ಹೊನ್ನಾವರ;
ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚಮಾಡಿ ಹೊಸ ತಂತಿ ಹೊಸ ಕಂಬ ಅಳವಡಿಸದ ನಂತರವೂ ವಿದ್ಯುತ್ ಸಮಸ್ಯೆ ಕಳೆದ 3 ದಿನಗಳಿಂದ ನಿರಂತರವಾಗಿ ತಾಲೂಕಿನ ಮೂಡ್ಕಣಿ, ಅಳ್ಳಂಕಿ, ಹೆರಂಗಡಿ, ಉಪ್ಪೋಣಿ ಈಭಾಗಗಳಲ್ಲಿ ವಿದ್ಯುತ್ ಅವ್ಯವಸ್ಥೆಯಿಂದ ಹಲವು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿದೆ. ಇದರಿಂದ ಬೇಸತ್ತ ಸಾರ್ವಜನಿಕರು ಗೇರುಸೊಪ್ಪಾ ವಿದ್ಯುತ್ ವಿತರಣಾ ಉಪಕೇಂದ್ರಕ್ಕೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಶಾಖಾಧಿಕಾರಿ ಆನಂದ್ ರಾವ್ ಮಾತನಾಡಿ 33 ಕೆವಿ ಕಳಪೆ ಮಟ್ಟದ ಇನ್ಸುಲೇಟರ್ ಬಳಸಿದ್ದರಿಂದ ಈ ರೀತಿಯ ಸಮಸ್ಯೆ ಉದ್ಭವಾಗುತ್ತಿದೆಯೆಂದು ಹೇಳಿದರು.
ಸಾರ್ವಜನಿಕರು ಇವರ ಈ ಅಸಮರ್ಪಕ ಉತ್ತರಕ್ಕೆ ತ್ರಪ್ತರಾಗದೇ ಪ್ರತಿಭಟನೆ ಮುಂದುವರಿಸಿದಾಗ ಹೊನ್ನಾವರ ಸಿ.ಪಿ.ಐ. ಹಾಗೂ ಪಿ.ಎಸ್.ಐ. ಆಗಮಿಸಿ ಸಮಸ್ಯೆಯನ್ನು ತಿಳಿಗೊಳಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆದು ಇನ್ನು 2 ದಿನಗಳಲ್ಲಿ ಉನ್ನತ ಅಧಿಕಾರಿಗಳ ಸಭೆಕರೆದು ಸಮಸ್ಯೆಯನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿದಾಗ ಸಾರ್ವಜನಿಕರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯÀ ಹುಸೇನ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷÀ ಪ್ರಮೋದ ನಾಯ್ಕ, ಶಂಭುಲಿಂಗೇಶ್ವರ ಯುವಕ ಸಂಘದ ವಿನಾಯಕ ನಾಯ್ಕ, ಹೆರಂಗಡಿ ಪ್ರಮುಖರಾದ ಹನಿಫ್, ಗಣೇಶ್ ಹಳ್ಳೇರ್, ಸುಧಾಕರ್ ನಾಯ್ಕ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
Leave a Comment