ಕಾರವಾರ:
ನಿಷ್ಠಾವಂತ ಅಧಿಕಾರಿಗಳನ್ನು ಸರ್ಕಾರ ಪದೇ ಪದೇ ವರ್ಗಾವಣೆ ಮಾಡುತ್ತಿರುವದನ್ನು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಖಾ ಹೆಗಡೆ ಮಾತನಾಡಿ, ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತಕ್ಕೆ ಬಂದನಂತರ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಮಹಿಳಾ ಅಧಿಕಾರಿಯೊಬ್ಬರು ಅವ್ಯವಹಾರ ಬಯಲು ಮಾಡಿದರೆ ಅವರನ್ನು ಗೌರವಿಸುವ ಬದಲು ದಂಡಿಸುವ ನೀಜ ಸಂಸ್ಕøತಿ ಕಾಂಗ್ರೆಸ್ ಆಡಳಿತದಲ್ಲಿದೆ ಎಂದು ಕಿಡಿಕಾರಿದರು. ಹಿರಿಯ ಅಧಿಕಾರಿಗಳಿಗೆ ಸರ್ಕಾರ ಅನಾವಷ್ಯಕವಾಗಿ ಹಿಂಸೆ ನೀಡುತ್ತಿದೆ ಎಂದು ಆರೋಪಿಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಉಡುಪಿಯ ರಘುಪತಿ ಭಟ್, ಮಂಗಳೂರು, ಉಡುಪಿ, ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಹಿಂದುಗಳ ಹತ್ಯೆಗೆ ರಮಾನಾಥ ರೈ ಕಾರಣವಾಗಿದ್ದಾರೆ. ಮುಸಲ್ಮಾನರ ಓಲೈಕೆಗಾಗಿ ಹಿಂದು ಸಂಘಟನೆ ಕಾರ್ಯಕರ್ತರನ್ನು ಹತ್ಯೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು. ನವೀನ್ ಪೂಜಾರಿ, ಶರತ್ ಮಡಿವಾಳ ಒಳಗೊಂಡು ನಡೆದ ಎಲ್ಲಾ ಹತ್ಯೆಗಳಲ್ಲೂ ತರಬೇತಿ ಹೊಂದಿದ ಕಿಲ್ಲರ್ಗಳನ್ನು ಬಳಸಿಕೊಳ್ಳಲಾಗಿದೆ ಎಂದು ದೂರಿದರು. ಪಿಎಫ್ಐ ಮತ್ತು ಕೆಡಿಎಫ್ ಸಂಘಟನೆಗಳನ್ನು ನಿಷೇಧಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಪ್ರಚೋದಿ ಘಟನೆಗಳ ನಡೆಯಲು ಇದೇ ಸಂಘಟನೆ ಕಾರಣವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದರೆ ಪಿಎಫ್ಐ, ಕೆಡಿಎಫ್ ನಿಷೇಧಿಸುವ ಅನಿವಾರ್ಯವಿದೆ. ಸಚಿವ ರಮಾನಾಥ ರೈ ಹಿಂದೂ ಸಂಘಟನೆಗಳ ಮೇಲೆ, ಬಿಜೆಪಿ ಮೇಲೆ ಗೂಬೆ ಕೂರಿಸುವ ಬದಲು ಎನ್ಐಎಗೆ ತನಿಖೆ ನಡೆಸುವಂತೆ ಆದೇಶಿಸಲಿ ಎಂದು ಸವಾಲು ಹಾಕಿದರು.ಪ್ರಮುಖರಾದ ಗಂಗಾಧರ ಭಟ್, ಎಸ್.ಎನ್.ಹೆಗಡೆ, ನಾಗರಾಜ ಜೋಷಿ,ಮನೋಜ ಭಟ್, ಬಿ.ಜಿ.ಮೋಹನ,ನಂದು ಗಾಂವಕರ,ಇದ್ದರು.
Leave a Comment