ದಾಂಡೇಲಿ :
ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರ ಅಧ್ಯಕ್ಷತೆಯ ಶ್ರಿ ವಿ.ಆರ್.ಡಿ ಮೆಮೋರಿಯಲ್ ಟ್ರಸ್ಟ್ ಹಳಿಯಾಳ ಇದರ ಸಂಸ್ಥಾಪಕರ ದಿನಾಚರಣೆಯನ್ನು ಶನಿವಾರ ನಗರದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಹಾಗೂ ರುಕ್ಮೀಣಿ ಬಾಲಿಕಾ ನಿಲಯ ಕೊಗಿಲಬನ ಇಲ್ಲಿಯ ವಿದ್ಯಾರ್ಥಿಗಳಿಗೆ ನೋಟು ಬುಕ್ ಗಳನ್ನು ವಿತರಿಸಿ ಸಿಹಿ ಹಂಚಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಗರ ಸಭೆಯ ಅಧ್ಯಕ್ಷ ಎನ್.ಜಿ.ಸಾಳೊಂಕೆಯವರು ಸಚಿವ ದೇಶಪಾಂಡೆಯವರು ಈ ಭಾಗದ ಸಮಗ್ರ ಅಭಿವೃದ್ಧಿ, ಆರೋಗ್ಯ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳ ಪುರೋ ಅಭಿವೃದ್ಧಿ ಮತ್ತು ನಿರುದ್ಯೋಗ ನಿವಾರಣೆಗಾಗಿ ಶ್ರಿ ವಿ.ಆರ್.ಡಿ ಮೆಮೋರಿಯಲ್ ಟ್ರಸ್ಟನ್ನು ಪ್ರಾರಂಭಿಸಿ ಇತಿಹಾಸ ನಿರ್ಮಿಸಿದ್ದಾರೆ. ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜಿಲ್ಲೆ ಹಾಗೂ ರಾಜ್ಯದ ಗಮನ ಸೆಳೆದಿದೆ. ಇಂದು ಶ್ರಿ ವಿ.ಆರ್.ಡಿ ಮೆಮೋರಿಯಲ್ ಟ್ರಸ್ಟ್ ತನ್ನ ಸಂಸ್ಥಾಪಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದನ್ನು ಶ್ಲಾಘಿಸಿದರು.
ಅತಿಥಿಗಳಾಗಿ ನಗರ ಸಭೆಯ ಉಪಾಧ್ಯಕ್ಷ ಅಷ್ಪಾಕ ಶೇಖ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ವಾಮನ ಮಿರಾಶಿ ಅವರುಗಳು ಶ್ರಿ ವಿ.ಆರ್.ಡಿ ಮೆಮೋರಿಯಲ್ ಟ್ರಸ್ಟಿನ ಸಾಧನೆ ಹಾಗೂ ಸಮಾಜಮುಖಿ ಕಾರ್ಯವನ್ನು ಕೊಂಡಾಡಿದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಅಧಿಕಾರಿಗಳಾದ ಸುರೇಶ ಬೊಮ್ಮಿಗಟ್ಟಿ, ಶ್ರೀನಿವಾಸ.ಎಸ್.ಕೆ, ಸಿಬ್ಬಂದಿಗಳಾದ ನಾರಾಯಣ ವಾಡಕರ, ಅಬ್ದುಲ್ ಮಡಗಾವಿ, ಅಂದಾನಯ್ಯ ಮೊದಲಾದವರು ಉಪಸ್ಥಿತರಿದ್ದರು
Leave a Comment