ಕಾರವಾರ:
2003ರಲ್ಲಿ ಕಚೇರಿ ಸಿಬ್ಬಂದಿಗೂ ವೇತನ ನೀಡಲಾಗದ ಪರಿಸ್ಥಿತಿಯಲ್ಲಿ ನಿಗಮವಿತ್ತು. 2008ರ ಸಾಲಿನಲ್ಲಿ ಹೆಚ್ಚುವರಿ ಘಟಕ ನಿರ್ಮಾಣಕ್ಕೆ ಸರ್ಕಾರ 10ಕೋಟಿ ಅನುಧಾನ ನೀಡಿದ್ದು, ಅದನ್ನು ಬಳಸಿಕೊಂಡು ಉದ್ಯಮವನ್ನು ಬೆಳಸಲಾಯಿತು. ಕ್ರಮೇಣ ಲಾಭ ಪಡೆದ ಉದ್ಯಮವೂ ಇದೇ ಮೊದಲ ಬಾರಿಗೆ ಸಾಕಷ್ಟು ಉಳಿತಾಯ ಮಾಡಿದೆ. ತಮ್ಮ ಅವದಿಯಲ್ಲಿ 14 ಹೆಚ್ಚುವರಿ ಮತ್ಸ್ಯ ದರ್ಶನ ಉಪಹಾರ ಮಂದಿರ ನಿರ್ಮಿಸಿ ಅಭಿವೃದ್ದಿ ಮಾಡಿರುವದೇ ಲಾಭಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. ಕರಾವಳಿಯ ಮೀನುಗಳನ್ನು ಮಹಾ ನಗರಗಳಲ್ಲಿ ಪರಿಚಯಿಸಿ ಮಾರಾಟ ಮಾಡಲು ಮತ್ಸ್ಯ ದರ್ಶಿನಿ ಉಪಹಾರ ಮಂದಿರಗಳನ್ನು ಹೆಚ್ಚಿಸಲಾಗುತ್ತದೆ ರಾಜೇಂದ್ರ ನಾಯಕ ತಿಳಿಸಿದರು.ದಶಕಗಳಿಂದ ನಷ್ಟ ಅನುಭವಿಸಿ ಮುಚ್ಚುವ ಹಂತ ತಲುಪಿದ್ದ ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮ ನಿಯಮಿತ ಹಂತ ಹಂತವಾಗಿ ಲಾಭಗಳಿಸಿದ್ದು, ಇದೇ ಮೊದಲ ಬಾರಿಗೆ 4.38 ಕೋಟಿ ರೂ ಲಾಭ ಮಾಡಿದೆ. ಈ ಲಾಭಾಂಶದಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದ ನೌಕರರ ಪಿಂಚಣಿ ಹಾಗೂ ಇನ್ನಿತರ ವೆಚ್ಚಗಳನ್ನು ಪಾವತಿಸಲು ನಿರ್ಧರಿಸಲಾಗಿದ್ದು, ನಂತರವೂ 2.28 ಕೋಟಿ ಲಾಭದಲ್ಲಿರಲಿದೆ ಎಂದು ನಿಗಮದ ಅಧ್ಯಕ್ಷ ರಾಜೇಂದ್ರ ನಾಯಕ ಹೇಳಿದರು. ಆರ್ಥಿಕವಾಗಿ ದುರ್ಬಲರಾಗಿರುವ ಮೀನುಗಾರರ ಸಾಲಮನ್ನಾಗೆ ನಿಗಮ ಚಿಂತಿಸಿದೆ. ಸಾಲದಿಂದ ಮೃತಪಟ್ಟವರ ಸಂಪೂರ್ಣ ಸಾಲಮನ್ನಾ ಮಾಡಲಾಗಿದ್ದು, ಸದ್ಯ ಸಾಲದಲ್ಲಿರುವವರ ಶೇ. 