ಕಾರವಾರ:
ಜಿಲ್ಲೆಯಲ್ಲಿ 18ರಿಂದ 21ವರ್ಷ ಒಳಗಿನ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಜುಲೈ 1 ರಿಂದ ವಿಶೇಷ ಅಭಿಯಾನ ನಡೆಯಲಿದ್ದು,ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿ ದೋಷ ರಹಿತವಾದ ಮತದಾರರ ಪಟ್ಟಿ ತಯಾರಿಸಲು ಸಹಕರಿಸಬೇಕೆಂದು ಅಪರ ಜಿಲ್ಲಾಧಿಕಾರಿ ಹೆಚ್ ಪ್ರಸನ್ನಕುಮಾರ ತಿಳಿಸಿದರು.ಹೋಸದಾಗಿ ಮತದಾರರ ಪಟ್ಟಿಯಲ್ಲಿ ಮತದಾರ ಹೆಸರು ಸೆರ್ಪಡೆಯಾದಾಗ ಚುನಾವಣಾ ವೇಳೆಯಲ್ಲಿ ಹೋಸ ಮತದಾರ ಪಟ್ಟಿಯನ್ನೂ ಕೂಡಾ ರಾಜಕೀಯ ಪಕ್ಷಗಳಿಗೆ ವಿತರಿಸಲಾಗುತ್ತದೆ. ಅದೆ ರೀತಿ ಏಕಾಏಕಿ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಬರುವದಿಲ್ಲ. ಮತದಾರನು ಮರಣ ಹೊಂದಿದಾಗ ಅಥವಾ ವಲಸೆ ಹೋದಾಗ ಮತದಾರರ ಹೆಸರು ತೆಗೆದು ಹಾಕಲು ಕೂಡಾ ವಿವಿಧ ಪ್ರಕ್ರೀಯೆಗಳನ್ನು ಅನುಸರಿಸಲಾಗುತ್ತದೆ. ಯಾವುದೇ ಅನುಮಾನಗಳಿಗೆ ಆಸ್ಪದ ನೀಡದಂತೆ ಅಭಿಯಾನವನ್ನು ಯಶಸ್ವಿಗೋಳಿಸಿ ಎಂದರು.ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ವಿವಿಧ ರಾಜಕೀಯ ಪಕ್ಷಗಳ ಸಭೆಯಲ್ಲಿ ಮಾತನಾಡಿ, ಅರ್ಹ ಯುವ ಮತದಾರರನ್ನು ಗುರಿಯಾಗಿಸಿಕೊಂಡು ಅಭಿಯಾನ ನಡೆಸಲಾಗುತ್ತಿದೆ. ಚುನಾವಣಾ ವರ್ಷವಾಗಿರುವದರಿಂದ ಯುವ ಮತದಾರರಿಗೆ ಹೆಚ್ಚಿನ ಮಾಹಿತಿ ನೀಡಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸುವಂತೆ ಮಾಡಬೇಕು. ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕಳ್ಳುವರು ಬೂತ್ ಲೇವಲ್ ಆಫೀಸರ್ಸ (ಬಿ.ಎಲ್.ಒ) ನಮೂನೆ 6 ಅನ್ನು ಭರ್ತಿ ಮಾಡಿ ಕೋಡಬಹುದಾಗಿದೆ. ಒಂದು ವೇಳೆ ಬಿ.ಎಲ್.ಒ ಗಳು ಸಿಗದಿದ್ದರೆ ತಹಶೀಲ್ದಾರ ಕಛೇರಿಯಲ್ಲಿ ಕೊಡಬಹುದಾಗಿರುತ್ತದೆ ಎಂದು ಅವರು ಹೇಳಿದರು.ಅಭಿಯಾನದಲ್ಲಿ ಸರಕಾರಿ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ಬೇರೆ ಬೇರೆ ದಿನಾಂಕಗಳಂದು ವಿಶೇಷ ನೋಂದಣಿ ಶಿಬಿರವನ್ನು ಆಯೋಜಿಸಲಾಗುವುದು ಮತದಾರರ ಪಟ್ಟಿಯ ವಿವಿಧ ಮಾಹಿತಿಗಳಿಗೆ ಸಂ¨ಂಧಪಟ್ಟಂತೆ ಯಾವುದೇ ಮಾಹಿತಿ ಬೇಕಾದಲ್ಲಿ 1950 ಸಂಖ್ಯೆಗೆ ಕರೆ ಮಾಡಿ ಪಡೆಯಬಹುದಾಗಿರುತ್ತದೆ ಎಂದು ಮಾಹಿತಿ ನೀಡಿದರು.
Leave a Comment