ಕಾರವಾರ;
ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ (ವಿಮಾ) ಯೋಜನೆಯನ್ನು ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಭತ್ತ, ಮುಸುಕಿನ ಜೋಳ, ಹತ್ತಿ, ಮತ್ತು ನೀರಾವರಿ ಭತ್ತ ಬೆಳೆಗಳಿಗೆ ಮಾತ್ರ ವಿಮಾ ಸೌಲಭ್ಯವನ್ನು ಮುಂದುವರಿಸಲಾಗಿದೆ.
ಭತ್ತ (ಮಳೆಯಾಶ್ರಿತ) ಸಾಮಾನ್ಯ ವಿಮೆಗೆ ಪ್ರತಿ ಹೆಕ್ಟೇರ ಗೆ ವಿಮಾ ಮೊತ್ತ 54000.00 ರೂ ಹಾಗೂ ವಿಮಾ ಕಂತು 1080.00 ರೂ. ಭತ್ತ (ನೀರಾವರಿ) ವಿಮಾ ಮೊತ್ತ 85000.00 ರೂ ಮತ್ತು ವಿಮಾ ಕಂತು 170.00 ರೂ. ಮುಸುಕಿನ ಜೋಳ (ಮಳೆಯಾಶ್ರಿತ) ವಿಮಾ ಮೊತ್ತ 50000.00 ರೂ ಮತ್ತು ವಿಮಾ ಕಂತು 1000.00 ರೂ ಹತ್ತಿ(ಮಳೆಯಾಶ್ರಿತ) 43000.00 ರೂ ಮತ್ತು ವಿಮಾ ಕಂತು 2150.00 ರೂ ಅನ್ವಯಿಸುತ್ತದೆ.
ಈ ಯೋಜನೆಯಡಿಯಲ್ಲಿ ಬೆಳೆ ಸಾಲ ಪಡೆಯುವ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವದಕ್ಕೆ ದಾಖಲೆಗಳಾದ ಪಹಣಿ/ಖಾತೆ/ಪಾಸಬುಕ್/ಕಂದಾಯ ರಸೀದಿಗಳನ್ನು ನೀಡಿ ಜುಲೈ 31ರೊಳಗೆ ನಿಗದಿಪಡಿಸಿದ ವಿಮಾ ಕಂತನ್ನು ಕಟ್ಟಿ ನೊಂದಾಯಿಸಿಕೊಳ್ಳಬಹುದು, ಹಾಗೂ ಅಂದಾಜು ಬೆಳೆ ಬಿತ್ತನೆ ಆದಾರದ ಮೇಲೆ ಬಿತ್ತನೆ ಪೂರ್ವದಲ್ಲಿ ಪಾಲ್ಗೊಳ್ಳಬಹುದು. ಬೆಳೆ ವಿಮೆಗೆ ನೊಂದಾಯಿಸಿದ ನಂತರ ಬೇರೆ ಬೆಳೆ ಬಿತ್ತನೆ ಮಾಡಿದಲ್ಲಿ ಯೋಜನೆಯಲ್ಲಿ ಬಾಗವಹಿಸಲು ನಿಗದಿಪಡಿಸಿದ ಕೊನೆಯ ದಿನಕ್ಕಿಂತ ಮುಂಚಿತವಾಗಿ ನೊಂದಾಯಿಸಿದ ಆರ್ಥಿಕ ಸಂಸ್ಥೆಗಳಲ್ಲಿ ಬಿತ್ತನೆ ದೃಡಿಕರಣ ಪತ್ರ ನೀಡಿ ವಿಮೆ ಮಾಡಿಸಿದ ಬೆಳೆಯನ್ನು ಬದಲಾಯಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ , ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ಜಂಟಿ ನಿರ್ದೇಶಕರ ಕಛೇರಿ ಸಂಪರ್ಕಿಸಲು ಕಾರವಾರ ಜಂಟಿ ಕೃಷಿ ನಿರ್ರ್ದೆಶಕರು ತಿಳಿಸಿದ್ದಾರೆ.
Leave a Comment