50ರಷ್ಟು ಸಾಲಮನ್ನಾ ಮಾಡಲಾಗುತ್ತದೆ ಎಂದು ಹೇಳಿದರು. ಈಗಾಗಲೇ ಒಟ್ಟು 26 ಮಂದಿಯ ಸಾಲಮನ್ನಾ ಮಾಡಲಾಗಿದೆ ಎಂದು ತಿಳಿಸಿದರು. ಕಾರವಾರದಿಂದ ಭಟ್ಕಳದವರೆಗೆ 160 ಮಂದಿ ನಿಗಮದಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಅವರಿಗೆ ಸರ್ಕಾರದ ನಿರ್ದೇಶನದಂತೆ ಕನಿಷ್ಟ ಕೂಲಿ ಪದ್ದತಿಯನ್ನು ಜಾರಿಗೆ ತರಲಾಗುತ್ತಿದೆ ಎಂದರು. ತದಡಿಯಲ್ಲಿ ಮೀನು ಸಂಸ್ಕರಣಾ ಘಟಕ ಸ್ಥಾಪನೆಗೆ ಟೆಂಡರ್ ನೀಡಲಾಗುತ್ತಿದ್ದು, 750 ಟನ್ ಮೀನು ದಾಸ್ತಾನು ಮಾಡಬಹುದಾಗಿದೆ. ಇದಾದ ನಂತರ 200ಕ್ಕೂ ಅಧಿಕ ಉದ್ಯೋಗ ಸೃಷ್ಠಿಯಾಗಲಿದೆ ಎಂದರು. ಬೈತಖೋಲ್ದಲ್ಲಿ ವಿವಾದವನ್ನು ಹುಟ್ಟು ಹಾಕಿರುವ ನಿಗಮದ 2.29 ಎಕರೆ ಜಾಗದ ಸಮಸ್ಯೆಯನ್ನು ಬಗೆ ಹರಿಸುವ ಪ್ರಯತ್ನ ನಡೆದಿದೆ. ಮಹಿಳೆಯರಿಗೆ ರಕ್ಷಣೆ ಹಾಗೂ ಸ್ಥಳೀಯ ಮೀನುಗಾರರಿಗೂ ಅನುಕೂಲವಾಗುವಂತೆ ವಿಶ್ರಾಂತಿ ಗೃಹ, ಶೌಚಾಲಯಗಳನ್ನು ಸ್ಥಾಪಿಸಲಾಗುವದು ಎಂದರು. ಪ್ರಮುಖರಾದ ದೀಪಕ ವೈಂಗಣಕರ್, ದೇವಿದಾಸ ಬೇಳೂರಕರ ಇದ್ದರು.
ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮಕ್ಕೆ ಮೋಹನ ಬೋಳಶೆಟ್ಟಿಕರ್ರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ ಸರ್ಕಾರ ಏಕಾಏಕಿ ರದ್ದು ಮಾಡಿ ಆದೇಶ ಹೊರಡಿಸಿದೆ. ಇದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಮೀನುಗಾರಿಕಾ ಅಭಿವೃದ್ದಿ ನಿಗಮ ಅಧ್ಯಕ್ಷ ರಾಜೇಂದ್ರ ನಾಯಕ ಸ್ಪಷ್ಟ ಪಡಿಸಿದರು. ಸರ್ಕಾರ ತಮ್ಮನ್ನು ಕೇಳಿ ಯಾವ ತೀರ್ಮಾನವನ್ನು ಕೈಗೊಂಡಿಲ್ಲ. ಆಯ್ಕೆ ಹಾಗೂ ಆಯ್ಕೆ ರದ್ದತಿ ಹಿಂದೆ ನಡೆದಿರುವ ವಿದ್ಯಮಾನಗಳ ಕುರಿತು ತನಿಖೆ ನಡೆದು ಜನರಿಗೆ ಸತ್ಯಾಂಶ ಅರಿವಾಗಬೇಕಿದೆ ಎಂದು ಹೇಳಿದರು.
Leave a Comment