ಹಳಿಯಾಳ:
ಅಮರನಾಥ ಯಾತ್ರಿಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಿ ಭಕ್ತರ ಮಾರಣಹೊಮ ಮಾಡಿರುವ ಪಾಕಿಸ್ತಾನ ಪ್ರಚೋದಿತ ಭಯೋತ್ಪಾದಕರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಹಾಗೂ ಪಾಕಿಸ್ತಾನಕ್ಕೆ ನೀಡಿರುವ ಮೊಸ್ಟ್ ಫೇವರ್ಡ ನೇಷನ್ ಶ್ರೇಣಿಯನ್ನು ತೆಗೆದು ಹಾಕಲಿ ಎಂದು ರಾಷ್ಟ್ರೀಯ ಹಿಂದೂ ಆಂದೋಲನ ಹಾಗೂ ಹಿಂದೂ ಜನಜಾಗೃತಿ ಸಮೀತಿ ತಹಶೀಲ್ದಾರ್ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಮಂಗಳವಾರ ಇಲ್ಲಿಯ ಶಿವಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಹಿಂಜ ಸಮೀತಿಯ ಕಾರ್ಯಕರ್ತರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಅಮರನಾಥ ಯಾತ್ರೆಗೆ ಬಿಗಿ ಭದ್ರತೆಯಿದ್ದರೂ ಜುಲೈ 10 ರಂದು ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯನ್ನು ಖಂಡಿಸಲಾಗಿದ್ದು ಊಗ್ರರಿಗೆ ತಿರುಗೇಟು ನೀಡಲು ಸೈನ್ಯಕ್ಕೆ ಅನುಮತಿ ನೀಡುವಂತೆ ಕೊರಲಾಗಿದೆ.
ಬಂಗಾಳವು ಬಾಂಗ್ಲಾದೇಶವಾಗುವುದರ ಮುನ್ನ ಅಲ್ಲಿ `ರಾಷ್ಟ್ರಪತಿ ಶಾಸನ’ವನ್ನು ಜಾರಿಗೆ ತರುವಂತೆ ಆಗ್ರಹಿಸಲಾಗಿದೆ.
ಭಾರತವನ್ನು ನಿರಂತರವಾಗಿ ವಿರೋಧಿಸಿ ಯುದ್ಧದ ಬೆದರಿಕೆ ಒಡ್ಡುವ ಚೀನಾಗೆ ಈಗ ಪಾಠ ಕಲಿಸುವ ಸಮಯ ಬಂದಿದ್ದು ಭಾರತೀಯ ಸೈನಿಕರು ಚೀನಾ ಗಡಿಯಲ್ಲಿ ದೇಶವನ್ನು ರಕ್ಷಿಸುತ್ತಿರುವ ರೀತಿಯಲ್ಲಿ ಭಾರತೀಯ ಅರ್ಥವ್ಯವಸ್ಥೆಯನ್ನು ಚೈನಾ ಡ್ರಾಗನ್ನ ಬಿಗಿ ಹಿಡಿತದಿಂದ ಬಿಡಿಸಲು ಪ್ರತಿಯೊಬ್ಬ ಭಾರತೀಯನೂ ಕೂಡ ಪ್ರಯತ್ನಿಸಬೇಕು. ಆದ್ದರಿಂದ ಭಾರತೀಯ ಜನತೆಯು ಚೀನಾ ವಸ್ತುಗಳನ್ನು ಬಹಿಷ್ಕರಿಸಿರಿ, ಸ್ವದೇಶೀ ವಸ್ತುಗಳನ್ನು ಉಪಯೋಗಿಸಿ ಹಾಗೂ ಭಾರತ ಸರಕಾರವು ಚೀನಾಗೆ ಸಂಬಂಧಪಟ್ಟಂತೆ ತನ್ನ ವ್ಯಾಪಾರ ನೀತಿಯ ಮೇಲೆ ಪುನರ್ವಿಚಾರ ಮಾಡುವಂತೆ ಒತ್ತಾಯಿಸಲಾಗಿದೆ.
ಇದೇ ವೇಳೆಯಲ್ಲಿ ಸಾಧ್ವಿ ಪ್ರಜ್ಞಾಸಿಂಗ್ರವರನ್ನು ಹುಸಿ ಆರೋಪದ ಕೆಳಗೆ 8 ವರ್ಷ ಕಾರಾಗೃಹದಲ್ಲಿಟ್ಟು ಅವರ ಮೇಲೆ ಭೀಕರ ಅತ್ಯಾಚಾರ ಮಾಡುವ ಪೋಲೀಸು ಅಧಿಕಾರಿಗಳ ಹಾಗೂ ಷಡ್ಯಂತ್ರ ರಚಿಸಿದ ಆಡಳಿತಗಾರರ ಮೇಲೆ ಕಾರ್ಯಾಚರಣೆಯನ್ನು ಮಡುವಂತೆ ಹಾಗೂ ನಕ್ಸಲವಾದಿಗಳೊಂದಿಗೆ ಸಂಪರ್ಕ ಹೊಂದಿರುವ ದೆಹಲಿ ವಿಶ್ವವಿದ್ಯಾಲಯದ ಪ್ರಾ. ನಂದಿನಿ ಸುಂದರ್ ಹಾಗೂ ಮಾನವಾಧಿಕಾರ ಕಾರ್ಯಕರ್ತೆ ಬೆಲಾ ಭಾಟಿಯಾರ ವಿರುದ್ಧ, ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಆರೋಪಿ ಡಾ. ಝಾಕೀರ್ ನಾಯಿಕ್ ಹಾಗೂ ಅವನ ನಿರ್ಬಂಧಿತ ಸಂಸ್ಥೆ `ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ನ `ಫೇಸ್ಬುಕ್ ಅಕೌಂಟ್’ಅನ್ನು ತಕ್ಷಣ ತಡೆಯುವಂತೆ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಹಿಂದೂಜನಜಾಗೃತಿ ಸಮಿತಿಯ ಸಮನ್ವಯಕರಾದ ವಿಠೋಬಾ ಮಾಳ್ಸೇಕರ, ಅಭಿನಂದನ ಮಸೂರಕರ, ವಿನೋದ ಗಿಂಡೆ, ನೀಥಿನ ಡಾಂಗೆ, ಅಪ್ಪಾಜಿ ಶಹಾಪೂರಕರ, ಧರ್ಮಣ್ಣಾ ಪಾಟೀಲ, ಕಾಂಚನಾ ರಜಪೂತ, ಮೊಹಿನಿ ಹುಂದೂರಕರ, ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಇದ್ದರು.
Leave a Comment