ದಾಂಡೇಲಿ:
ಮಹಿಳೆಯೊಂದಿಗೆ ಅನುಚಿತವಾಗಿ ನಡೆದುಕೊಂಡ ಹಳಿಯಾಳ ತಾಲೂಕಿನ ಕಮಾಲ್ಸಾಬ್ ಯಾಕುಬ್ಸಾಬ್ ಮುಜಾವರ ಈತನ ವಿರುದ್ದ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಅಜಗಾಂವದ ಮಹಿಳೆ ಯಲ್ಲವ್ವ ಪೆಡ್ನೇಕರ ಇವರು ಅವರ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಕಮಾಲಸಾಬ್ ಮುಜಾವರ ಎಂಬಾತ ಬಂದು ಆಕೆಗೆ ಅನೈತಿಕ ಕೆಲಸಕ್ಕೆ ಕರೆದು, ಅನುಚಿತವಾಗಿ ನಡೆದುಕೊಂಡಿದ್ದಾನೆ, ತನ್ನ ಜೊತೆ ಬಾ ಎಂದು ಕೈ ಹಿಡಿದು ಎಳೆದಿದ್ದಾನೆ ಎಂದು ಆರೋಪಿಸಿ ಅಂಜನಾ ಪೆಡ್ನೇಕರ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಪೊಲೀಸರು ಕಮಾಲಸಾಬ್ ಮುಜಾವರನನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಪ್ರತಿ ದೂರು: ಹಳಿಯಾಳ ತಾಲೂಕಿನ ಅಜಗಾಂವ ಗ್ರಾಮದ ಕಮಾಲ್ಸಾಬ್ ಯಾಕುಬ್ ಸಾಬ್ ಮುಜಾವರ್ ಇವರು ಅದೇ ಗ್ರಾಮದ ಪ್ರಕಾಶ ಸೋಮಲಿಂಗ್ ಪೆಡ್ನೇಕರ, ಅಂಜನಾ ಪ್ರಕಾಶ ಪೆಡ್ನೇಕರ್, ಹಾಗೂ ಲಲಿತಾ ಸೋಮಲಿಂಗ್ ಪೆಡ್ನೇಕರ ವಿರುದ್ದ ದಾಂಡೇಲಿ ಗ್ರಾಮೀಣ ಪೊಲಿಸ್ ಠಾಣೆಯಲ್ಲಿ ಜಾತಿ ನಿಂದನೆ, ಜೀವ ಬೆದರಿಕೆ ದೂರು ದಾಖಲಿಸಿದ್ದಾರೆ.
ತಾನು ತನ್ನ ಹೊಲದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಪಕ್ಕದ ಹೊಲದಲ್ಲಿದ್ದ ಆರೋಪಿತರು ನನಗೆ ಅವಾಚ್ಯ ಶಬ್ದಗಳಿಂದ ಬೈದು, ನೀನು ಸಿದ್ದಿ ಇದ್ದಿರುವೆ. ನಿನ್ನು ಕೊಂದು ಹಾಕುತ್ತೇವೆ., ನಿಮ್ಮ ಅಂಬೇಡ್ಕರ ಪುತ್ಥಳಿಗೆ ಬೆಂಕಿ ಹಚ್ಚಿ ಸುಟ್ಟು ಬಿಡುತ್ತೇವೆ. ನಿಮಗೆ ಸೊಕ್ಕು ಬಂದಿದೆ. ನಿಮಗೆ ಊರಿಂದ ಹೊರ ಹಾಕುತ್ತೇವೆ ಎಂಬಲ್ಲ ರೀತಿಯಲ್ಲಿ ಬೆದರಿಕೆ ಹಾಕಿರುತ್ತಾರೆಂದು ಕಮಾಲಸಾಬ್ ಮುಜಾವರ ದೂರಿನಲ್ಲಿ ತಿಳಿಸಿದ್ದಾರೆ. ದಾಂಡೇಲಿ ಗ್ರಾಮೀಣ ಠಾಣೆಯ ಪಿ.ಎಸ್.ಐ ಪಿ.ವಿ. ಕೊನ್ನೂರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment