ದಾಂಡೇಲಿ :
ಜೊಯಿಡಾ ತಾಲ್ಲೂಕಿನ ರಾಮನಗರ ಮೌಂಟ್ ಕಾರ್ಮೆಲ್ ಸಿಬಿಎಸ್ಸಿ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಳದ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ಪಾ: ವಿಲ್ಫ್ರೆಡ್ ಫ್ರಾಂಕ್, ಪಾ: ಡೆನಿಸ್ ಮಿಸ್ಕ್ಯುಥ್, ಪಾ: ತಿಯೊಡೋಸಿಯೊ ಫರ್ನಾಂಡೀಸ್, ಆಡಳಿತಾಧಿಕಾರಿ ಜಾನ್ ಪೀಟರ್ ಅವರುಗಳ ನೇತೃತ್ವದಲ್ಲಿ ಜರುಗಿತು.
ಶಾಲಾ ನಾಯಕನಾಗಿ ಪವನ್ಗುರುನಾಥ ಪವಾರ, ಉಪ ನಾಯಕಿಯಾಗಿ ನಿಖಿತಾ ರಾವ್ ಸಾಹೇಬ ಪಾಟೀಲ್, ಕ್ರೀಡಾ ಸಚಿವನಾಗಿ ಮರಿಯಾಜೋಸೆಫ್ಕ್ರೂಸ್, ಶಿಕ್ಷಣ ಸಚಿವನಾಗಿ ಚಿಂತನಾ ಲಕ್ಷ್ಮಣ ನಾಯಕ, ಹಣಕಾಸು ಸಚಿವನಾಗಿ ವೈಭವ್ ಮಲ್ಲಿಕಾರ್ಜುನ ವಾಲಿಕರ್, ಹಸಿರು ತಂಡದ ನಾಯಕಿಯಾಗಿ ಯೋಗಿನಿ ಮೂರ್ತಿ ನಾಯ್ಡು, ಕೆಂಪು ತಂಡದ ನಾಯಕಿಯಾಗಿ ಸಮೀಕ್ಷಾ ಬಾಬಾಜಿದೇಸಾಯಿ, ನೀಲಿ ತಂಡದ ನಾಯಕಿಯಾಗಿ ಮರಿಯಾಜೋಸೆಫ್ಕ್ರೂಸ್ ಮತ್ತು ಹಳದಿ ತಂಡದ ನಾಯಕಿಯಾಗಿ ಚಿಂತನಾ ಲಕ್ಷ್ಮಣ ನಾಯಕ ಆಯ್ಕೆಯಾಗಿದ್ದಾರೆ.
ನೂತನ ಶಾಲಾ ಮಂತ್ರಿ ಮಂಡಳದ ಪದಾಧಿಕಾರಿಗಳಿಗೆ ಪಾ: ವಿಲ್ಫ್ರೆಡ್ ಫ್ರಾಂಕ್, ಪಾ: ಡೆನಿಸ್ ಮಿಸ್ಕ್ಯುಥ್, ಪಾ: ತಿಯೊಡೋಸಿಯೊ ಫರ್ನಾಂಡೀಸ್ ಪ್ರಮಾಣ ವಚನ ಭೋಧಿಸಿ, ಶುಭ ಕೋರಿದರು
Leave a Comment