ಹೊನ್ನಾವರ :
ತಾಲೂಕಿನ ಹಳದೀಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರಿಮೂಲೆಯಲ್ಲಿ ಮದ್ಯದಂಗಡಿ ಹಾಗೂ ದಾಸ್ತಾನು ಮಾಡುವ ವಿಷಯ ತಿಳಿದ ಅಲ್ಲಿನ ನಿವಾಸಿಗಳು ತಮ್ಮ ಭಾಗದಲ್ಲಿ ಮದ್ಯದಂಗಡಿಗೆ ಪರವಾನಿಗೆ ನೀಡಬಾರದೆಂದು ತಾಲೂಕಾ ದಂಡಾಧಿಕಾರಿಗಳಿಗೆ ಹಾಗೂ ಅಭಕಾರಿ ಅಧಿಕಾರಿಗಗಳಿಗೆ ಮನವಿ ನೀಡಿದರು
ಮನವಿಯಲ್ಲಿ ಕರಿಮೂಲೆ ಹಾಗೂ ಬಗ್ರಾಣಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಮದ್ಯದಂಗಡಿ ಮಾಡಲು ಕಟ್ಟಡ ನಿರ್ಮಿಸಲಾಗಿದೆ. ಒಂದು ವೇಳೆ ಮದ್ಯದಂಗಡಿಗೆ ಇಲ್ಲಿ ಪರವಾನಿಗೆ ನೀಡಿದರೆ ಇಲ್ಲಿ ಓಡಾಡುವ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆಗಳಿವೆ. ಊರಿನ ಮದ್ಯಭಾಗದಲ್ಲಿ ಮದ್ದಯದಂಗಡಿ ನಿರ್ಮಾಣವಾದರೆ ಕೆಲವು ಕಿಡಿಗೇಡಿಗಳಿಂದ ಹೆಣ್ಣುಮ,ಕ್ಕಳಿಗೆ ಮಾನಹಾನಿ ಯಾಗುವ ಸಾಧ್ಯತೆಗಳಿವೆ. ಈ ಹಿಂದೇ ಕೂಡ ಸಾಕಷ್ಟುಬಾರಿ ಈ ತರಹದ ಘಟನೆಗಳು ನಡೆದಿದೆ. ಈ ಪ್ರದೇಶದಲ್ಲಿ ಹಿಂದೂ ಮುಸ್ಲಿಂ ಹಲವು ವರ್ಷಗಳಿಂದ ಏಕತೆಯಿಂದ ಒಬ್ಬರಿಗ್ಗೊಬ್ಬರು ನೆರವಾಗಿ ಅನ್ಯೋನತೆಯಿಂದ ಬದುಕುತ್ತಿದ್ದು ಮದ್ಯದಂಗಡಿ ಆದರೆ ಕೆಲವರಿಂದ ಜಗಳ ಉಂಟಾಗಿ ಕೋಮು ಗಲಭೆಗೂ ತಿರುಗುವ ಸಾಧ್ಯತೆಗಳೂ ಇವೆ.ಎಂದು ಮನವಿ ಯಲ್ಲಿ ಆಗ್ರಹಿಸಿದ್ದಾರೆ
ಈ ಸಂಧರ್ಭದಲ್ಲಿ ಖಾರ್ವಿ ಸಮಾಜದ ಅಧ್ಯಕ್ಷ ಸುರೇಶ ಮೇಸ್ತ, ರಮೇಶ ಮೇಸ್ತ, ಗ್ರಾ.ಪಂ. ಸದಸ್ಯ ವಿನಾಯಕ ಶೇಟ್, ನಾಗವೇಣಿ ಗೌಡ, ಮಂಜುನಾಥ ಗೌಡ ನೌಶೀರ್ ಮುಂತಾದವರು ಇದ್ದರು
Leave a Comment