ದಾಂಡೇಲಿ :
ನಗರದ ಪ್ರತಿಷ್ಟಿತ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಒಂದಾದ ರೋಟರಿ ಕ್ಲಬಿಗೆ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆದಿದ್ದು, ನೂತನ ಸಾಲಿಗೆ ಅಧ್ಯಕ್ಷರಾಗಿ ಪ್ರವಾಸೋಧ್ಯಮಿ ರವಿಕುಮಾರ್.ಜಿ.ನಾಯಕ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ನಗರದ ಹೆಸ್ಕಾಂ ಇಲಾಖೆಯ ಮುಖ್ಯ ಅಭಿಯಂತರ ಪುರುಷೋತ್ತಮ ಮಲ್ಯ ಅವರು ಆಯ್ಕೆಯಾದರೇ ಖಜಾಂಚಿಯಾಗಿ ನಗರದ ಉದ್ಯಮಿ ಅಶುತೋಷ್ ರಾಯ್ ಅವರು ಮೂರನೆ ಬಾರಿಗೆ ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ರೋಟರಿ ಕ್ಲಬಿನ ಸರ್ವ ಸದಸ್ಯರುಗಳು ಹಾಗೂ ರೋಟರಿ ಶಿಕ್ಷಣ ಸಂಸ್ಥೆಯ ಸದಸ್ಯರುಗಳು ಅಭಿನಂದಿಸಿದ್ದಾರೆ.
ಪುರುಷೋತ್ತಮ ಮಲ್ಯ ಅಶುತೋಷ್ ರಾಯ್
Leave a Comment