ಹೊನ್ನಾವರ: `
ಉತ್ತಮ ಸಂಸ್ಕಾರದ ಜತೆಗೆ ಸಂಸ್ಕøತಿ, ಸಂಸ್ಕøತವನ್ನು ಜನಸಾಮಾನ್ಯರಿಗೆ ತಲುಪಿಸಿ ಉತ್ತಮ ಸಮಾಜವನ್ನು ಕಟ್ಟುವ ಕಾರ್ಯ ಶಿಕ್ಷಕರಿಂದಾಗಬೇಕಾಗಿದೆ’ ಎಂದು ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಗೀರಿಶ್ಚಂದ್ರ ಅಭಿಪ್ರಾಯಪಟ್ಟರು.
ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯ, ಸಂಸ್ಕøತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಶ್ರೀ ವೀರಾಂಜನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆ ಶ್ರೀ ಕ್ಷೇತ್ರ ಬಂಗಾರಮಕ್ಕಿ ಮತ್ತು ಸಂಸ್ಕøತ ಭಾರತೀ-ಉತ್ತರ ಕರ್ನಾಟಕ ಇದರ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಶಿಕ್ಷಕರ `ಸಂಸ್ಕøತ ಪುನಶ್ಚೇತನ’ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒಳ್ಳೆಯ ಗುಣಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ಶಿಕ್ಷಕರು ಪ್ರಮುಖ ಸ್ಥಾನ ವಹಿಸಿ ಮಕ್ಕಳಿಗೆ ಸದ್ಗುಣಗಳ ಬೀಜಗಳನ್ನು ಬಿತ್ತಬೇಕಾಗಿದೆ. ಶೈಕ್ಷಣಿಕ ಚಿಂತನೆಗಳನ್ನು ಹೊಸ-ಹೊಸ ವೈಜ್ಞಾನಿಕ ಆವಿಷ್ಕಾರಗಳನ್ನು ಉತ್ತಮವಾದ ಧ್ಯೇಯೊದ್ದೇಶಗಳನ್ನು ಹೃದಯ ತುಂಬಿ ಜಗತ್ತಿಗೆ ಬೀರುವ ಕೆಲಸ ಶಿಕ್ಷಕರ ಆಧ್ಯ ಕರ್ತವ್ಯವಾಗಿದೆ ಎಂದರು.
ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿ ಮಾತನಾಡಿ ಪುನಶ್ಚೇತನ ಶಿಬಿರದ ಮೂಲಕ ಪುನಃ ಚೈತನ್ಯ ಪಡೆದು ಮನ ಮನೆ ಬೆಳಗುವುದರ ಮೂಲಕ ಆದರ್ಶ ಶಿಕ್ಷಕರಾಗಿ ಆಕರ್ಷಣೆಯಿಂದ ಮಕ್ಕಳನ್ನು ತನ್ನೆಡೆಗೆ ಸೆಳೆದು, ಸಂಸ್ಕಾರ ಸಂಸ್ಕøತಿಯನ್ನು ತುಂಬುವ ಕೆಲಸವನ್ನು ಶಿಕ್ಷಕರು ಮಾಡುವಂತಾಗಲೆಂದು ಆಶೀರ್ವದಿಸಿದರು.
