ಕಾರವಾರ:
ಕೋಡಿಭಾಗದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟ ಸಂಗಮ ವಿಕಾಸ ಯುವಕರ ಸ್ವ ಸಹಾಯ ಸಂಘವನ್ನು ಈಚೆಗೆ ಕೆಡಿಸಿಸಿ ಬ್ಯಾಂಕ್ನ ವ್ಯವಸ್ಥಾಪಕಿ ಸುಮಾ ಬಿ ನಾಯಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಯುವಕರು ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಉಳಿತಾಯದ ಮನೋಭಾವ ಮೂಡಿದಲ್ಲಿ ವ್ಯಕ್ತಿತ್ವ ಕಟ್ಟಿಕೊಳ್ಳಬಹುದು ಎಂದರು. ನಗರಸಭೆ ಸದಸ್ಯ ರಾಜು ಮಾಳಸೆಕರ್ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಮಾಲತಿ ಶೆಟ್ಟಿ, ಜ್ಞಾನೇಶ್ವರ ತಾಮಸೆ ಇದ್ದರು. ಸಂಘದ ಸದಸ್ಯರಾದ ಗಣೇಶ ನಾಯ್ಕ, ಸುದನ ನಾಯ್ಕ, ನಾಗಯ್ಯ, ಮಹಮದ್ ಶೇಖ್, ಸಲೀಂ ಶೇಖ್, ವಿನಾಯಕ ಮಾಂಜ್ರೆಕರ್, ಸಂಕೇತ ಅಂಬಿಗ ಕಾರ್ಯಕ್ರಮದಲ್ಲಿದ್ದರು.
ಸಂಗೀತಾ ಗಂಡ್ಕರ್ ಪ್ರಾರ್ಥಿಸಿದರು. ವೆಂಕಟರಾಜ್ ಸಂಘದ ಪರಿಚಯ ಮಾಡಿದರು. ಪ್ರಶಾಂತ ಸ್ವಾಗತಿಸಿದರು. ಮನೋಜ ನಾಯ್ಕ ನಿರ್ವಹಿಸಿದರು. ಸೀತಾರಾಂ ನಾಯ್ಕ ವಂದಿಸಿದರು.
Leave a Comment