ಕಾರವಾರ:
ಸಾಯಿಕಟ್ಟಾದಲ್ಲಿನ ಸಾಯಿ ಮಂದಿರದಲ್ಲಿ ಶಿರಡಿ ಬಾಬಾ ಮೂರ್ತಿ ಪ್ರತಿಷ್ಟಾಪನೆಯ ಸುವರ್ಣ ಮಹೋತ್ಸವ ಹಾಗೂ ಗುರುಪೂರ್ಣಿಮೆ ನಡೆಯಿತು.
ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾದ್ಯಾಪಕ ಡಾ. ವೆಂಕಟೇಶ ಗಿರಿ ಕಾರ್ಯಕ್ರಮ ಉದ್ಘಾಟಿಸಿದರು. ವೈದ್ಯಾಧಿಕಾರಿ ಡಾ. ಕದಂ, ಪ್ರಮುಖರಾದ ದೇವಿದಾಸ ನಾಯ್ಕ, ಅಶೋಕ ಗಾಂವ್ಕರ್, ಡಿ.ಆರ್. ನಾಯ್ಕ, ಅರುಣ ನಾಯ್ಕ ಇತರರಿದ್ದರು. ಶಿಕ್ಷಕ ಸಂತೋಷ ಶೇಟ್ ನಿರ್ವಹಿಸಿದರು. ಸಾಯಶ್ರೀ ಶೇಟ್ ಪ್ರಾರ್ಥಿಸಿದರು. ಜಿ.ಎಸ್ ನಾಯ್ಕ ವಂದಿಸಿದರು.
Leave a Comment