ಸಂಸ್ಕøತ ಭಾರತೀ ಪ್ರಾಂತಾಧ್ಯಕ್ಷ ವಿದ್ವಾನ್ ವಿ.ಜೆ.ಹೆಗಡೆ ಗುಡ್ಗೆ ಮಾತನಾಡಿ ಹಸನ್ಮುಖಿಗಳಾದ ಸಂಸ್ಕøತ ಶಿಕ್ಷಕರು ಭಾಷೆಯಲ್ಲಿ ಸಂಸ್ಕøತ ಭಾಷೆಯಲ್ಲಿರುವ ಸರಳತೆ ಮತ್ತು ವೈಜ್ಞಾನಿಕತೆ ವ್ಯಾಕರಣ ಪಠ್ಯಪುಸ್ತಕ ಸಂಬಂಧಿಸಿದ ಎಲ್ಲ ರೀತಿಯ ಪಾಠದ ವಿಮರ್ಶೆಗಳು ನೆಡಯುವಂತಾಗಬೇಕು. ಜ್ಞಾನ ಕಾಕ್ಷಿಗಳಾದ ಶಿಕ್ಷಕರು ಇನ್ನು ನಿರಂತರ ಕಲಿಯುತ ಕಲಿಸುವ ಕೆಲಸವನ್ನು ಆದರ್ಶವಾಗಿ ಮಾಡುವುದೆ ಆದರ್ಶ ಶಿಕ್ಷಕನ ಆತ್ಮನಂದ. ಅದನ್ನು ಎಲ್ಲಾ ಶಿಕ್ಷಕರು ಈಡೇರಿಸುತ್ತಾರೆ ಎನ್ನುವ ಭರವಸೆ ಪ್ರಶಿಕ್ಷಕರಿಗೆ ಇದೆ. ನಾವು ಮಣ್ಣಿನ ಮುದ್ದೆಗಳಾಗದೆ ಪ್ರಕಾಶವನ್ನು ನೀಡುವ ಮಣಿಗಳಾಗೋಣ ಎಂದರು.
ಸಭಾಕಾರ್ಯಕ್ರಮದಲ್ಲಿ ಬಂಗಾರಮಕ್ಕಿಯ `ಸವೇದ ಸಂಸ್ಕøತ ಪಾಠಶಾಲೆ’ ವಿದ್ಯಾರ್ಥಿಗಳು ವೇದಘೋಷವನ್ನು ಶೃಶವ್ಯವಾಗಿ ನಡೆಸಿದರು.
ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್, ಸಂಸ್ಕøತ ಭಾರತೀ ಉತ್ತರ ಪ್ರಾಂತ ಸಂಘಟನಾ ಮಂತ್ರಿ ವಿದ್ವಾನ್ ರಾಮಕೃಷ್ಣ, ವಿದ್ವಾನ್ ಗಣಪತಿ ಗಾಂವ್ಕರ್ ಯಲ್ಲಾಪುರ, ಕಲ್ಬೇಷ್ ನಾಯ್ಕ, ಶಿಕ್ಷಕರಾದ ಇಂಚಲ ಬೆಳಗಾವಿ ಇತರರು ಉಪಸ್ಥಿತರಿದ್ದರು.
ಕರ್ನಾಟಕದ ಸಂಸ್ಕøತ ವಿಶ್ವವಿದ್ಯಾಲಯದ ಶಿಬಿರ ಮುಖ್ಯ ರುವಾರಿ ರಾಜಶೇಖರ್ ಸ್ವಾಗತಿಸಿದರು. ಮಹಾಂತೇಶ್ ಶೃಶವ್ಯವಾಗಿ ಪ್ರಾರ್ಥನಾ ಗೀತೆ ಹಾಡಿದರು. ಜಗದೀಶ್ ಮತ್ತು ವಿಜಯ್ ಕುಮಾರ್ ತಮ್ಮ ಅನುಭವ ಕಥನವನ್ನು ನುಡಿದರು. ರಾಜ್ಯದ ಎಲ್ಲಾ ವಿಷಯ ಪರಿವೀಕ್ಷಕರು, ವಿಭಾಗ ಸಂಯೋಜಕರು, ಅನೇಕ ಪ್ರಾಚಾರ್ಯರು ಹಾಗೂ ರಾಜ್ಯದ ಹಾಗೂ ವಿವಿಧ ಜಿಲ್ಲೆಗಳಿಂದ 81 ಸಂಸ್ಕøತ ಶಿಕ್ಷಕರು ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ್ದರು.
Leave a Comment