ಕಾರವಾರ:
ರಾಜ್ಯ ಸರಕಾರ 2017-18ನೇ ಸಾಲಿನಲ್ಲಿ ಭೂಚೇತನ ಯೋಜನೆಯಡಿ ಈ ಪ್ರೋತ್ಸಾಹ ಧನ ವಿತರಣೆಗೆ 100 ಕೋಟಿ ಮೀಸಲಿಟ್ಟಿದೆ
ಯಂತ್ರೋಪಕರಣಗಳ ಬಳಕೆಗಾಗಿ ಪ್ರತಿ ಫಲಾನುಭವಿ ರೈತನಿಗೆ ಗರಿಷ್ಠ ಎರಡು ಹೆಕ್ಟೇರ್ಗೆ ಮಾತ್ರ ಸೀಮಿತ ವಾಗುವಂತೆ (ಪ್ರತಿ ಹೆಕ್ಟೇರ್ಗೆ 1,500 ರಂತೆ) ಉತ್ತೇಜನ ನೀಡುವುದು. ಯಂತ್ರೋಪಕರಣಗಳನ್ನು ಯಂತ್ರಧಾರಾ ಘಟಕಗಳಿಂದ ಬಾಡಿಗೆಗೆ ಪಡೆಯುವುದು. ಅಥವಾ ಖಾಸಗಿಯವರಲ್ಲಿ ಈ ಯಂತ್ರೋಪಕರಣಗಳು ಲಭ್ಯವಿದ್ದಲ್ಲಿ ಫಲಾನುಭವಿ ರೈತರು ಯಂತ್ರೋಪ ಕರಣಗೆ ಬಳಸಿರುವ ಕುರಿತ ಜಿಇಒ ಟ್ಯಾಗಿಂಗ್ ಮುಖಾಂತರ ದೃಢೀಕರಿಸಿ ಪ್ರೋತ್ಸಾಹಧನ ನೀಡುವುದು ಇಲಾಖೆ ಕೆಲಸವಾಗಿದೆ. ಕೃಷಿ ಅಭಿವೃದ್ಧಿಗೆ ಪೂರಕವಾದ ಸುಧಾರಿತ ತಂತ್ರಜ್ಞಾನವನ್ನು ಸರಿಯಾದ ಸಮಯದಲ್ಲಿ ಅಳವಡಿಸಿದಲ್ಲಿ ಮಾತ್ರ ಉತ್ಪಾದನೆ ಹೆಚ್ಚಳ ಸಾಧ್ಯವಾಗುತ್ತದೆ. ಇದನ್ನು ಕೇಂದ್ರೀಕರಿಸಿ ರೈತರಿಂದ ಪ್ರಾತ್ಯಕ್ಷಿಕೆ ರೂಪದಲ್ಲಿ ಅನುಷ್ಠಾನಗೊಳಿಸುವುದು, ರೈತರಲ್ಲಿ ಲಭ್ಯವಿರುವ ಸಂಪನ್ಮೂಲಗಳ ಬಳಕೆಗೆ ಪ್ರೇರೇಪಿಸುವುದು ಭೂಚೇತನ ಯೋಜನೆಯ ಉದ್ದೇಶ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೋವಿಂದ ಗೌಡ. ಜಿಲ್ಲೆಯಲ್ಲಿ ಕಳೆದ ವರ್ಷ ಸುಧಾರಿತ ಯಂತ್ರೋಪಕರಣಗಳನ್ನು ಬಳಸಿಜಕೊಂಡು 1,200 ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿ ಕೃಷಿ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸುಮಾರು 5,250 ರೈತರು ಇದರ ಪ್ರಯೋಜನ ಪಡೆದಿದ್ದಾರೆ. ಪ್ರೋತ್ಸಾಹ ಧನ ನೀಡುವುದರಿಂದ ಯಂತ್ರೋಪಕರಣಗಳ ಬಳಕೆ ಇನ್ನೂ ಹೆಚ್ಚುವ ನಿರೀಕ್ಷೆ ಇದೆ. ಅಲ್ಲದೆ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಪ್ರೋತ್ಸಾಹ ಧನವನ್ನು ಜಮೆ ಮಾಡಲಾಗುವುದು ಎಂದು ವಿವರಿಸುತ್ತಾರೆ.
ನೂತನವಾಗಿ ಆವಿಷ್ಕಾರಗೊಂಡ ಸುಧಾರಿತ ಯಂತ್ರೋಪಕರಣಗಳನ್ನು ಹೆಚ್ಚು ಹೆಚ್ಚು ಬಳಸುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಕೆಲಸವನ್ನು ಮಾಡಲು ಇದು ಸಹಕಾರಿಯಾಗಿದ್ದು, ಇಂತಹ ಯಂತ್ರೋಪಕರಣಗಳನ್ನು ಬಳಸಿ ಕೃಷಿಯಲ್ಲಿ ತೊಡಗಿಕೊಳ್ಳುವವರಿಗೆ ಪ್ರೋತ್ಸಾಹ ನೀಡಲು ಮುಂದಾಗಿದೆ.
ಕೃಷಿಯಲ್ಲಿ ಭತ್ತದ ಯಾಂತ್ರೀಕೃತ ನಾಟಿ ಯಂತ್ರ, ಲೇಸರ್ ಲ್ಯಾಂಡ್ ಲೆವಲ್ಲರ್ ಅಥವಾ ಲ್ಯಾಂಡ್ ಲೆವೆಲ್ಲರ್, ಭತ್ತದ ಹುಲ್ಲಿನ ಬೇಲರ್, ರಿಲೆ ಪ್ಲಾಂಟರ್ ಅಥವಾ ಮಲ್ಟಿ ಕ್ರಾಪ್ ಜಿರೋ-ಟಿಲ್ ಪ್ಲಾಂಟರ್, ಭತ್ತ ಬಿತ್ತನೆಗೆ ಸುಧಾರಿತ ಕೂರಿಗೆ ಕಬ್ಬು ಅರೆಯುವ ಯಂತ್ರಗಳನ್ನು ರೈತರು ಬಳಕೆ ಮಾಡಿದರೆ ಅಂತವರು ಪ್ರೋತ್ಸಾಹಧನ ಪಡೆಯಲು ಅರ್ಹರಿರುತ್ತಾರೆ.
Leave a Comment