ದಾಂಡೇಲಿ :
ರೋಟರಿ ಕ್ಲಬಿನ ಮುಖ್ಯ ಉದ್ದೇಶ ಜನಪರ ಸೇವೆ ರೋಟರಿ ಸದಸ್ಯನಾಗಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಿಗುವ ಭಾಗ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಸೇವೆಗಾಗಿಯೇ ರೋಟರಿ ಕ್ಲಬ್ ಜಗತ್ತಿನಲ್ಲಿ ಒಂದು ಅತ್ಯುತ್ತ,ಮ ಸೇವಾ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ರೋಟರಿ ಕ್ಲಬಿನ ಮಾಜಿ ಪ್ರಾಂತಪಾಲ ಗುರುದತ್ತ ಭಕ್ತಾ ನುಡಿದರು.
ಅವರು ನಗರದಲ್ಲಿ ಬುಧುವಾರ ಸಂಜೆ ರೋಟರಿ ಶಾಲೆಯ ಸಭಾಂಗಣದಲ್ಲಿ ಜರುಗಿದ 2017-18ರ ನಗರದ ರೋಟರಿ ಕ್ಲಬಿನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು.
ಅವರು ರೋಟರಿ ಕ್ಲಬನ ವಿವಿಧ ಸೇವಾ ಕಾರ್ಯಗಳ ಬಗ್ಗೆ ಶಾಲೆಯ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಜನಪರ ಕಾರ್ಯಗಳು ನೆರವೇರಲಿ ಎಂದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಉಪ ಪ್ರಾಂತಪಾಲ ಅಶೋಕ ಹಬೀಬ ಮಾತನಾಡಿ ಸಮಾಜದಲ್ಲಿ ಒರ್ವ ವ್ಯಕ್ತಿಯ ಹೆಸರು ಶಾಶ್ವತವಾಗಿ ಉಳಿಯುವುದು ಕೇವಲ ಆತ ಮಾಡಿದ ಸೇವೆ ಹಾಗೂ ದಾನದಿಂದ, ಇವುಗಳಲ್ಲಿ ತೊಡಗಿಸಿಕೊಳ್ಳದವನ ಹೆಸರು ಸಮಾಜದಲ್ಲಿ ಯಾರಿಂದಲೂ ಗೌರವಿಸಲ್ಪಡುವುದಿಲ್ಲ ಎಂದರು.
ನೂತನ ಅಧ್ಯಕ್ಷರಾಗಿ ಅಧಿಕಾರಿ ವಹಿಸಿದ ರವಿಕುಮಾರ ಜಿ. ನಾಯಕ ಮಾತನಾಡಿ ರೋಟರಿ ಕ್ಲಬಿನ ಎಲ್ಲ ಸದಸ್ಯರ ಸ್ಥಳೀಯ ಲಯನ್ಸ್ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದಿಂದ ತಮ್ಮ ಅವಧಿಯಲ್ಲಿ ಅತ್ಯುತ್ತಮ ಜನ ಉಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದೆಂದರು. ‘
ಕಾರ್ಯದರ್ಶಿಯಾಗಿ ಹೆಸ್ಕಾಂನ ಸಹಾಯಕ ಅಭಿಯಂತರ ಪುರುಷೋತ್ತಮ ಮಲ್ಯಾ ಹಾಗೂ ಮೂರನೇ ಬಾರಿಗೆ ಖಜಾಂಚಿಯಾಗಿ ಅಶುತೋಷಕುಮಾರ ರೈ ಅಧಿಕಾರ ವಹಿಸಿಕೊಂಡರು.
ಕಾರ್ಯಕ್ರಮದಲ್ಲಿ ನಗರದ ರೋಟರಿ ಕ್ಲಬಿಗೆ ದೊರೆತ ಪ್ರಶಸ್ತಿ ಪತ್ರಗಳನ್ನು ಹಾಗೂ ರೋಟರಿ ಶಾಲೆಯಲ್ಲಿ ಐದು ಹೊಸ ಕೊಣೆಗಳ ನಿರ್ಮಾಣಕ್ಕೆ ಸಹಾಯ ಧನ ನೀಡಿದ ರೋಟರಿ ಸದಸ್ಯರನ್ನು ಗೌರವಿಸಲಾಯಿತು.
ನಿಕಟಪೂರ್ವ ಅಧ್ಯಕ್ಷ ನಾಗೇಶ ಎಲ್. ನಾಯ್ಕವಾಡ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ರಾಹುಲ ಬಾವಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೋಮಕುಮಾರ, ಎಚ್.ವಾಯ್. ಮೆಹರವಾಡೆ, ಅನಿಲ ಪಾಟ್ನೆಕರ್, ಅರುಣ ನಾಯ್ಕ, ಪುರುಷೋತ್ತಮ ಮಲ್ಯಾ ಕಾರ್ಯಕ್ರಮ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ ದಯಾನಂದ ಪವಾರ, ಸ್ಥಳೀಯ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷ ಸೈಯ್ಯದ್ ತಂಗಳ, ವರ್ತಕರಾದ ರಾಧಕೃಷ್ಣ ಕನ್ಯಾಡಿ, ಲಯನ್ಸ್ ಕ್ಲಬಿನ ಅಧ್ಯಕ್ಷ ಅನಿಲ ದಂಡಗಲ್ ಖಜಾಂಚಿ ಪ್ರಸಾದ ಶಿರಹಟ್ಟಿ, ಡಾ. ಸಂಗಪ್ಪ ಗಾಬಿ, ಕ್ಯಾಬಿನೆಟ್ ಸದಸ್ಯ ಯು.ಎಸ್. ಪಾಟೀಲ, ರೋಟರಿ ಕ್ಲಬಿನ ಮತ್ತು ಇನ್ನರ್ವಿಲ್ ಕ್ಲಬಿನ ಅಧ್ಯಕ್ಷೆ ರಾಜೇಶ್ವರಿ ನಾಯ್ಕ ಮತ್ತು ಸದಸ್ಯರು ನಗರದ ಇತರ ಗಣ್ಯರು ಉಪಸ್ಥಿತರಿದ್ದರು.
Leave a Comment