ದಾಂಡೇಲಿ :
ದಕ್ಷಿಣಕನ್ನಡಜಿಲ್ಲೆಯ ಬಂಟ್ವಾಳ ತಾಲೂಕಿನ ನಿವಾಸಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯಕಾರ್ಯಕರ್ತ ದಿ: ಶರತ್ ಮಡಿವಾಳ ಅವರನ್ನು ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿರುವುದುಖಂಡನೀಯವಾಗಿದ್ದು, ತಕ್ಷಣವೆ ದುಷ್ಕರ್ಮಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಗರದ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳ ಘಟಕವು ಸೋಮವಾರ ನಗರದಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ವಿಶೇಷ ತಹಶೀಲ್ದಾರ್ ಕಚೇರಿಯಗೌಡಪ್ಪ ಬನಕದಿನ್ನಿಯವರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದು ಪರಿಷತ್ತಿನ ಮುಖಂಡರವಿ ಲಕ್ಷ್ಮೇಶ್ವರ ಹಾಗೂ ಸ್ಥಳೀಯ ಬಿಜೆಪಿ ಘಟಕದಅಧ್ಯಕ್ಷ ಬಸವರಾಜ ಕಲಶೆಟ್ಟಿ ಮತ್ತು ಬಜರಂಗ ದಳದ ಸಂಚಾಲಕ ಚಂದ್ರು ಮಾಳಿಯವರು ಮಾತನಾಡಿ,ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹಿಂದುಧರ್ಮ ಭಾಂದವರ ಮೇಲೆ ಹಲ್ಲೆ, ಹತ್ಯೆಗಳಂತ ದುಷ್ಕತ್ಯಗಳು ವ್ಯಾಪಕವಾಗಿ ನಡೆಯುತ್ತಿದ್ದು, ಇದುಖಂಡನೀಯ. ಹಿಂದುಧರ್ಮ ಹಾಗೂ ಹಿಂದುಗಳ ರಕ್ಷಣೆಗಾಗಿಅವಿರತ, ಅನವರತ ಶ್ರಮಿಸುತ್ತಿರುವಹಿಂದು ಸಂಘಟನೆಗಳ ಮುಖಂಡರುಗಳ ಹಾಗೂ ಕಾರ್ಯಕರ್ತರುಗಳ ಮೇಲೆ ನಿರಂತರ ದಬ್ಬಾಳಿಕೆ, ಹಲ್ಲೆಗಳು ನಡೆಯುತ್ತಿರುವುದು ನಮ್ಮನ್ನೆಲ್ಲಾ ಘಾಸಿಗೊಳಿಸಿದೆ.ದಕ್ಷಿಣಕನ್ನಡಜಿಲ್ಲೆಯಲ್ಲಿ ಹಿಂದುಗಳ ಮೇಲೆ ಹಲ್ಲೆ, ದಬ್ಬಾಳಿಕೆಯನ್ನು ಮಾಡುವುದರ ಮೂಲಕ ಶಾಂತಿಕದಡುವ ಪ್ರಕ್ರಿಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗಟ್ಟಿದೆ. ಇದಕ್ಕೆ ಸಾಕ್ಷಿಎಂಬಂತೆ ದಿ: ಶರತ್ ಮಡಿವಾಳ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅವರನ್ನು ಹತ್ಯೆ ಮಾಡಲಾಗಿದೆ.ದಿ: ಶರತ್ ಮಡಿವಾಳ ಅವರ ಹತ್ಯೆಯನ್ನುಉಗ್ರವಾಗಿಖಂಡಿಸುವುದಲ್ಲದೇ, ಅವರನ್ನು ಹತ್ಯೆಗೈದ ದುಷ್ಕರ್ಮಿಗಳನ್ನು ತಕ್ಷಣವೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಒಂದುವೇಳೆ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆಯನ್ನು ಕೈಗೊಳ್ಳಬೇಕಾಗುತ್ತದೆ.ರಾಜ್ಯದಲ್ಲಿ ಶಾಂತಿಕದಡುವ ದುಷ್ಕರ್ಮಿಗಳ ಮೇಲೆ ಕಠಿಣಕ್ರಮಕೈಗೊಂಡು, ಹಿಂದುಗಳ ರಕ್ಷಣೆಗೆ ಸುಯೋಗ್ಯಕ್ರಮ ಕೈಗೊಳ್ಳಬೇಕಾಗಿರಾಜ್ಯ ಸರಕಾರವನ್ನು ಆಗ್ರಹಿಸಿದರು.
ಪ್ರತಿಭಟನೆಯ ಮುಂಚೆ ದಿ: ಶರತ್ ಮಡಿವಾಳರ ಆತ್ಮಕ್ಕೆ ಶಾಂತಿಕೋರಿಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ತಿನ ಸಂಚಾಲಕ ಶಂಕರಗಣಾಚಾರಿ, ಸಂಘಟನೆಯ ಮುಖಂಡರುಗಳಾದ ಪ್ರಶಾಂತ ಬಸೂರ್ತೆಕರ, ದಶರಥ ಬಂಡಿವಡ್ಡರ, ನರೇಂದ್ರಚೌವ್ಹಾಣ, ರಾಜೇಶಗಿರಿ, ಅಶೋಕ ನಾಯ್ಕ, ಸಂಜಯಚೌವ್ಹಾಣ, ಲಿಂಗಯ್ಯ ಪೂಜಾರ, ಹರ್ಷವರ್ಧನ ಪಾಟೀಲ, ರಾಜಶೇಖರ ಪಾಟೀಲ, ದಯಾನಂದ ಮರಾಠೆ, ಭರತ್ ಸಿಂಗ್ ಮೊದಲಾದವರು ಹಾಜರಿದ್ದರು.
Leave a Comment