ ಆರೋಗ್ಯ ರಕ್ಷಣೆ ನಮ್ಮ ಕೈಯಲ್ಲಿದ್ದು, ಪ್ರತಿಯೊಬ್ಬರು ಯೋಗಭ್ಯಾಸವನ್ನು ಮಾಡುವುದರ ಮೂಲಕ ಆರೋಗ್ಯವಂತ ರಾಷ್ಟ್ರ ನಿರ್ಮಾಣಕ್ಕೆ ಪಣತೊಡಬೇಕೆಂದು ಎಸ್.ಎನ್.ಪಾಟೀಲ ಕರೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅರಿವು ಪೌಂಡೇಶನ್ ಸಂಸ್ಥೆಯ ಅಧ್ಯಕ್ಷ ರೋಶನ್ ನೇತ್ರಾವಳಿಯವರು ಪ್ರಧಾನಿ ಮೋಧಿಜಿಯವರ ಆಶಯದಂತೆ ದೇಶದ ಎಲ್ಲೆಡೆಗಳಲ್ಲಿ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಸುಂದರ ಮತ್ತು ಆರೋಗ್ಯವಂತ ಬದುಕಿಗೆ ಯೋಗ ಉಪಯುಕ್ತ ಮಾರ್ಗವಾಗಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಅರಿವು ಪೌಂಡೇಶನ್ ವಿಶೇಷವಾದ ಕಾಳಜಿಯನ್ನು ಹೊಂದಿದೆ ಎಂದರು.
ಗೌರವ ಅತಿಥಿಗಳಾಗಿ ಡಿವೈಎಸ್ಪಿ ಡಿ.ಎಸ್.ಪವಾರ್, ರೋಟರಿ ಕ್ಲಬ್ ಅಧ್ಯಕ್ಷ ರವಿ ನಾಯ್ಕ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಉಪೇಂದ್ರ ಘೋರ್ಪಡೆ, ಪ್ರೆಸ್ ಕ್ಲಬ್ ಕಾರ್ಯದರ್ಶಿ ಯು.ಎಸ್.ಪಾಟೀಲ, ಉಪನ್ಯಾಸಕಿ ಹಾಗೂ ಕವಯತ್ರಿ ನಾಗರೇಖಾ ಗಾಂವಕರ, ಜೊಯಿಡಾ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಅಬ್ದುಲ್ ರೆಹಮಾನ್ ಅವರುಗಳು ಭಾಗವಹಿಸಿದ್ದರು.
ಯೋಗ ಗುರು ಎಚ್.ಎಸ್.ಉದ್ದಂಡಿಯವರಿಂದ ಯೋಗ ಕಾರ್ಯಕ್ರಮವು ಜರುಗಿತು. ಈ ಸಂದರ್ಭದಲ್ಲಿ ಅರಿವು ಪೌಂಡೇಶನ್ ವತಿಯಿಂದ ಎಚ್.ಎಸ್.ಉದ್ದಂಡಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಗರದ ಜನತೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸದರು.
ಪ್ರಶಾಂತ ಬಸೂರ್ತೆಕರ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಚಂದ್ರು ಮಾಳಿ ವಂದಿಸಿದರು. ಪತ್ರಕರ್ತ ಸಂದೇಶ್.ಎಸ್.ಜೈನ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಅರಿವು ಪಂಡೇಶನ್ ಸಂಸ್ಥೆಯ ಪದಾಧಿಕಾರಿಗಳಾದ ಸಂಜಯ ಚವ್ಹಾಣ್, ಪ್ರಶಾಂತ ಬಸೂರ್ತೆಕರ, ಜಗಮಲಸಿಂಗ್ ರಾಥೋಡ, ದಶರಥ ಬಂಡಿವಡ್ಡರ, ಅನಂತರಾಜ ನಾಯಕ, ರವಿ ಗಾಂವಕರ, ಗಜಾನನ ನಾಯ್ಕ, ಚಂದ್ರು ಮಾಳಿ, ರಾಹುಲ್ ಮಠಪತಿ, ಕಿರಣ ರಜಪೂತ, ವಿಷ್ಣು ವಾಜವೆ ಸಹಕರಿಸಿದರು
Leave a Comment